AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತ ಬಾಲಕಿಯ ಫೋಟೊ ಟ್ವೀಟ್ ಪ್ರಕರಣ: ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್​​ಗೆ ಮತ್ತೊಂದು ಸಂಕಷ್ಟ

ಅಪ್ರಾಪ್ತ ಬಾಲಕಿಯ ಚಿತ್ರದ ಮೇಲೆ ಮಾಡಿದ ಕಾಮೆಂಟ್‌ಗಳು ಲೈಂಗಿಕ ಕಿರುಕುಳದ ಸ್ವರೂಪದಲ್ಲಿರುವ ಕಾಮೆಂಟ್‌ಗಳನ್ನು ಒಳಗೊಂಡಿವೆ . ಇವು ಪೋಕ್ಸೊ ಕಾಯಿದೆ, ಐಪಿಸಿ ಮತ್ತು ಐಟಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವಂತೆ ಕಂಡುಬಂದಿದೆ" ಎಂದು ಎನ್‌ಸಿಪಿಸಿಆರ್ ಹೇಳಿದೆ.

ಅಪ್ರಾಪ್ತ ಬಾಲಕಿಯ ಫೋಟೊ ಟ್ವೀಟ್ ಪ್ರಕರಣ: ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್​​ಗೆ ಮತ್ತೊಂದು ಸಂಕಷ್ಟ
ಮೊಹಮ್ಮದ್ ಜುಬೇರ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Oct 11, 2022 | 9:14 PM

Share

ದೆಹಲಿ: ಟ್ವಿಟರ್‌ನಲ್ಲಿ ಅಪ್ರಾಪ್ತ  ಬಾಲಕಿಯ ಫೋಟೋ ಟ್ವೀಟ್ ಮಾಡಿ ಬೆದರಿಕೆಗೆ ಕಾರಣವಾದ ಪ್ರಕರಣದಲ್ಲಿ ಫ್ಯಾಕ್ಟ್​​ಚೆಕರ್ ಮೊಹಮ್ಮದ್ ಜುಬೇರ್ (Mohammed Zubair) ವಿರುದ್ಧ ದಿಲ್ಲಿ ಪೊಲೀಸರು ದಾಖಲಿಸಿರುವ  “ನಾನ್ ಕಾಗ್ನಿಸೇಬಲ್ ಅಪರಾಧ” ಎಂಬ ಹೇಳಿಕೆಯು “ತಪ್ಪು” ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ಇಂದು ದೆಹಲಿ ಹೈಕೋರ್ಟ್‌ಗೆ  (Delhi High Court)ತಿಳಿಸಿದೆ. ದೆಹಲಿ ಪೊಲೀಸರ ನಿಲುವು ಅಧಿಕಾರಿಗಳ “ಸಾಂದರ್ಭಿಕ ವರ್ತನೆ” ಸೂಚಿಸುತ್ತದೆ. ಪ್ರಕರಣದ ಸಂಪೂರ್ಣ ತನಿಖೆಗಾಗಿ ಪೊಲೀಸರಿಗೆ ಆದೇಶಿಸುವಂತೆ ಮತ್ತು ಶೀಘ್ರದಲ್ಲೇ ಅದನ್ನು ಪೂರ್ಣಗೊಳಿಸಲು ಮಕ್ಕಳ ಹಕ್ಕುಗಳ ಸಂಸ್ಥೆ ಎನ್‌ಸಿಪಿಸಿಆರ್ ಹೈಕೋರ್ಟ್ ಅನ್ನು ಕೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 7 ರಂದು ನಡೆಯಲಿದೆ.  ಟ್ವಿಟರ್‌ನಲ್ಲಿ ಬಾಲಕಿಗೆ ಬೆದರಿಕೆ ಹಾಕಿದ್ದಕ್ಕಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಪೊಲೀಸರು ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎನ್‌ಸಿಪಿಸಿಆರ್‌ ಈ ವಿಷಯವನ್ನು ಪೊಲೀಸರಿಗೆ ತಿಳಿಸಿತ್ತು. ಎನ್‌ಸಿಪಿಸಿಆರ್‌ನ ದೂರಿನಲ್ಲಿ ಬಾಲಕಿಯ ಮತ್ತು ಆಕೆಯ ತಂದೆಯ ಫೋಟೋವನ್ನು ಉಲ್ಲೇಖಿಸಲಾಗಿದೆ, ಬಾಲಕಿಯ ತಂದೆಯೊಂದಿಗೆ ಆನ್‌ಲೈನ್ ಜಗಳದ ಸಮಯದಲ್ಲಿ ಜುಬೇರ್ ಬಾಲಕಿಯ ಫೋಟೊ ಟ್ವೀಟ್ ಮಾಡಿದ್ದಾರೆ.

ಜುಬೈರ್ ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂದು ಮೇ ತಿಂಗಳಲ್ಲಿ ಸಲ್ಲಿಸಿದ ಸ್ಥಿತಿ ವರದಿಯಲ್ಲಿ ಪೊಲೀಸರು ಒದಗಿಸಿದ ಮಾಹಿತಿಯು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಹೇಳಿದೆ.

ಸತ್ಯಾಂಶಗಳನ್ನು ಮರೆಮಾಚುವ ಅರ್ಜಿದಾರರ ದುರುದ್ದೇಶ ಎದ್ದು ಕಾಣುತ್ತಿದ್ದು, ಈ ಪ್ರಕರಣದ ತನಿಖೆಯಲ್ಲಿ ಗಂಭೀರ ವಿಳಂಬಕ್ಕೆ ಕಾರಣವಾಗುತ್ತಿದೆ. ಅರ್ಜಿದಾರರ ವಿರುದ್ಧ ಯಾವುದೇ ಕಾಗ್ನಿಸೇಬಲ್ ಅಪರಾಧವನ್ನು ಮಾಡಲಾಗಿಲ್ಲ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಸಲ್ಲಿಕೆಯೂ ಸಹ ತಪ್ಪಾಗಿದೆ ಮತ್ತು ಈ ಪ್ರಕರಣದಲ್ಲಿ ಪೊಲೀಸರ ಸಾಂದರ್ಭಿಕ ವರ್ತನೆಯನ್ನು ಸೂಚಿಸುತ್ತದೆ ಎಂದು ಎನ್‌ಸಿಪಿಸಿಆರ್ ದೆಹಲಿ ಹೈಕೋರ್ಟ್‌ಗೆ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಹುಡುಗಿಯ ಚಿತ್ರವನ್ನು ರೀಟ್ವೀಟ್ ಮಾಡುವುದರಿಂದ ಆಕೆಯ ತಂದೆಯ ಮೂಲಕ ಆಕೆಯ ಗುರುತನ್ನು ಬಹಿರಂಗವಾಯಿತು. ಆಕೆಯ ಸುರಕ್ಷತೆ ಜತೆ ರಾಜಿ ಮಾಡಿಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳಕ್ಕೆ ಕಾರಣವಾಗಿದೆ ಎಂದು NCPCR ಹೇಳಿದೆ.

ಅಪ್ರಾಪ್ತ ಬಾಲಕಿಯ ಚಿತ್ರದ ಮೇಲೆ ಮಾಡಿದ ಕಾಮೆಂಟ್‌ಗಳು ಲೈಂಗಿಕ ಕಿರುಕುಳದ ಸ್ವರೂಪದಲ್ಲಿರುವ ಕಾಮೆಂಟ್‌ಗಳನ್ನು ಒಳಗೊಂಡಿವೆ . ಇವು ಪೋಕ್ಸೊ ಕಾಯಿದೆ, ಐಪಿಸಿ ಮತ್ತು ಐಟಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವಂತೆ ಕಂಡುಬಂದಿದೆ” ಎಂದು ಎನ್‌ಸಿಪಿಸಿಆರ್ ಹೇಳಿದೆ. ಜುಬೇರ್ ಟ್ವೀಟ್ ಅನ್ನು ಅಳಿಸಿಲ್ಲ ಅಥವಾ ನಿಂದನೀಯ ಕಾಮೆಂಟ್‌ಗಳನ್ನು ಮಾಡಿದ ಟ್ವಿಟರ್ ಬಳಕೆದಾರರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಅದು ಹೇಳಿದೆ.

“ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ವಿರುದ್ಧ ಮಾಡಿದ ಉಲ್ಲಂಘನೆ ಮತ್ತು ದೆಹಲಿ ಪೊಲೀಸರು ಮೇ 14, 2022 ರ ಸ್ಥಿತಿಯ ವರದಿಯಲ್ಲಿ ಒದಗಿಸಿದ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ NCPCR ಈ ನ್ಯಾಯಾಲಯವನ್ನು ಕೋರಿದೆ ಎಂದು ಅಫಿಡವಿಟ್ ಹೇಳಿದೆ.

ಪ್ರಕರಣದಲ್ಲಿ ಜುಬೇರ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಪೊಲೀಸರಿಗೆ ಹೇಳಿತ್ತು. ಅಲ್ಲದೇ ತನಿಖೆಯಲ್ಲಿ ಪೊಲೀಸರೊಂದಿಗೆ ಸಹಕರಿಸುವಂತೆ ಟ್ವಿಟರ್ ಇಂಡಿಯಾಗೆ ಸೂಚಿಸಿದೆ. ಈ ಎಫ್‌ಐಆರ್ ಅನ್ನು “ಸಂಪೂರ್ಣವಾಗಿ ಕ್ಷುಲ್ಲಕ ದೂರು” ಎಂದಿದ್ದಾರೆ ಜುಬೇರ್. ಜುಬೇರ್ ಬಗ್ಗೆ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ನಿಂದನೆ ಮಾಡಿ ಟ್ರೋಲ್ ಮಾಡಿದ್ದಾರೆ. ಇದಾದ ಜುಬೇರ್ ಆ ವ್ಯಕ್ತಿ ತನ್ನ ಅಪ್ರಾಪ್ತ ಮಗಳೊಂದಿಗೆ ನಿಂತಿರುವ ಫೋಟೋ ಟ್ವೀಟ್ ಮಾಡಿದ್ದು ಬಾಲಕಿಯ ಫೋಟೊ ಬ್ಲರ್ ಮಾಡಲಾಗಿತ್ತು ಎಂದು ಜುಬೇರ್ ವಕೀಲರು ಹೇಳಿದ್ದಾರೆ.

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು