AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ

ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Dec 31, 2020 | 4:04 PM

Share

ದೆಹಲಿ: ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ( TRAI-ಟ್ರಾಯ್​) ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಬಿಲ್​ ಆ್ಯಂಡ್ ಕೀಪ್​ ಪದ್ಧತಿಯನ್ನು ಅಳವಡಿಸಿಕೊಳ್ಳಲಿದೆ. ಇದರಡಿಯಲ್ಲಿ ಜ.1ರಿಂದ ಅಂತರ್ ಸಂಪರ್ಕ ಬಳಕೆ ಶುಲ್ಕ (IUC) ವನ್ನು ರದ್ದುಗೊಳಿಸುತ್ತಿದ್ದು, ಎಲ್ಲ ದೇಶೀಯ ಕರೆಗಳೂ ಉಚಿತವಾಗಲಿದೆ ಎಂದು ರಿಲಯನ್ಸ್​ ಜಿಯೋ ತಿಳಿಸಿದೆ. Bill and Keep ವ್ಯವಸ್ಥೆಯಡಿ ಎರಡು ಭಿನ್ನ ದೂರ ಸಂಪರ್ಕ ಜಾಲಗಳ ಅಂತರ್​ ಸಂಪರ್ಕಕ್ಕೆ ಪರಸ್ಪರ ನೆಟ್​ವರ್ಕ್​ಗಳು ಶುಲ್ಕ ವಿಧಿಸುವುದಿಲ್ಲ.

ಜಿಯೋದಿಂದ ಜಿಯೋ ನೆಟ್​ವರ್ಕ್​ಗೆ ಹಿಂದಿನಿಂದಲೂ ಉಚಿತ ಕರೆಯನ್ನು ನಿಗದಿಪಡಿಸಿದ್ದ ಟೆಲಿಕಾಂ ಕಂಪನಿ, 2019ರಲ್ಲಿ ಜಿಯೋದಿಂದ ಉಳಿದ ನೆಟ್ವರ್ಕ್​ಗಳಿಗೆ ಕರೆಯನ್ನು ಶುಲ್ಕ ಸಹಿತ ಮಾಡಿತ್ತು. ಅಲ್ಲದೆ, ಟ್ರಾಯ್​ ಅಂತರ್​ ಸಂಪರ್ಕ ಬಳಕೆ ಶುಲ್ಕವನ್ನು ರದ್ದುಗೊಳಿಸುವವರೆಗೆ ಜಿಯೋದಿಂದ ಉಳಿದ ನೆಟ್​ವರ್ಕ್​ಗಳಿಗೆ ಮಾಡುವ ಕರೆಗೆ ಶುಲ್ಕ ವಿಧಿಸಲಾಗುವುದು. ನಂತರ ಅದನ್ನು ರದ್ದುಗೊಳಿಸಲಾಗುವುದು ಎಂದಿತ್ತು. ಆ ಭರವಸೆಯಂತೆ ಈಗ ನಾಳೆಯಿಂದ ಜಿಯೋದಿಂದ ಬೇರೆ ನೆಟ್​ವರ್ಕ್​ಗಳಿಗೂ ಗ್ರಾಹಕರು ಉಚಿತ ಕರೆ ಮಾಡಬಹುದಾಗಿದೆ. ಏರ್​ಟೆಲ್​ ಷೇರು ಕುಸಿತ

ಜಿಯೋ ಈ ಘೋಷಣೆ ಮಾಡುತ್ತಿದ್ದಂತೆ, ಅದರ ಪ್ರತಿಸ್ಪರ್ಧಿ ಭಾರತಿ ಏರ್​ಟೆಲ್​ನ ಷೇರುಗಳು ಅಂತರ್​ ದಿನ ವಹಿವಾಟಿನಲ್ಲಿ ಶೇ.2ರಷ್ಟು ಕುಸಿಯಿತು.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ