AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ

ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Dec 31, 2020 | 4:04 PM

Share

ದೆಹಲಿ: ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್​ ಜಿಯೋ ಗುಡ್​ನ್ಯೂಸ್​ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್​ವರ್ಕ್​ನಿಂದ ನೀವು ಉಳಿದ ಯಾವುದೇ ನೆಟ್​ವರ್ಕ್​ಗೆ ಅಂದರೆ ಏರ್​ಟೆಲ್​, ವೊಡಾಫೋನ್​ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.

ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ( TRAI-ಟ್ರಾಯ್​) ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಬಿಲ್​ ಆ್ಯಂಡ್ ಕೀಪ್​ ಪದ್ಧತಿಯನ್ನು ಅಳವಡಿಸಿಕೊಳ್ಳಲಿದೆ. ಇದರಡಿಯಲ್ಲಿ ಜ.1ರಿಂದ ಅಂತರ್ ಸಂಪರ್ಕ ಬಳಕೆ ಶುಲ್ಕ (IUC) ವನ್ನು ರದ್ದುಗೊಳಿಸುತ್ತಿದ್ದು, ಎಲ್ಲ ದೇಶೀಯ ಕರೆಗಳೂ ಉಚಿತವಾಗಲಿದೆ ಎಂದು ರಿಲಯನ್ಸ್​ ಜಿಯೋ ತಿಳಿಸಿದೆ. Bill and Keep ವ್ಯವಸ್ಥೆಯಡಿ ಎರಡು ಭಿನ್ನ ದೂರ ಸಂಪರ್ಕ ಜಾಲಗಳ ಅಂತರ್​ ಸಂಪರ್ಕಕ್ಕೆ ಪರಸ್ಪರ ನೆಟ್​ವರ್ಕ್​ಗಳು ಶುಲ್ಕ ವಿಧಿಸುವುದಿಲ್ಲ.

ಜಿಯೋದಿಂದ ಜಿಯೋ ನೆಟ್​ವರ್ಕ್​ಗೆ ಹಿಂದಿನಿಂದಲೂ ಉಚಿತ ಕರೆಯನ್ನು ನಿಗದಿಪಡಿಸಿದ್ದ ಟೆಲಿಕಾಂ ಕಂಪನಿ, 2019ರಲ್ಲಿ ಜಿಯೋದಿಂದ ಉಳಿದ ನೆಟ್ವರ್ಕ್​ಗಳಿಗೆ ಕರೆಯನ್ನು ಶುಲ್ಕ ಸಹಿತ ಮಾಡಿತ್ತು. ಅಲ್ಲದೆ, ಟ್ರಾಯ್​ ಅಂತರ್​ ಸಂಪರ್ಕ ಬಳಕೆ ಶುಲ್ಕವನ್ನು ರದ್ದುಗೊಳಿಸುವವರೆಗೆ ಜಿಯೋದಿಂದ ಉಳಿದ ನೆಟ್​ವರ್ಕ್​ಗಳಿಗೆ ಮಾಡುವ ಕರೆಗೆ ಶುಲ್ಕ ವಿಧಿಸಲಾಗುವುದು. ನಂತರ ಅದನ್ನು ರದ್ದುಗೊಳಿಸಲಾಗುವುದು ಎಂದಿತ್ತು. ಆ ಭರವಸೆಯಂತೆ ಈಗ ನಾಳೆಯಿಂದ ಜಿಯೋದಿಂದ ಬೇರೆ ನೆಟ್​ವರ್ಕ್​ಗಳಿಗೂ ಗ್ರಾಹಕರು ಉಚಿತ ಕರೆ ಮಾಡಬಹುದಾಗಿದೆ. ಏರ್​ಟೆಲ್​ ಷೇರು ಕುಸಿತ

ಜಿಯೋ ಈ ಘೋಷಣೆ ಮಾಡುತ್ತಿದ್ದಂತೆ, ಅದರ ಪ್ರತಿಸ್ಪರ್ಧಿ ಭಾರತಿ ಏರ್​ಟೆಲ್​ನ ಷೇರುಗಳು ಅಂತರ್​ ದಿನ ವಹಿವಾಟಿನಲ್ಲಿ ಶೇ.2ರಷ್ಟು ಕುಸಿಯಿತು.

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ