AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯಾನಂದನ ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ

ಗುಜರಾತ್: ನಿತ್ಯಾನಂದನ ಆಶ್ರಮಕ್ಕೂ ವಿವಾದಕ್ಕೂ ಅದೇನೋ ಸಂಬಂಧ. ಅತ್ಯಾಚಾರ ಸೇರಿ ಹಲವು ಆರೋಪ ಎದುರಿಸ್ತೀರೋ ನಿತ್ಯಾನಂದ ಆಶ್ರಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ನಿತ್ಯಾನಂದ ಆಶ್ರಮಕ್ಕೆ ಅದೆಷ್ಟೋ ಆರೋಪಗಳು ಕೇಳಿ ಬಂದಿವೆ ಆದರೂ ಅಲ್ಲಿಗೆ ಬರೋರ ಭಕ್ತರಿಗೇನು ಕಡಿಮೆ ಇಲ್ಲ. ದೇಶ ಅಷ್ಟೆ ಅಲ್ಲದೆ ವಿದೇಶದಿಂದಲೂ ಆಶ್ರಮಕ್ಕೆ ಭಕ್ತರು ಬರ್ತಾರೆ. ಭಕ್ತಿಯ ಪರವಶೆಯಲ್ಲೇ ತೇಲ್ತಾರೆ. ಆದ್ರೀಗ ಇದೇ ನಿತ್ಯಾನಂದ ಆಶ್ರಮದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ..! ನಿತ್ಯಾನಂದ ಆಶ್ರಮ […]

ನಿತ್ಯಾನಂದನ ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ
Follow us
ಸಾಧು ಶ್ರೀನಾಥ್​
|

Updated on:Nov 16, 2019 | 10:46 PM

ಗುಜರಾತ್: ನಿತ್ಯಾನಂದನ ಆಶ್ರಮಕ್ಕೂ ವಿವಾದಕ್ಕೂ ಅದೇನೋ ಸಂಬಂಧ. ಅತ್ಯಾಚಾರ ಸೇರಿ ಹಲವು ಆರೋಪ ಎದುರಿಸ್ತೀರೋ ನಿತ್ಯಾನಂದ ಆಶ್ರಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ನಿತ್ಯಾನಂದ ಆಶ್ರಮಕ್ಕೆ ಅದೆಷ್ಟೋ ಆರೋಪಗಳು ಕೇಳಿ ಬಂದಿವೆ ಆದರೂ ಅಲ್ಲಿಗೆ ಬರೋರ ಭಕ್ತರಿಗೇನು ಕಡಿಮೆ ಇಲ್ಲ. ದೇಶ ಅಷ್ಟೆ ಅಲ್ಲದೆ ವಿದೇಶದಿಂದಲೂ ಆಶ್ರಮಕ್ಕೆ ಭಕ್ತರು ಬರ್ತಾರೆ. ಭಕ್ತಿಯ ಪರವಶೆಯಲ್ಲೇ ತೇಲ್ತಾರೆ. ಆದ್ರೀಗ ಇದೇ ನಿತ್ಯಾನಂದ ಆಶ್ರಮದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ..! ನಿತ್ಯಾನಂದ ಆಶ್ರಮ ವಿವಾದಗಳಿಂದಲೇ ಸುದ್ದಿಯಾಗೋ ಆಶ್ರಮ. ಇಲ್ಲಿ ಧಾರ್ಮಿಕ ಕಾರ್ಯಕ್ಕಿಂತ ವಿವಾದದ ಕಾರ್ಯಗಳೇ ಹೆಚ್ಚು ಸದ್ದು ಮಾಡ್ತಿವೆ. ಬೆಂಗಳೂರು ಹೊರವಲಯದ ಬಿಡದಿ ಬಳಿ ಇರೋ ನಿತ್ಯಾನಂದ ಆಶ್ರಮ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತೆ.

ಮಹಿಳೆಯ ಮೇಲೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಹಿಂದೆ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಆದರೆ, ಈಗ ಗುಜರಾತ್​ನ ಅಹಮದಾಬಾದ್ ಬಳಿ ಇರೋ ನಿತ್ಯಾನಂದನ ಸರ್ವಜ್ಞ ಪೀಠ ಆಶ್ರಮದಲ್ಲೂ ಬೆಂಗಳೂರಿನ ಓರ್ವ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಯುವತಿಯನ್ನ ವಿದೇಶಕ್ಕೆ ಕಳುಹಿಸಿದ್ರಾ..? ಬೆಂಗಳೂರಿನ ದಂಪತಿ ತಮ್ಮ ಮೂರು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ನಿತ್ಯಾನಂದನ ಬಿಡದಿ ಆಶ್ರಮಕ್ಕೆ ಸೇರಿಸಿದ್ದರು. ಬಳಿಕ ಮೂವರನ್ನು ಗುಜರಾತ್​ನ ಆಶ್ರಮಕ್ಕೆ ಕರೆದೊಯ್ಯಲಾಗಿದೆ. ಅಲ್ಲಿದ್ದ ಮೂವರಲ್ಲಿ ಇಬ್ಬರನ್ನೂ ಪೋಲೀಸರು ರಕ್ಷಿಸಿದ್ದಾರೆ. ಆದರೆ, 19 ವರ್ಷದ ಯುವತಿ ಮಾತ್ರ ನಾಪತ್ತೆಯಾಗಿದ್ದಾಳೆ.

ತಮ್ಮ ಪುತ್ರಿಯ ನಾಪತ್ತೆ ಬಗ್ಗೆ ಪೋಷಕರು ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಆಗಿರಬಹುದು ಇಲ್ಲವೇ ನಿತ್ಯಾನಂದ ತಮ್ಮ ಪುತ್ರಿಯನ್ನ ವಿದೇಶಕ್ಕೆ ಕರೆದೊಯ್ದಿರಬಹುದು ಅನ್ನೋ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

Published On - 10:44 pm, Sat, 16 November 19

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್