AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಸ್ಸಾಂನಲ್ಲಿ ರೋಂಗಾಲಿ ಬಿಹು ಸಂಭ್ರಮದಲ್ಲಿ ಆನೆಗಳ ಓಟದ ಸ್ಪರ್ಧೆ; ಕ್ಯೂಟ್ ಆಗಿ ಓಡಿದ ಗಜಗಳು !

ಹಬ್ಬದ ಮೂರು ದಿನಗಳಲ್ಲಿ ಒಂದೊಂದು ದಿನವನ್ನೂ ಕೈಮಗ್ಗಗಳು, ಕೃಷಿ ಉಪಕರಣಗಳು, ಜಾನುವಾರುಗಳಿಗೆ ಮೀಸಲಾಗಿಟ್ಟು, ಅವುಗಳಿಗೆ ಸಂಬಂಧಪಟ್ಟಂತೆ ಆಚರಣೆಯೂ ಇರುತ್ತದೆ. ಪರಸ್ಪರರಿಗೆ ಉಡುಗೋರೆ ಕೊಟ್ಟುಕೊಳ್ಳುತ್ತಾರೆ.

Video: ಅಸ್ಸಾಂನಲ್ಲಿ ರೋಂಗಾಲಿ ಬಿಹು ಸಂಭ್ರಮದಲ್ಲಿ ಆನೆಗಳ ಓಟದ ಸ್ಪರ್ಧೆ; ಕ್ಯೂಟ್ ಆಗಿ ಓಡಿದ ಗಜಗಳು !
ಆನೆಗಳ ಓಟ
Follow us
TV9 Web
| Updated By: Lakshmi Hegde

Updated on: Apr 15, 2022 | 7:36 PM

ಅಸ್ಸಾಂ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಏಪ್ರಿಲ್​ 14ರಿಂದ ರೋಂಗಾಲಿ ಬಿಹು ಹಬ್ಬ ಶುರುವಾಗಿದ್ದು, ನಾಳೆಯವರೆಗೆ ಇದರ ಆಚರಣೆ ಇರುತ್ತದೆ. ಅಂದರೆ ನಮ್ಮಲ್ಲಿ ಯುಗಾದಿಯನ್ನು ಹೊಸವರ್ಷವೆಂದು ಆಚರಣೆ ಮಾಡಿದಂತೆ, ಅಲ್ಲಿನ ಜನರು ಈ ರೋಂಗಾಲಿ ಬಿಹುದಿಂದ ಹೊಸ ವರ್ಷ ಪ್ರಾರಂಭ ಎಂದು ಪರಿಗಣಿಸಿ, ಸಂಭ್ರಮದಿಂದ ಹಬ್ಬ ಮಾಡುತ್ತಾರೆ. ಈ ಹಬ್ಬದಂದು ಸಾಂಪ್ರದಾಯಿಕ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಸ್ವಲ್ಪ ವಿಭಿನ್ನವಾಗಿ ಅಸ್ಸಾಂನ ಶಿವಸಾಗರ ಎಂಬಲ್ಲಿ ಆನೆಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಬ್ಬದ ಆಚರಣೆಗಳಲ್ಲಿ ಸಾಮಾನ್ಯವಾಗಿ ಗೂಳಿಗಳ ಓಟ, ದನಗಳನ್ನು ಓಡಿಸುವುದು ಇತ್ಯಾದಿ ಸ್ಪರ್ಧೆಯನ್ನು ನಾವು ನೋಡುತ್ತೇವೆ. ಆದರೆ ಧಡೂತಿ ಶರೀರ ಹೊತ್ತು, ಗಾಂಭೀರ್ಯದ ನಡಿಗೆಗೆ ಹೆಸರಾಗಿರುವ ಆನೆಗಳ ನಡುವೆ ಓಟದ ಸ್ಪರ್ಧೆ ಆಯೋಜಿಸಿದ್ದು ವಿಶೇಷ ಎನ್ನಿಸಿದೆ. ಹಾಗೇ, ಇದರ ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಆನೆಗಳು ತಾ ಮುಂದೆ, ನಾ ಮುಂದೆ ಎನ್ನುತ್ತ ಓಡುವ ಕ್ಯೂಟ್ ದೃಶ್ಯವನ್ನು ನೋಡಬಹುದು.

ಈ ಬಿಹು ಮೂರು ದಿನಗಳ ಹಬ್ಬವಾದರೂ ಅಲ್ಲಿನ ಜನರು ವಾರದವರೆಗೆ ಸಂಭ್ರಮ ಆಚರಣೆ ಮಾಡುತ್ತಲೇ ಇರುತ್ತಾರೆ. ಈ ಮೂರು ದಿನಗಳಲ್ಲಿ ಒಂದೊಂದು ದಿನವನ್ನೂ ಕೈಮಗ್ಗಗಳು, ಕೃಷಿ ಉಪಕರಣಗಳು, ಜಾನುವಾರುಗಳಿಗೆ ಮೀಸಲಾಗಿಟ್ಟು, ಅವುಗಳಿಗೆ ಸಂಬಂಧಪಟ್ಟಂತೆ ಆಚರಣೆಯೂ ಇರುತ್ತದೆ. ಪರಸ್ಪರರಿಗೆ ಉಡುಗೋರೆ ಕೊಟ್ಟುಕೊಳ್ಳುತ್ತಾರೆ. ಹಾಗೇ, ಜಾನಪದ ಸಂಗೀತ, ನೃತ್ಯಗಳ ಪ್ರದರ್ಶನ ಭರ್ಜರಿಯಾಗಿ ನಡೆಯುತ್ತದೆ.  ರಾಜ್ಯಾದ್ಯಂತ ಸುಮಾರು 1200 ಬಿಹು ಸಮಿತಿಗಳಿದ್ದು, ಈ ಹಬ್ಬ ಆಚರಣೆಗೆಂದೇ ರಾಜ್ಯ ಸರ್ಕಾರ ಪ್ರತಿ ಸಮಿತಿಗೆ ತಲಾ 1.5 ಲಕ್ಷ ರೂಪಾಯಿ ನೀಡಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭೂಯಾನ್​ ಶರ್ಮಾ ಗುರುವಾರ ತಮ್ಮ ನಿವಾಸ ಜೋರ್ಹಾತ್​​ನಲ್ಲಿ ಬಿಹು ಆಚರಣೆ ಮಾಡಿದ್ದಾರೆ. ಅದರ ವಿಡಿಯೋವನ್ನೂ ಕೂಡ ಸಿಎಂ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದವ ಅರೆಸ್ಟ್​; ಏಪ್ರಿಲ್​ 16ರಂದು ಭಾರತಕ್ಕೆ ತಲುಪಲಿದೆ ಕಾರ್ತೀಕ್​ ಮೃತದೇಹ

ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ