AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ

ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Dec 31, 2020 | 4:04 PM

Share

ದೆಹಲಿ: ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ( TRAI-ಟ್ರಾಯ್​) ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಬಿಲ್​ ಆ್ಯಂಡ್ ಕೀಪ್​ ಪದ್ಧತಿಯನ್ನು ಅಳವಡಿಸಿಕೊಳ್ಳಲಿದೆ. ಇದರಡಿಯಲ್ಲಿ ಜ.1ರಿಂದ ಅಂತರ್ ಸಂಪರ್ಕ ಬಳಕೆ ಶುಲ್ಕ (IUC) ವನ್ನು ರದ್ದುಗೊಳಿಸುತ್ತಿದ್ದು, ಎಲ್ಲ ದೇಶೀಯ ಕರೆಗಳೂ ಉಚಿತವಾಗಲಿದೆ ಎಂದು ರಿಲಯನ್ಸ್​ ಜಿಯೋ ತಿಳಿಸಿದೆ. Bill and Keep ವ್ಯವಸ್ಥೆಯಡಿ ಎರಡು ಭಿನ್ನ ದೂರ ಸಂಪರ್ಕ ಜಾಲಗಳ ಅಂತರ್​ ಸಂಪರ್ಕಕ್ಕೆ ಪರಸ್ಪರ ನೆಟ್​ವರ್ಕ್​ಗಳು ಶುಲ್ಕ ವಿಧಿಸುವುದಿಲ್ಲ.

ಜಿಯೋದಿಂದ ಜಿಯೋ ನೆಟ್​ವರ್ಕ್​ಗೆ ಹಿಂದಿನಿಂದಲೂ ಉಚಿತ ಕರೆಯನ್ನು ನಿಗದಿಪಡಿಸಿದ್ದ ಟೆಲಿಕಾಂ ಕಂಪನಿ, 2019ರಲ್ಲಿ ಜಿಯೋದಿಂದ ಉಳಿದ ನೆಟ್ವರ್ಕ್​ಗಳಿಗೆ ಕರೆಯನ್ನು ಶುಲ್ಕ ಸಹಿತ ಮಾಡಿತ್ತು. ಅಲ್ಲದೆ, ಟ್ರಾಯ್​ ಅಂತರ್​ ಸಂಪರ್ಕ ಬಳಕೆ ಶುಲ್ಕವನ್ನು ರದ್ದುಗೊಳಿಸುವವರೆಗೆ ಜಿಯೋದಿಂದ ಉಳಿದ ನೆಟ್​ವರ್ಕ್​ಗಳಿಗೆ ಮಾಡುವ ಕರೆಗೆ ಶುಲ್ಕ ವಿಧಿಸಲಾಗುವುದು. ನಂತರ ಅದನ್ನು ರದ್ದುಗೊಳಿಸಲಾಗುವುದು ಎಂದಿತ್ತು. ಆ ಭರವಸೆಯಂತೆ ಈಗ ನಾಳೆಯಿಂದ ಜಿಯೋದಿಂದ ಬೇರೆ ನೆಟ್​ವರ್ಕ್​ಗಳಿಗೂ ಗ್ರಾಹಕರು ಉಚಿತ ಕರೆ ಮಾಡಬಹುದಾಗಿದೆ. ಏರ್​ಟೆಲ್​ ಷೇರು ಕುಸಿತ

ಜಿಯೋ ಈ ಘೋಷಣೆ ಮಾಡುತ್ತಿದ್ದಂತೆ, ಅದರ ಪ್ರತಿಸ್ಪರ್ಧಿ ಭಾರತಿ ಏರ್​ಟೆಲ್​ನ ಷೇರುಗಳು ಅಂತರ್​ ದಿನ ವಹಿವಾಟಿನಲ್ಲಿ ಶೇ.2ರಷ್ಟು ಕುಸಿಯಿತು.

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ