AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೊಂದು ಬಾಕಿಯಿತ್ತು! ದೇಶದ ನಂ.1 ಬ್ಯಾಂಕ್​ ಹೆಸರಲ್ಲಿ ನಕಲಿ ಬ್ರಾಂಚ್​

ಚೆನ್ನೈ: ಬ್ಯಾಂಕ್​ ಸಿಬ್ಬಂದಿಯ ಸೋಗಿನಲ್ಲಿ ಗ್ರಾಹಕರಿಗೆ ಕಾಲ್ ಮಾಡಿ ಅವರ ಎಟಿಎಂ ಪಿನ್​ ಅಥವಾ ಕ್ರೆಡಿಟ್​ ಕಾರ್ಡ್​ ಮಾಹಿತಿ ಪಡೆದು ಮೋಸಮಾಡುವುದನ್ನು ನಾವೆಲ್ಲರೂ ಸಾಕಷ್ಟು ಬಾರಿ ನೋಡಿದ್ದೀವಿ. ಆದರೆ, ಪ್ರತಿಷ್ಠಿತ ಬ್ಯಾಂಕ್​ನ ಹೆಸರು ಬಳಸಿಕೊಂಡು ನಕಲಿ ಬ್ರಾಂಚ್​ ತೆರೆದು ಸಾವಿರಾರು ಜನರಿಗೆ ನಾಮ ಹಾಕಿರೋ ಬಗ್ಗೆ ನೀವೆಂದಾದರೂ ಕೇಳಿದ್ದೀರಾ? ಹೌದು, ಇದು ನಂಬಲು ಕೊಂಚ ಕಷ್ಟವಾದರೂ ಇಂಥ ಒಂದು ಘಟನೆ ತಮಿಳುನಾಡಿನಲ್ಲಿರುವ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ದೇಶದ ಪ್ರತಿಷ್ಠಿತ ಭಾರತೀಯ ಸ್ಟೇಟ್​ ಬ್ಯಾಂಕ್​ನ (SBI) ಹೆಸರು ಬಳಸಿಕೊಂಡು […]

ಇದೊಂದು ಬಾಕಿಯಿತ್ತು! ದೇಶದ ನಂ.1 ಬ್ಯಾಂಕ್​ ಹೆಸರಲ್ಲಿ ನಕಲಿ ಬ್ರಾಂಚ್​
KUSHAL V
| Updated By: |

Updated on:Jul 12, 2020 | 5:10 PM

Share

ಚೆನ್ನೈ: ಬ್ಯಾಂಕ್​ ಸಿಬ್ಬಂದಿಯ ಸೋಗಿನಲ್ಲಿ ಗ್ರಾಹಕರಿಗೆ ಕಾಲ್ ಮಾಡಿ ಅವರ ಎಟಿಎಂ ಪಿನ್​ ಅಥವಾ ಕ್ರೆಡಿಟ್​ ಕಾರ್ಡ್​ ಮಾಹಿತಿ ಪಡೆದು ಮೋಸಮಾಡುವುದನ್ನು ನಾವೆಲ್ಲರೂ ಸಾಕಷ್ಟು ಬಾರಿ ನೋಡಿದ್ದೀವಿ. ಆದರೆ, ಪ್ರತಿಷ್ಠಿತ ಬ್ಯಾಂಕ್​ನ ಹೆಸರು ಬಳಸಿಕೊಂಡು ನಕಲಿ ಬ್ರಾಂಚ್​ ತೆರೆದು ಸಾವಿರಾರು ಜನರಿಗೆ ನಾಮ ಹಾಕಿರೋ ಬಗ್ಗೆ ನೀವೆಂದಾದರೂ ಕೇಳಿದ್ದೀರಾ? ಹೌದು, ಇದು ನಂಬಲು ಕೊಂಚ ಕಷ್ಟವಾದರೂ ಇಂಥ ಒಂದು ಘಟನೆ ತಮಿಳುನಾಡಿನಲ್ಲಿರುವ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

ದೇಶದ ಪ್ರತಿಷ್ಠಿತ ಭಾರತೀಯ ಸ್ಟೇಟ್​ ಬ್ಯಾಂಕ್​ನ (SBI) ಹೆಸರು ಬಳಸಿಕೊಂಡು ಕಡಲೂರು ಜಿಲ್ಲೆಯ ಪನ್ರುತ್ತಿಯಲ್ಲಿ ಮೂವರು ಆಸಾಮಿಗಳು ನಕಲಿ ಬ್ರಾಂಚ್​ ನಡೆಸಿ ಜನರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ, ಆರೋಪಿಗಳು ಕಳೆದ ಮೂರು ತಿಂಗಳಿಂದ ನಕಲಿ ಶಾಖೆಯನ್ನು ನಡೆಸುತ್ತಿದ್ದರೂ ಯಾರಿಗೂ ಅನುಮಾನವೇ ಬಂದಿಲ್ಲ!

ನಕಲಿ SBI ಶಾಖೆ ಪತ್ತೆಯಾಗಿದ್ದಾದ್ರೂ ಹೇಗೆ? ಅಂದ ಹಾಗೆ, ಈ ನಕಲಿ ಶಾಖೆಯು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಆಕಸ್ಮಿಕವಾಗಿ. ಹೌದು, ನಕಲಿ ಶಾಖೆಯಲ್ಲಿ ಬ್ಯಾಂಕ್​ ಖಾತೆ ತೆರೆದಿದ್ದ ಗ್ರಾಹಕರೊಬ್ಬರು ಬ್ಯಾಂಕ್​ ವ್ಯವಹಾರದ ವಿಚಾರವಾಗಿ ಮತ್ತೊಂದು SBI ಬ್ಯಾಂಕ್​ನ ಬ್ರಾಂಚ್​ ಮ್ಯಾನೇಜರ್​ ಜೊತೆ ಒಮ್ಮೆ ಚರ್ಚಿಸುತ್ತಿದ್ದರಂತೆ. ಈ ನಡುವೆ ಆ ಬ್ಯಾಂಕ್​ ಮ್ಯಾನೇಜರ್​ಗೆ ಈ ನಕಲಿ ಶಾಖೆಯ ಬಗ್ಗೆ ಅನುಮಾನ ಹುಟ್ಟಿದೆ. ಕೂಡಲೇ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ತದ ನಂತರ ನಕಲಿ ಶಾಖೆಗೆ ಅಧಿಕಾರಿಗಳು ಭೇಟಿಕೊಟ್ಟ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು ನಕಲಿ ಬ್ಯಾಂಕ್​ ತೆರೆಯಲು ಕಾರಣವೇನು? ಕೂಡಲೇ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಬ್ಯಾಂಕ್​ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ನಡುವೆ, ಅರೆಸ್ಟ್​ ಆದ ಮೂವರಲ್ಲಿ ಓರ್ವ SBIನಲ್ಲಿ ಕೆಲಸ ನಿರ್ವಹಿಸಿದ್ದ ಮಾಜಿ ಸಿಬ್ಬಂದಿಯ ಮಗನಂತೆ. ಅಚ್ಚರಿಯ ಸಂಗತಿಯೆಂದರೆ, ತಂದೆಯ ನಿಧನದ ನಂತರ ಅವರ ಕೆಲಸಕ್ಕೆ ಈತ ಅರ್ಜಿ ಹಾಕಿದ್ದ. ಆದರೆ, ಇದಕ್ಕೆ ಬ್ಯಾಂಕ್​ ಆಡಳಿತ ಮಂಡಳಿ ಸ್ಪಂದಿಸಿರಲಿಲ್ಲ. ಹಾಗಾಗಿ, ಸಿಟ್ಟಿಗೆದ್ದ ಆರೋಪಿ ತಾನೇ ಯಾಕೆ ಬ್ಯಾಂಕ್​ ಶುರುಮಾಡಬಾರದು ಎಂದು ಯೋಚಿಸಿ ಕೃತ್ಯಕ್ಕೆ ಕೈಹಾಕಿದ್ದಾನೆ.

ಚಿಕ್ಕವನಿದ್ದಾಗ ತಂದೆಯೊಟ್ಟಿಗೆ ಬ್ಯಾಂಕ್​ಗೆ ಭೇಟಿಕೊಡುತ್ತಿದ್ದ ಆರೋಪಿ ಬ್ಯಾಂಕ್​ ವ್ಯವಹಾರದ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡಿದ್ದ. ಜೊತೆಗೆ, SBI ಬ್ಯಾಂಕ್​ನ ಚಲಾನ್​, ರಬ್ಬರ ಸ್ಟಾಂಪ್​ ಮತ್ತು ಇತರೆ ದಾಖಲೆಗಳನ್ನು ಮುದ್ರಿಸುತ್ತಿದ್ದ ಮತ್ತೊಬ್ಬ ಆರೋಪಿಯ ಜೊತೆ ಕೈಜೋಡಿಸಿ ನಕಲಿ ಬ್ರಾಂಚ್​​ಗೆ ಬೇಕಾದ ಅಗತ್ಯ ವಸ್ತುಗಳನ್ನು ತಯಾರಿಸಿ ಶಾಖೆಯ ದೈನಂದಿನ ಚಟುವಟಿಕೆಗಳನ್ನ ಯಾವುದೇ ರೀತಿ ಸಂಶಯ ಬಾರದ ಹಾಗೆ ನಡೆಸುತ್ತಿದ್ದನಂತೆ.

Published On - 3:41 pm, Sun, 12 July 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ