AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ

ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Dec 31, 2020 | 4:04 PM

Share

ದೆಹಲಿ: ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ( TRAI-ಟ್ರಾಯ್​) ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಬಿಲ್​ ಆ್ಯಂಡ್ ಕೀಪ್​ ಪದ್ಧತಿಯನ್ನು ಅಳವಡಿಸಿಕೊಳ್ಳಲಿದೆ. ಇದರಡಿಯಲ್ಲಿ ಜ.1ರಿಂದ ಅಂತರ್ ಸಂಪರ್ಕ ಬಳಕೆ ಶುಲ್ಕ (IUC) ವನ್ನು ರದ್ದುಗೊಳಿಸುತ್ತಿದ್ದು, ಎಲ್ಲ ದೇಶೀಯ ಕರೆಗಳೂ ಉಚಿತವಾಗಲಿದೆ ಎಂದು ರಿಲಯನ್ಸ್​ ಜಿಯೋ ತಿಳಿಸಿದೆ. Bill and Keep ವ್ಯವಸ್ಥೆಯಡಿ ಎರಡು ಭಿನ್ನ ದೂರ ಸಂಪರ್ಕ ಜಾಲಗಳ ಅಂತರ್​ ಸಂಪರ್ಕಕ್ಕೆ ಪರಸ್ಪರ ನೆಟ್​ವರ್ಕ್​ಗಳು ಶುಲ್ಕ ವಿಧಿಸುವುದಿಲ್ಲ.

ಜಿಯೋದಿಂದ ಜಿಯೋ ನೆಟ್​ವರ್ಕ್​ಗೆ ಹಿಂದಿನಿಂದಲೂ ಉಚಿತ ಕರೆಯನ್ನು ನಿಗದಿಪಡಿಸಿದ್ದ ಟೆಲಿಕಾಂ ಕಂಪನಿ, 2019ರಲ್ಲಿ ಜಿಯೋದಿಂದ ಉಳಿದ ನೆಟ್ವರ್ಕ್​ಗಳಿಗೆ ಕರೆಯನ್ನು ಶುಲ್ಕ ಸಹಿತ ಮಾಡಿತ್ತು. ಅಲ್ಲದೆ, ಟ್ರಾಯ್​ ಅಂತರ್​ ಸಂಪರ್ಕ ಬಳಕೆ ಶುಲ್ಕವನ್ನು ರದ್ದುಗೊಳಿಸುವವರೆಗೆ ಜಿಯೋದಿಂದ ಉಳಿದ ನೆಟ್​ವರ್ಕ್​ಗಳಿಗೆ ಮಾಡುವ ಕರೆಗೆ ಶುಲ್ಕ ವಿಧಿಸಲಾಗುವುದು. ನಂತರ ಅದನ್ನು ರದ್ದುಗೊಳಿಸಲಾಗುವುದು ಎಂದಿತ್ತು. ಆ ಭರವಸೆಯಂತೆ ಈಗ ನಾಳೆಯಿಂದ ಜಿಯೋದಿಂದ ಬೇರೆ ನೆಟ್​ವರ್ಕ್​ಗಳಿಗೂ ಗ್ರಾಹಕರು ಉಚಿತ ಕರೆ ಮಾಡಬಹುದಾಗಿದೆ. ಏರ್​ಟೆಲ್​ ಷೇರು ಕುಸಿತ

ಜಿಯೋ ಈ ಘೋಷಣೆ ಮಾಡುತ್ತಿದ್ದಂತೆ, ಅದರ ಪ್ರತಿಸ್ಪರ್ಧಿ ಭಾರತಿ ಏರ್​ಟೆಲ್​ನ ಷೇರುಗಳು ಅಂತರ್​ ದಿನ ವಹಿವಾಟಿನಲ್ಲಿ ಶೇ.2ರಷ್ಟು ಕುಸಿಯಿತು.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ