AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು. ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ. ‘ಸ್ನಾನ ಮಾಡಲೇಬಾರದು ಎನ್ನುವಷ್ಟು […]

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’
Follow us
ಪೃಥ್ವಿಶಂಕರ
|

Updated on:Nov 14, 2020 | 6:53 PM

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು.

ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ.

‘ಸ್ನಾನ ಮಾಡಲೇಬಾರದು ಎನ್ನುವಷ್ಟು ಪುಳಕಿತನಾಗಿದ್ದೆ’ ಅದರಲ್ಲೂ, ತಂಡದ ಆಟಗಾರರಿದ್ದ ಬಸ್​ನಲ್ಲಿ ಸಚಿನ್ ಸ್ವತಃ ತಮ್ಮ ಪರಿಚಯ ಮಾಡಿಕೊಂಡು ಶೇಕ್ ಹ್ಯಾಂಡ್ ಮಾಡಿದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿರುವ ಯುವಿ, ಆ ಕ್ಷಣದಲ್ಲಿ ತಾವೆಷ್ಟು ಪುಳಕಿತಗೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಸಚಿನ್ ಶೇಕ್ ಹ್ಯಾಂಡ್ ಮಾಡಿದ ಬಳಿಕ ತಮ್ಮ ಕೈಯಿಂದ ಇಡೀ ದೇಹವನ್ನು ಸ್ಪರ್ಶಿಸಿಕೊಂಡ ಯುವರಾಜ್ ಸಿಂಗ್ ಆ​ ಶೇಕ್ ಹ್ಯಾಂಡ್​ನ ಸ್ಪರ್ಶ ಶಾಶ್ವತವಾಗಿ ಉಳಿಯಬೇಕೆಂದು ಸ್ನಾನ ಮಾಡಲೇಬಾರದು ಎಂದು ನಿಶ್ಚಯಿಸಿಬಿಟ್ಟರಂತೆ.

ನೆಟ್​ಫ್ಲಿಕ್ಸ್​ನಲ್ಲಿ ಅಪ್ಲೋಡ್ ಆಗಿರುವ ಸ್ಟೋರೀಸ್ ಬಿಹೈಂಡ್ ದಿ ಸ್ಟೋರಿ ಎಂಬ ವಿಡಿಯೋದಲ್ಲಿ ತಮ್ಮ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಯುವಿ ಅಂಡರ್-19 ನಂತರ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಸಚಿನ್, ಗಂಗೂಲಿ, ಕುಂಬ್ಳೆ, ದ್ರಾವಿಡ್, ಶ್ರೀನಾಥ್​ರೊಂದಿಗೆ ಆಡುವಾಗ ಸ್ವತಃ ತಾನೆಲ್ಲಿದ್ದೇನೆ ಎಂದು ಗೊಂದಲವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಸಚಿನ್ ಹೊಸಬರಿಗೆ ನೀಡುತ್ತಿದ್ದ ಪ್ರೋತ್ಸಾಹ ಹಾಗೂ ಮೈದಾನದಾಚೆ ಬೇರೆಯವರೊಂದಿಗೆ ನಡೆದುಕೊಳ್ಳುತ್ತಿದ್ದ ಕುರಿತು ಮಾತನಾಡಿರುವ ಯುವರಾಜ್​ ಆಡುವಾಗ ಸಚಿನ್ ಮೈದಾನದಲ್ಲಿದ್ದರೆ ಮಾತ್ರ ಗೆಲ್ಲುವ ಭರವಸೆ ಇರುತ್ತಿತ್ತು. ಅವರು ಔಟ್ ಆದ ಕೂಡಲೇ ಅಭಿಮಾನಿಗಳ ಮುಖವು ಬಾಡುತ್ತಿತ್ತು. ಹಾಗಾಗಿ, ಇಡೀ ತಂಡದ ಭಾರವನ್ನು ಹೊತ್ತು ಮೈದಾನಕ್ಕಿಳಿಯುತ್ತಿದ್ದ ಸಚಿನ್​ ಆಟ ಮುಗಿದ ನಂತರ ನಮ್ಮೊಂದಿಗೆ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಅಸಾಧ್ಯ ಎಂದು ಹೇಳಿದ್ದಾರೆ.

Published On - 6:46 pm, Sat, 14 November 20

ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ