ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ.

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ
ಮಟನ್​ ಪ್ರಾತಿನಿಧಿಕ ಚಿತ್ರ
Follow us
| Updated By: Lakshmi Hegde

Updated on: Jun 26, 2021 | 4:50 PM

ಜೈಪುರ​: ಒಂದು ಮದುವೆ ಮುರಿಯಬೇಕು ಎಂದರೆ ಅಷ್ಟು ಬಲವಾದ ಕಾರಣ ಇರಬೇಕು. ಅದರಲ್ಲೂ ವಿವಾಹ ಸಮಾರಂಭದ ದಿನವೇ ಆ ಮದುವೆ ಮುರಿದು ಬೀಳುವುದು ಅಪರೂಪವೇ ಸರಿ. ಅಂಥ ಬಲವಾದ ಕಾರಣ ಇದ್ದರೆ ಮಾತ್ರ ಹಾಗೆಲ್ಲ ಆಗುತ್ತದೆ. ಆದರೆ ಒಡಿಶಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇನ್ನೇನು ಹಸೆಮಣೆ ಏರಬೇಕಿದ್ದ ವಧು-ವರರು ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ದಿನವೇ ಬೇರಾಗಿದ್ದಾರೆ.

ಮದುವೆಯಲ್ಲಿ ಮಟನ್​ ಮಾಡಿಸಿಲ್ಲ ಎಂಬ ಕಾರಣಕ್ಕೆ ಈ ವರ ತನಗೆ ಮದುವೆಯೇ ಬೇಡ ಎಂದಿದ್ದಾನೆ. ಅಲ್ಲದೆ, ಮದುವೆಯನ್ನು ಧಿಕ್ಕರಿಸಿ ಮನೆಗೆ ಹೋಗುವ ಮೊದಲು ಬೇರೆ ಯುವತಿಯನ್ನು ಮದುವೆಯಾಗಿದ್ದಾರೆ. 27ವರ್ಷದ ಈ ವರನ ಹೆಸರು ರಮಾಕಾಂತ್​ ಪಾತ್ರಾ..ಜೈಪುರದ ಸುಕಿಂದಾದ ನಿವಾಸಿ. ಬಾಂಧಾಗಾಂವ್​​ನ ಯುವತಿಯನ್ನು ವರಿಸಲು ಆ ಗ್ರಾಮಕ್ಕೆ ಆಗಮಿಸಿದ್ದ. ವರನ ಕಡೆಯವರೊಂದಿಗೆ ಬಂದ ಮೆರವಣಿಗೆಯಲ್ಲಿ ಇದ್ದವರಿಗೆ ಮೊದಲು ಊಟ ಆಗಲಿ ಎಂದು ಊಟಕ್ಕೆಂದು ಸಿದ್ಧತೆ ಮಾಡಿದ್ದಲ್ಲಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಗೆ ಹೋಗುತ್ತಿದ್ದಂತೆ ವರನ ಸಂಬಂಧಿಕರು, ಮೆರವಣಿಗೆಯಲ್ಲಿ ಇದ್ದವರು ಮೊದಲು ಮಟನ್​ ಕರ್ರಿಗೆ ಬೇಡಿಕೆಯಿಟ್ಟರು. ಆದರೆ ವಧುವಿನ ಕಡೆಯವರು ಮಟನ್ ಮಾಡಿಸಿರಲಿಲ್ಲ. ಇದೇ ಕಾರಣಕ್ಕೆ ಜಗಳ ಶುರುವಾಯಿತು. ವರನೂ ಈ ವಾಗ್ವಾದದಲ್ಲಿ ಪಾಲ್ಗೊಂಡು ತಮ್ಮವರ ಪರವಾಗಿ ವಾದಕ್ಕೆ ನಿಂತ. ಬರುಬರುತ್ತ ಪರಿಸ್ಥಿತಿ ತೀರ ಬಿಗಾಡಿಯಿಸಿತು. ನಂತರ ವರ ತನಗೆ ಮದುವೆಯೇ ಬೇಡವೆಂದು ಎದ್ದು ನಡೆದ.

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ. ಈ ಬಗ್ಗೆ ಪೊಲೀಸ್​ ಕಂಪ್ಲೇಂಟ್ ದಾಖಲಾಗಿಲ್ಲ.

ಇದನ್ನೂ ಓದಿ: ಡೆಲ್ಟಾ ಪ್ಲಸ್ ಡೆಲ್ಟಾ ರೂಪಾಂತರಿಗೆ ತಮಿಳುನಾಡಿನಲ್ಲಿ ಒಬ್ಬರು ಬಲಿ, ಸುರಕ್ಷತೆ ಕ್ರಮ ಹೆಚ್ಚಿಸಲು ಕೇಂದ್ರದ ನಿರ್ದೇಶನ

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ