AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check | ಮಿಯಾ ಖಲೀಫಾ ಪೋಸ್ಟರ್​ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್

Fact Check ರಾಹುಲ್ ಗಾಂಧಿ ಅವರ 37ನೇ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪೋಸ್ಟರ್​ಗೆ ಕೇಕ್ ತಿನ್ನಿಸುವ ಫೋಟೊವನ್ನು ಫೋಟೊಶಾಪ್​ನಲ್ಲಿ ಮಾರ್ಪಾಡು ಮಾಡಿ ಮಿಯಾ ಖಲೀಫಾ ಅವರ ಫೋಟೊ ಇರಿಸಲಾಗಿದೆ.

Fact Check | ಮಿಯಾ ಖಲೀಫಾ ಪೋಸ್ಟರ್​ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್
ಫೋಟೊಶಾಪ್ ಮಾಡಿದ ಮಿಯಾ ಖಲೀಫಾ ಪೋಸ್ಟರ್ ಇರುವ ವೈರಲ್ ಚಿತ್ರ ಮತ್ತು ರಾಹುಲ್ ಗಾಂಧಿ ಪೋಸ್ಟರ್ ಇರುವ ಅಸಲಿ ಚಿತ್ರ
ರಶ್ಮಿ ಕಲ್ಲಕಟ್ಟ
| Edited By: |

Updated on: Feb 07, 2021 | 9:07 PM

Share

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ನಂತರ ಮಿಯಾ ಖಲೀಫಾ ಸುದ್ದಿಯಲ್ಲಿದ್ದಾರೆ. ರೈತರ ಪರವಾಗಿ ಟ್ವೀಟ್ ಮಾಡಿದ್ದಕ್ಕಾಗಿ ಮಿಯಾ ಟ್ರೋಲಿಗೊಳಗಾಗಿದ್ದು ಮಾತ್ರವಲ್ಲದೆ ಅವರ ಫೋಟೊಶಾಪ್ ಫೋಟೊ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ಸದಸ್ಯ ಸುರೇಂದ್ರ ಪೂನಿಯಾ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿ ಟ್ವೀಟ್ ಮಾಡಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಿಯಾ ಖಲೀಫಾ ಅವರ ಪೋಸ್ಟರ್ ಗೆ ಕೇಕ್ ತಿನ್ನಿಸುವ ಫೋಟೊ ಶೇರ್ ಮಾಡಿ  ಇದು ರಾಹುಲ್ ಗಾಂಧಿಯವರ ಕಾಂಗ್ರೆಸ್. ಆಮೇಲೆ ಇವಿಎಂ ಹ್ಯಾಕ್ ಆಯ್ತು ಅಂತಾರೆ ಎಂದು ಬರೆದಿದ್ದರು.

Surendra Poonia tweet

ಸುರೇಂದ್ರ ಪೂನಿಯಾ ಟ್ವೀಟ್

ಬಿಜೆಪಿ ಕಾರ್ಯಕರ್ತ ರಾಜ್ ಆನಂದ್ ಸಿಂಗ್, ಪಿಂಕೂ ಶುಕ್ಲಾ ಮೊದಲಾದವರು ಇದೇ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದರು.

Pinku shukla tweet

ಪಿಂಕು ಶುಕ್ಲಾ ಟ್ವೀಟ್

ಫೋಟೊ ಶಾಪ್ ಮಾಡಿದ ಚಿತ್ರ ಕಾಂಗ್ರೆಸ್ ಕಾರ್ಯಕರ್ತರು ಮಿಯಾ ಖಲೀಫಾ ಪೋಸ್ಟರ್ ಗೆ ಕೇಕ್ ತಿನ್ನಿಸುವ ಫೋಟೊವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದರೆ ಈ ಫೋಟೊ ಫೋಟೊಶಾಪ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.  ರಾಹುಲ್ ಗಾಂಧಿ ಪೋಸ್ಟರ್​ಗೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ನಿಸುವ ಫೋಟೊ ಇದಾಗಿತ್ತು.

Rahul Gandhi

ರಾಹುಲ್ ಗಾಂಧಿ ಹುಟ್ಟುಹಬ್ಬದ ಚಿತ್ರ

ಈ ವೈರಲ್ ಫೋಟೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್​ಚೆಕ್ ಮಾಡಿದ್ದು ರಾಹುಲ್ ಗಾಂಧಿ ಪೋಸ್ಟರ್​ಗೆ ಕೇಕ್ ತಿನ್ನಿಸುತ್ತಿರುವ ಫೋಟೊ ಜೂನ್ 19, 2007ರಲ್ಲಿ ತೆಗೆದದ್ದಾಗಿದೆ. ರಾಹುಲ್ ಗಾಂಧಿ ಅವರ 37ನೇ ಹುಟ್ಟುಹಬ್ಬದ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್​ಗೆ ಕೇಕ್ ತಿನ್ನಿಸುವ ಫೋಟೊವನ್ನು ಫೋಟೊಗ್ರಾಫರ್ ರವೀಂದ್ರನ್ ಸೆರೆ ಹಿಡಿದಿದ್ದು ಗೆಟ್ಟಿ ಇಮೇಜೆಸ್​ನಲ್ಲಿ ಈ ಫೋಟೊ ಇದೆ.

Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ