AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಾಗ್ ಪಾಸ್ವಾನ್​​ಗೆ ಹೆಲಿಕಾಪ್ಟರ್, ಪರಾಸ್​​ಗೆ ಹೊಲಿಗೆ ಯಂತ್ರ ಚಿಹ್ನೆ ನೀಡಿದ ಚುನಾವಣಾ ಆಯೋಗ

LJP: ಬಿಹಾರದ ತಾರಾಪುರ ಮತ್ತು ಕುಶೇಶ್ವರ ಆಸ್ಥಾನ್​​ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗಳ ಮುನ್ನ ಪಾಸ್ವಾನ್ ನೇತೃತ್ವದ ಬಣವನ್ನು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಎಂದು ಗುರುತಿಸಲಾಗುತ್ತದೆ.

ಚಿರಾಗ್ ಪಾಸ್ವಾನ್​​ಗೆ ಹೆಲಿಕಾಪ್ಟರ್, ಪರಾಸ್​​ಗೆ ಹೊಲಿಗೆ ಯಂತ್ರ ಚಿಹ್ನೆ ನೀಡಿದ ಚುನಾವಣಾ ಆಯೋಗ
ಚಿರಾಗ್ ಪಾಸ್ವಾನ್- ಪಶುಪತಿ ಪಾರಸ್
TV9 Web
| Edited By: |

Updated on: Oct 05, 2021 | 4:00 PM

Share

ದೆಹಲಿ: ಚುನಾವಣಾ ಆಯೋಗವು ಮಂಗಳವಾರ ಲೋಕ ಜನಶಕ್ತಿ ಪಕ್ಷದ (LJP) ಬಣಗಳಿಗೆ ಹೊಸ ಚಿಹ್ನೆಗಳನ್ನು ನೀಡಿದೆ. ದಿವಂಗತ ರಾಮ್ ವಿಲಾಸ್ ಪಾಸ್ವಾನ್ (Ram Vilas Paswan) ಅವರ ಮಗ ಚಿರಾಗ್ ಪಾಸ್ವಾನ್ (Chirag Paswan) ಮತ್ತು ಪಾಸ್ವಾನ್ ಅವರ ಸಹೋದರ ಪಶುಪತಿ ಕುಮಾರ್ ಪರಾಸ್ (Pashupati Kumar Paras) ಅವರಿಗೆ ಚುನಾವಣಾ ಆಯೋಗ ಪಕ್ಷದ ಚಿಹ್ನೆ ನೀಡಿದೆ. ಬಿಹಾರದ ತಾರಾಪುರ ಮತ್ತು ಕುಶೇಶ್ವರ ಆಸ್ಥಾನ್​​ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗಳ ಮುನ್ನ ಪಾಸ್ವಾನ್ ನೇತೃತ್ವದ ಬಣವನ್ನು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಎಂದು ಗುರುತಿಸಲಾಗುತ್ತದೆ. ಈ ಪಕ್ಷಕ್ಕೆ  ‘ಹೆಲಿಕಾಪ್ಟರ್’ ಚಿಹ್ನೆ ನೀಡಲಾಗಿದೆ. ಅದೇ ವೇಳೆ ಪರಾಸ್ ಬಣಕ್ಕೆ ‘ಹೊಲಿಗೆ ಯಂತ್ರ’ ಚಿಹ್ನೆ ನೀಡಿದ್ದು ಇದು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಂದು ಗುರುತಿಸಲ್ಪಡುತ್ತದೆ.

ಎಲ್‌ಜೆಪಿಗೆ ‘ಬಂಗಲೆ’ ಚಿಹ್ನೆಯನ್ನು ಸ್ಥಗಿತಗೊಳಿಸಿದ ಮೂರು ದಿನಗಳ ನಂತರ ಚುನಾವಣಾ ಆಯೋಗದ ಈ ನಿರ್ಧಾರವು ಬಂದಿದ್ದು, ಮುಂಬರುವ ಉಪಚುನಾವಣೆಯಲ್ಲಿ ಪಾಸ್ವಾನ್ ಅಥವಾ ಪಾರಸ್ ಅವರಿಗೆ ಇದನ್ನು ಬಳಸಲು ಅವಕಾಶ ನೀಡುವುದಿಲ್ಲ.

ಈ ವರ್ಷದ ಆರಂಭದಲ್ಲಿ ಪಾಸ್ವಾನ್ ಮತ್ತು ಅವರ ಚಿಕ್ಕಪ್ಪ ಇಬ್ಬರೂ ಎಲ್‌ಜೆಪಿ ಮೇಲೆ ಹಕ್ಕು ಚಲಾಯಿಸಿದರು ಮತ್ತು ಪರಸ್ಪರ ‘ಹೊರಹಾಕುವ’ ಆದೇಶಗಳನ್ನು ಜಾರಿಗೊಳಿಸಿದ್ದರು. ಪರಾಸ್ (ಹಾಜಿಪುರ), ಚೌಧರಿ ಮೆಹಬೂಬ್ ಅಲಿ ಕೈಸರ್ (ಖಗರಿಯಾ), ವೀಣಾ ದೇವಿ (ವೈಶಾಲಿ), ರಾಜಕುಮಾರ ರಾಜ್ (ಸಮಸ್ತಿಪುರ) ಮತ್ತು ಚಂದನ್ ಸಿಂಗ್ (ನಾವಡಾ) – ಪಕ್ಷದ ಆರು ಸಂಸದರ ಪೈಕಿ ಐವರು ಎಂಪಿಗಳ ಉಚ್ಚಾಟನೆ ನಂತರ ಜೂನ್ ನಲ್ಲಿ ಪಕ್ಷವು ವಿಭಜನೆಯಾಯಿತು. ಚಿರಾಗ್ ಅವರ ಬದಲಿಗೆ ಪರಾಸ್‌ ಅವರನ್ನು ನಾಯಕರನ್ನಾಗಿ ಮಾಡಲಾಯಿತು.

ಮತ್ತೊಂದೆಡೆ, ಪಾಸ್ವಾನ್ ಜೂಮ್‌ನಲ್ಲಿ ಎಲ್‌ಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿದರು ಮತ್ತು ಐದು ‘ಬಂಡಾಯ’ ಸಂಸದರನ್ನು ಪಕ್ಷದಿಂದ ಹೊರಹಾಕುವುದಾಗಿ ಘೋಷಿಸಿದರು.

ಇದನ್ನೂ ಓದಿ: ಎಲ್​ಜೆಪಿ ಸಂಸದ ಪ್ರಿನ್ಸ್​ ರಾಜ್​ ಪಾಸ್ವಾನ್​ ವಿರುದ್ಧ ಅತ್ಯಾಚಾರ ಆರೋಪ; ಎಫ್​ಐಆರ್​ ದಾಖಲು

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ