AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Niranjan Hiranandani: 10 ಗಂಟೆಗಳ ಕಾಲ ಕೈಗಾರಿಕೋದ್ಯಮಿ ನಿರಂಜನ್ ಹೀರಾನಂದಾನಿ ವಿಚಾರಣೆ ನಡೆಸಿದ ಇಡಿ

ರಿಯಲ್ ಎಸ್ಟೇಟ್​ ಉದ್ಯಮಿ ನಿರಂಜನ್ ಹೀರಾನಂದಾನಿ ಅವರು ತಮ್ಮ ವಿರುದ್ಧ ಆರಂಭಿಸಲಾದ ಫೆಮಾ(ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ)ಉಲ್ಲಂಘನೆ ತನಿಖೆಗೆ ಸಂಬಂಧಿಸಿದಂತೆ ಸೋಮವಾರ ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.

Niranjan Hiranandani: 10 ಗಂಟೆಗಳ ಕಾಲ ಕೈಗಾರಿಕೋದ್ಯಮಿ ನಿರಂಜನ್ ಹೀರಾನಂದಾನಿ ವಿಚಾರಣೆ ನಡೆಸಿದ ಇಡಿ
ನಿರಂಜನ್ ಹೀರಾನಂದಾನಿ
ನಯನಾ ರಾಜೀವ್
|

Updated on: Mar 05, 2024 | 10:08 AM

Share

ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕೈಗಾರಿಕೋದ್ಯಮಿ ನಿರಂಜನ್ ಹೀರಾನಂದಾನಿ(Niranjan Hiranandani) ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ಇಡಿ ವಿಚಾರಣೆ 10 ಗಂಟೆಗೂ ಹೆಚ್ಚು ಕಾಲ ನಡೆಯಿತು. ಸೋಮವಾರ ಬೆಳಗ್ಗೆ 11.30ರಿಂದ ವಿಚಾರಣೆ ಆರಂಭಿಸಿದ್ದು,  ರಾತ್ರಿ 10.30ಕ್ಕೆ ವಿಚಾರಣೆ ಮುಕ್ತಾಯಗೊಂಡಿದೆ. FEMA (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ) ಉಲ್ಲಂಘನೆಗಳ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ.

ನಾವು ತನಿಖೆಗೆ ಸಹಕರಿಸಿದ್ದೇವೆ ಮತ್ತು ಇಡಿ ಅಧಿಕಾರಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ ಎಂದು ಹೀರಾನಂದಾನಿ ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳು ಇಡಿ ಅಧಿಕಾರಿಗಳು ನಿರಂಜನ್ ಹೀರಾನಂದಾನಿ ಮತ್ತು ದರ್ಶನ್ ಹಿರಾನಂದಾನಿ ಅವರ ಮುಂಬೈನ ಆವರಣದಲ್ಲಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಇದಾದ ಬಳಿಕ ಈ ಪ್ರಕರಣದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಇಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಇಬ್ಬರಿಗೂ ಸಮನ್ಸ್ ನೀಡಲಾಗಿತ್ತು.

ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ರಿಯಲ್​ ಎಸ್ಟೇಟ್​ ಯೋಜನೆಗಳನ್ನು ಹೊಂದಿರುವ ಹಿರಾನಂದನಿ ಸಮೂಹದ ಕಂಪನಿಗಳು ಎಫ್​ಡಿಐ 400 ಕೋಟಿ ರೂ. ಸರ್ಕಾರದ ಮಾರ್ಗಸೂಚಿ ಪ್ರಕಾರ ಈ ಮೊತ್ತ ಬಳಕೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಎಫ್​ಡಿಐ ಪಡೆದ ಕಂಪನಿಯೊಂದು ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡದೆ ಎನ್​ಪಿಎ ಎಂದು ಘೋಷಿಸಿತು.

ಮತ್ತಷ್ಟು ಓದಿ: ಹೀರಾನಂದಾನಿ ಗ್ರೂಪ್​ನ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದಿಂದ ದಾಳಿ; ಫೆಮಾ ನಿಯಮ ಉಲ್ಲಂಘನೆ ಆರೋಪ; ದಾಖಲೆಗಳ ಪರಿಶೀಲನೆ

ಡಿಆರ್​ಟಿ(ಸಾಲ ವಸೂಲಾತಿ ಮಂಡಳಿ)ಯ ವಿಚಾರಣೆ ಸಮಯದಲ್ಲಿ, ಅಪೂರ್ಣ ಯೋಜನೆಯನ್ನು ಹೀರಾನಂದಾನಿ ಗ್ರೂಪ್​ನ ಮತ್ತೊಂದು ಘಟಕವು ವಹಿಸಿಕೊಂಡಿದೆ ಎಂದು ತಿಳಿದುಬಂದಿದೆ. ಮಾರ್ಚ್​ 2022ರಲ್ಲಿ ಆದಾಯ ತೆರಿಗೆ ಇಲಾಖೆಯು ಮುಂಬೈ, ಬೆಂಗಳೂರು ಮತ್ತು ಚೆನ್ನೈ ಮೂರು ನಗರಗಳಲ್ಲಿ ಇರುವ ಹೀರಾನಂದಾನಿ ಗ್ರೂಪ್​ನ ಸುಮಾರು 25 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಶೋಧದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಹಿರಾನಂದನಿ ಗ್ರೂಪ್​ನ ದಾಖಲೆ, ಹಣಕಾಸು ಇ-ದಾಖಲೆಗಳು ಮತ್ತು ಮಾರಾಟ ವಹಿವಾಟನ್ನು ಪರಿಶೀಲಿಸಿದ್ದರು.

ವಿಚಾರಣೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರಂಜನ್, ತನಿಖೆಗೆ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು. 16 ವರ್ಷಗಳ ಹಿಂದೆಯೇ ಫೆಮಾ ಉಲ್ಲಂಘನೆಯ ಆರೋಪ ಮಾಡಲಾಗಿತ್ತು ಎಂದು ಹಿರಾನಂದಾನಿ ಹೇಳಿದ್ದಾರೆ.

ಈವರೆಗೆ 42 ಅಥವಾ 43 ಬಾರಿ ವಿಚಾರಣೆ ನಡೆಸಲಾಗಿದೆ. ಇಂತಹ ವಿಚಾರ ಪ್ರಸ್ತಾಪವಾದಾಗಲೆಲ್ಲ ಆ ಸಮಸ್ಯೆಯ ಪರಿಹರಿಸುವುದು ತನ್ನ ಕರ್ತವ್ಯವಾಗಿರುವುದರಿಂದ ಸಹಕರಿಸಲು ಸಂತೋಷಪಡುತ್ತೇನೆ ಎಂದರು. ಆದ್ದರಿಂದ, ಉತ್ತರಿಸಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಕೆಲವು ವಿದೇಶಿ ವಹಿವಾಟುಗಳ ಹೊರತಾಗಿ, ಏಜೆನ್ಸಿಯುಹೀರಾನಂದಾನಿ ಗ್ರೂಪ್‌ನ ಪ್ರವರ್ತಕರೊಂದಿಗೆ ಸಂಬಂಧ ಹೊಂದಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಟ್ರಸ್ಟ್‌ನ ಫಲಾನುಭವಿಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ FEMA ತನಿಖೆಯಲ್ಲಿ ED ಯೊಂದಿಗೆ ಸಹಕರಿಸುವುದಾಗಿ ಗ್ರೂಪ್​ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ