AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು. ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ. ‘ಸ್ನಾನ ಮಾಡಲೇಬಾರದು ಎನ್ನುವಷ್ಟು […]

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’
ಪೃಥ್ವಿಶಂಕರ
|

Updated on:Nov 14, 2020 | 6:53 PM

Share

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು.

ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ.

‘ಸ್ನಾನ ಮಾಡಲೇಬಾರದು ಎನ್ನುವಷ್ಟು ಪುಳಕಿತನಾಗಿದ್ದೆ’ ಅದರಲ್ಲೂ, ತಂಡದ ಆಟಗಾರರಿದ್ದ ಬಸ್​ನಲ್ಲಿ ಸಚಿನ್ ಸ್ವತಃ ತಮ್ಮ ಪರಿಚಯ ಮಾಡಿಕೊಂಡು ಶೇಕ್ ಹ್ಯಾಂಡ್ ಮಾಡಿದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿರುವ ಯುವಿ, ಆ ಕ್ಷಣದಲ್ಲಿ ತಾವೆಷ್ಟು ಪುಳಕಿತಗೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಸಚಿನ್ ಶೇಕ್ ಹ್ಯಾಂಡ್ ಮಾಡಿದ ಬಳಿಕ ತಮ್ಮ ಕೈಯಿಂದ ಇಡೀ ದೇಹವನ್ನು ಸ್ಪರ್ಶಿಸಿಕೊಂಡ ಯುವರಾಜ್ ಸಿಂಗ್ ಆ​ ಶೇಕ್ ಹ್ಯಾಂಡ್​ನ ಸ್ಪರ್ಶ ಶಾಶ್ವತವಾಗಿ ಉಳಿಯಬೇಕೆಂದು ಸ್ನಾನ ಮಾಡಲೇಬಾರದು ಎಂದು ನಿಶ್ಚಯಿಸಿಬಿಟ್ಟರಂತೆ.

ನೆಟ್​ಫ್ಲಿಕ್ಸ್​ನಲ್ಲಿ ಅಪ್ಲೋಡ್ ಆಗಿರುವ ಸ್ಟೋರೀಸ್ ಬಿಹೈಂಡ್ ದಿ ಸ್ಟೋರಿ ಎಂಬ ವಿಡಿಯೋದಲ್ಲಿ ತಮ್ಮ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಯುವಿ ಅಂಡರ್-19 ನಂತರ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಸಚಿನ್, ಗಂಗೂಲಿ, ಕುಂಬ್ಳೆ, ದ್ರಾವಿಡ್, ಶ್ರೀನಾಥ್​ರೊಂದಿಗೆ ಆಡುವಾಗ ಸ್ವತಃ ತಾನೆಲ್ಲಿದ್ದೇನೆ ಎಂದು ಗೊಂದಲವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಸಚಿನ್ ಹೊಸಬರಿಗೆ ನೀಡುತ್ತಿದ್ದ ಪ್ರೋತ್ಸಾಹ ಹಾಗೂ ಮೈದಾನದಾಚೆ ಬೇರೆಯವರೊಂದಿಗೆ ನಡೆದುಕೊಳ್ಳುತ್ತಿದ್ದ ಕುರಿತು ಮಾತನಾಡಿರುವ ಯುವರಾಜ್​ ಆಡುವಾಗ ಸಚಿನ್ ಮೈದಾನದಲ್ಲಿದ್ದರೆ ಮಾತ್ರ ಗೆಲ್ಲುವ ಭರವಸೆ ಇರುತ್ತಿತ್ತು. ಅವರು ಔಟ್ ಆದ ಕೂಡಲೇ ಅಭಿಮಾನಿಗಳ ಮುಖವು ಬಾಡುತ್ತಿತ್ತು. ಹಾಗಾಗಿ, ಇಡೀ ತಂಡದ ಭಾರವನ್ನು ಹೊತ್ತು ಮೈದಾನಕ್ಕಿಳಿಯುತ್ತಿದ್ದ ಸಚಿನ್​ ಆಟ ಮುಗಿದ ನಂತರ ನಮ್ಮೊಂದಿಗೆ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಅಸಾಧ್ಯ ಎಂದು ಹೇಳಿದ್ದಾರೆ.

Published On - 6:46 pm, Sat, 14 November 20

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ