AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರಶೋಕಂ ನಿರಂತರಂ: ಸತ್ತ ಮಗನಿಗೆ ಮನೆಯಲ್ಲಿ ದೇವಸ್ಥಾನ ಕಟ್ಟಿದ ಪಾಲಕರು: ದಿನಾ ಪೂಜೆ ಸಲ್ಲಿಸಿ ಅದರಲ್ಲಿಯೇ ಮಗನ ಕಾಣುತ್ತಾರೆ

ಆದಿನಾರಾಯಣ ಮತ್ತು ನಾಗಲಕ್ಷ್ಮಿ ಪಾಮಿಡಿ ಪಟ್ಟಣದವರು. ಇವರ ಒಬ್ಬನೇ ಮಗ ಗಂಗಾಧರ. ತಂದೆ ಆದಿನಾರಾಯಣ ರೈಲ್ವೇಯಲ್ಲಿ ಗೇಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ಪಡೆದು ಮಗ ಗಂಗಾಧರನಿಗೆ ಕೆಲಸ ಕೊಟ್ಟರು. ಆದರೆ ಕೆಲವು ವರ್ಷಗಳ ಹಿಂದೆ ಗಂಗಾಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಆದಿನಾರಾಯಣ ಮತ್ತು ನಾಗಲಕ್ಷ್ಮಿ ತಮ್ಮ ಮಗ ಸತ್ತರೂ ಜೊತೆಯಲ್ಲಿಯೇ ಇರಲು ನಿರ್ಧರಿಸಿದರು.

ಪುತ್ರಶೋಕಂ ನಿರಂತರಂ: ಸತ್ತ ಮಗನಿಗೆ ಮನೆಯಲ್ಲಿ ದೇವಸ್ಥಾನ ಕಟ್ಟಿದ ಪಾಲಕರು: ದಿನಾ ಪೂಜೆ ಸಲ್ಲಿಸಿ ಅದರಲ್ಲಿಯೇ ಮಗನ ಕಾಣುತ್ತಾರೆ
ಪುತ್ರಶೋಕಂ ನಿರಂತರಂ: ಸತ್ತ ಮಗನಿಗೆ ಮನೆಯಲ್ಲಿ ದೇವಸ್ಥಾನ ಕಟ್ಟಿದ ಪಾಲಕರು
ಸಾಧು ಶ್ರೀನಾಥ್​
|

Updated on: Sep 13, 2023 | 1:51 PM

Share

ಅನಂತಪುರ, ಸೆಪ್ಟೆಂಬರ್ 13: ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಹೃದಯದಲ್ಲಿ ನೋಡಿಕೊಳ್ಳುತ್ತಾರೆ. ಅವರನ್ನು ಸಾಕಲು ಸಾಧ್ಯವಾಗದಿದ್ದರೂ, ಸಾಲ ಸೋಲ ಮಾಡಿ ಕಷ್ಟಪಟ್ಟು ಓದಿ ಎತ್ತರಕ್ಕೆ ಬೆಳೆಸುತ್ತಾರೆ. ಅವರ ಮೇಲೆ ಹೆಚ್ಚು ನಿರೀಕ್ಷೆಗಳನ್ನಾಗಲಿ ಭರವಸೆಗಳನ್ನಾಗಲಿ ಇಟ್ಟುಕೊಳ್ಳದೆ ಬದುಕುತ್ತಾರೆ. ಅಂತಹ ಮಗು ಎಲ್ಲರಿಂದ ದೂರವಾಗಿ ಬಾರದ ಲೋಕಕ್ಕೆ ಹೋಗಿಬಿಟ್ಟರೆ… ತಂದೆ-ತಾಯಿಗಳ ನೋವು ಹೇಳತೀರದು. ಪಾಲಕರ ಕರ್ಮಗಳನ್ನು ಮಾಡಬೇಕಾದ ಮಗು ಅವರಿಗಿಂತ ಮೊದಲೇ ಇಹಲೋಕ ತ್ಯಜಿಸಿದರೆ ಆ ನೋವು ಅವರನ್ನು ಜೀವನದುದ್ದಕ್ಕೂ ಕಾಡುತ್ತದೆ. ಪುತ್ರಶೋಕಂ ನಿರಂತರಂ ಅನ್ನುವುದು ಇದಕ್ಕೇ. ಅದೇ ರೀತಿ ಮಗನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಪಾಲಕರು ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ. ಕಣ್ಣೆದುರೇ ಸಾಕಿದ ಕಿರಿಯ ಮಗನ ಮರಣದ ನಂತರ ತಂದೆ-ತಾಯಿಗಳು (Father mother) ತಮ್ಮ ಮಗುವಿಗೆ ಮನಃಪೂರ್ವಕವಾಗಿ ಪೂಜೆ ಸಲ್ಲಿಸುವುದಲ್ಲದೆ, ತಮ್ಮ ಮನೆಯಲ್ಲಿ ದೇವಾಲಯವನ್ನೂ ಕಟ್ಟಿದ್ದಾರೆ. ಸತ್ತ ಮಗುವನ್ನು ಮೂರ್ತಿಯ ರೂಪದಲ್ಲಿ (Son Temple) ನೋಡುತ್ತಾ.. ತನ್ನ ನೆನಪುಗಳನ್ನು ಜೀವಂತವಾಗಿರಿಸಿಕೊಂಡು ಅವರ ನಡುವೆ ಆತನ ಇರುವಿಕೆಯ ಭಾವದಿಂದ ಬದುಕುತ್ತಾ.. ಅವನನ್ನು ಪೂಜಿಸುತ್ತಾರೆ. ಸಂಪೂರ್ಣ ವಿವರಗಳನ್ನು ನೋಡುವುದಾದರೆ..

ಆದಿನಾರಾಯಣ ಮತ್ತು ನಾಗಲಕ್ಷ್ಮಿ ಇಬ್ಬರೂ ಅನಂತಪುರ ಜಿಲ್ಲೆಯ ಪಾಮಿಡಿ ಪಟ್ಟಣದ ನಿವೃತ್ತ ನೌಕರರು. ಇವರ ಒಬ್ಬನೇ ಮಗ ಗಂಗಾಧರ. ತಂದೆ ಆದಿನಾರಾಯಣ ರೈಲ್ವೇಯಲ್ಲಿ ಗೇಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ಪಡೆದು ಮಗ ಗಂಗಾಧರನಿಗೆ ಕೆಲಸ ಕೊಟ್ಟರು. ಆದರೆ ಕೆಲವು ವರ್ಷಗಳ ಹಿಂದೆ ಗಂಗಾಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಆದಿನಾರಾಯಣ ಮತ್ತು ನಾಗಲಕ್ಷ್ಮಿ ತಮ್ಮ ಮಗ ಸತ್ತರೂ ಜೊತೆಯಲ್ಲಿಯೇ ಇರಲು ನಿರ್ಧರಿಸಿದರು.

Also Read: ತಂದೆ ಜೊತೆ ಹೋಗುವಾಗ ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು

ಪಾಮಿಡಿ ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಗಂಗಾಧರನಿಗೆ ದೇವಸ್ಥಾನ ಕಟ್ಟಿದರು. ತಮ್ಮ ಮೃತ ಮಗನ ವಿಗ್ರಹವನ್ನು ತೆನಾಲಿಯಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶೇಷವಾಗಿ ತಯಾರಿಸಲಾಗಿದೆ. ಅವರು ಪ್ರತಿದಿನ ವಿಗ್ರಹಕ್ಕೆ ಬಟ್ಟೆಗಳನ್ನು ಬದಲಾಯಿಸುತ್ತಾರೆ. ಅಲ್ಲದೇ ಈ ದಂಪತಿ ತಮ್ಮ ಪುತ್ರ ಗಂಗಾಧರ್ ಹೆಸರಿನಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಿ ಮಗುವಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್