AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ.

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ
ಮಟನ್​ ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 26, 2021 | 4:50 PM

Share

ಜೈಪುರ​: ಒಂದು ಮದುವೆ ಮುರಿಯಬೇಕು ಎಂದರೆ ಅಷ್ಟು ಬಲವಾದ ಕಾರಣ ಇರಬೇಕು. ಅದರಲ್ಲೂ ವಿವಾಹ ಸಮಾರಂಭದ ದಿನವೇ ಆ ಮದುವೆ ಮುರಿದು ಬೀಳುವುದು ಅಪರೂಪವೇ ಸರಿ. ಅಂಥ ಬಲವಾದ ಕಾರಣ ಇದ್ದರೆ ಮಾತ್ರ ಹಾಗೆಲ್ಲ ಆಗುತ್ತದೆ. ಆದರೆ ಒಡಿಶಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇನ್ನೇನು ಹಸೆಮಣೆ ಏರಬೇಕಿದ್ದ ವಧು-ವರರು ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ದಿನವೇ ಬೇರಾಗಿದ್ದಾರೆ.

ಮದುವೆಯಲ್ಲಿ ಮಟನ್​ ಮಾಡಿಸಿಲ್ಲ ಎಂಬ ಕಾರಣಕ್ಕೆ ಈ ವರ ತನಗೆ ಮದುವೆಯೇ ಬೇಡ ಎಂದಿದ್ದಾನೆ. ಅಲ್ಲದೆ, ಮದುವೆಯನ್ನು ಧಿಕ್ಕರಿಸಿ ಮನೆಗೆ ಹೋಗುವ ಮೊದಲು ಬೇರೆ ಯುವತಿಯನ್ನು ಮದುವೆಯಾಗಿದ್ದಾರೆ. 27ವರ್ಷದ ಈ ವರನ ಹೆಸರು ರಮಾಕಾಂತ್​ ಪಾತ್ರಾ..ಜೈಪುರದ ಸುಕಿಂದಾದ ನಿವಾಸಿ. ಬಾಂಧಾಗಾಂವ್​​ನ ಯುವತಿಯನ್ನು ವರಿಸಲು ಆ ಗ್ರಾಮಕ್ಕೆ ಆಗಮಿಸಿದ್ದ. ವರನ ಕಡೆಯವರೊಂದಿಗೆ ಬಂದ ಮೆರವಣಿಗೆಯಲ್ಲಿ ಇದ್ದವರಿಗೆ ಮೊದಲು ಊಟ ಆಗಲಿ ಎಂದು ಊಟಕ್ಕೆಂದು ಸಿದ್ಧತೆ ಮಾಡಿದ್ದಲ್ಲಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಗೆ ಹೋಗುತ್ತಿದ್ದಂತೆ ವರನ ಸಂಬಂಧಿಕರು, ಮೆರವಣಿಗೆಯಲ್ಲಿ ಇದ್ದವರು ಮೊದಲು ಮಟನ್​ ಕರ್ರಿಗೆ ಬೇಡಿಕೆಯಿಟ್ಟರು. ಆದರೆ ವಧುವಿನ ಕಡೆಯವರು ಮಟನ್ ಮಾಡಿಸಿರಲಿಲ್ಲ. ಇದೇ ಕಾರಣಕ್ಕೆ ಜಗಳ ಶುರುವಾಯಿತು. ವರನೂ ಈ ವಾಗ್ವಾದದಲ್ಲಿ ಪಾಲ್ಗೊಂಡು ತಮ್ಮವರ ಪರವಾಗಿ ವಾದಕ್ಕೆ ನಿಂತ. ಬರುಬರುತ್ತ ಪರಿಸ್ಥಿತಿ ತೀರ ಬಿಗಾಡಿಯಿಸಿತು. ನಂತರ ವರ ತನಗೆ ಮದುವೆಯೇ ಬೇಡವೆಂದು ಎದ್ದು ನಡೆದ.

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ. ಈ ಬಗ್ಗೆ ಪೊಲೀಸ್​ ಕಂಪ್ಲೇಂಟ್ ದಾಖಲಾಗಿಲ್ಲ.

ಇದನ್ನೂ ಓದಿ: ಡೆಲ್ಟಾ ಪ್ಲಸ್ ಡೆಲ್ಟಾ ರೂಪಾಂತರಿಗೆ ತಮಿಳುನಾಡಿನಲ್ಲಿ ಒಬ್ಬರು ಬಲಿ, ಸುರಕ್ಷತೆ ಕ್ರಮ ಹೆಚ್ಚಿಸಲು ಕೇಂದ್ರದ ನಿರ್ದೇಶನ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ