AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯಾನಂದನ ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ

ಗುಜರಾತ್: ನಿತ್ಯಾನಂದನ ಆಶ್ರಮಕ್ಕೂ ವಿವಾದಕ್ಕೂ ಅದೇನೋ ಸಂಬಂಧ. ಅತ್ಯಾಚಾರ ಸೇರಿ ಹಲವು ಆರೋಪ ಎದುರಿಸ್ತೀರೋ ನಿತ್ಯಾನಂದ ಆಶ್ರಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ನಿತ್ಯಾನಂದ ಆಶ್ರಮಕ್ಕೆ ಅದೆಷ್ಟೋ ಆರೋಪಗಳು ಕೇಳಿ ಬಂದಿವೆ ಆದರೂ ಅಲ್ಲಿಗೆ ಬರೋರ ಭಕ್ತರಿಗೇನು ಕಡಿಮೆ ಇಲ್ಲ. ದೇಶ ಅಷ್ಟೆ ಅಲ್ಲದೆ ವಿದೇಶದಿಂದಲೂ ಆಶ್ರಮಕ್ಕೆ ಭಕ್ತರು ಬರ್ತಾರೆ. ಭಕ್ತಿಯ ಪರವಶೆಯಲ್ಲೇ ತೇಲ್ತಾರೆ. ಆದ್ರೀಗ ಇದೇ ನಿತ್ಯಾನಂದ ಆಶ್ರಮದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ..! ನಿತ್ಯಾನಂದ ಆಶ್ರಮ […]

ನಿತ್ಯಾನಂದನ ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ
ಸಾಧು ಶ್ರೀನಾಥ್​
|

Updated on:Nov 16, 2019 | 10:46 PM

Share

ಗುಜರಾತ್: ನಿತ್ಯಾನಂದನ ಆಶ್ರಮಕ್ಕೂ ವಿವಾದಕ್ಕೂ ಅದೇನೋ ಸಂಬಂಧ. ಅತ್ಯಾಚಾರ ಸೇರಿ ಹಲವು ಆರೋಪ ಎದುರಿಸ್ತೀರೋ ನಿತ್ಯಾನಂದ ಆಶ್ರಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ನಿತ್ಯಾನಂದ ಆಶ್ರಮಕ್ಕೆ ಅದೆಷ್ಟೋ ಆರೋಪಗಳು ಕೇಳಿ ಬಂದಿವೆ ಆದರೂ ಅಲ್ಲಿಗೆ ಬರೋರ ಭಕ್ತರಿಗೇನು ಕಡಿಮೆ ಇಲ್ಲ. ದೇಶ ಅಷ್ಟೆ ಅಲ್ಲದೆ ವಿದೇಶದಿಂದಲೂ ಆಶ್ರಮಕ್ಕೆ ಭಕ್ತರು ಬರ್ತಾರೆ. ಭಕ್ತಿಯ ಪರವಶೆಯಲ್ಲೇ ತೇಲ್ತಾರೆ. ಆದ್ರೀಗ ಇದೇ ನಿತ್ಯಾನಂದ ಆಶ್ರಮದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ..! ನಿತ್ಯಾನಂದ ಆಶ್ರಮ ವಿವಾದಗಳಿಂದಲೇ ಸುದ್ದಿಯಾಗೋ ಆಶ್ರಮ. ಇಲ್ಲಿ ಧಾರ್ಮಿಕ ಕಾರ್ಯಕ್ಕಿಂತ ವಿವಾದದ ಕಾರ್ಯಗಳೇ ಹೆಚ್ಚು ಸದ್ದು ಮಾಡ್ತಿವೆ. ಬೆಂಗಳೂರು ಹೊರವಲಯದ ಬಿಡದಿ ಬಳಿ ಇರೋ ನಿತ್ಯಾನಂದ ಆಶ್ರಮ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತೆ.

ಮಹಿಳೆಯ ಮೇಲೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಹಿಂದೆ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಆದರೆ, ಈಗ ಗುಜರಾತ್​ನ ಅಹಮದಾಬಾದ್ ಬಳಿ ಇರೋ ನಿತ್ಯಾನಂದನ ಸರ್ವಜ್ಞ ಪೀಠ ಆಶ್ರಮದಲ್ಲೂ ಬೆಂಗಳೂರಿನ ಓರ್ವ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಯುವತಿಯನ್ನ ವಿದೇಶಕ್ಕೆ ಕಳುಹಿಸಿದ್ರಾ..? ಬೆಂಗಳೂರಿನ ದಂಪತಿ ತಮ್ಮ ಮೂರು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ನಿತ್ಯಾನಂದನ ಬಿಡದಿ ಆಶ್ರಮಕ್ಕೆ ಸೇರಿಸಿದ್ದರು. ಬಳಿಕ ಮೂವರನ್ನು ಗುಜರಾತ್​ನ ಆಶ್ರಮಕ್ಕೆ ಕರೆದೊಯ್ಯಲಾಗಿದೆ. ಅಲ್ಲಿದ್ದ ಮೂವರಲ್ಲಿ ಇಬ್ಬರನ್ನೂ ಪೋಲೀಸರು ರಕ್ಷಿಸಿದ್ದಾರೆ. ಆದರೆ, 19 ವರ್ಷದ ಯುವತಿ ಮಾತ್ರ ನಾಪತ್ತೆಯಾಗಿದ್ದಾಳೆ.

ತಮ್ಮ ಪುತ್ರಿಯ ನಾಪತ್ತೆ ಬಗ್ಗೆ ಪೋಷಕರು ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಆಗಿರಬಹುದು ಇಲ್ಲವೇ ನಿತ್ಯಾನಂದ ತಮ್ಮ ಪುತ್ರಿಯನ್ನ ವಿದೇಶಕ್ಕೆ ಕರೆದೊಯ್ದಿರಬಹುದು ಅನ್ನೋ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

Published On - 10:44 pm, Sat, 16 November 19

Follow Us
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
RCBಯ 5ನೇ ವಿದೇಶಿ ಆಟಗಾರ... ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​!
RCBಯ 5ನೇ ವಿದೇಶಿ ಆಟಗಾರ... ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​!
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ