Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ.

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ
ಮಟನ್​ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 26, 2021 | 4:50 PM

ಜೈಪುರ​: ಒಂದು ಮದುವೆ ಮುರಿಯಬೇಕು ಎಂದರೆ ಅಷ್ಟು ಬಲವಾದ ಕಾರಣ ಇರಬೇಕು. ಅದರಲ್ಲೂ ವಿವಾಹ ಸಮಾರಂಭದ ದಿನವೇ ಆ ಮದುವೆ ಮುರಿದು ಬೀಳುವುದು ಅಪರೂಪವೇ ಸರಿ. ಅಂಥ ಬಲವಾದ ಕಾರಣ ಇದ್ದರೆ ಮಾತ್ರ ಹಾಗೆಲ್ಲ ಆಗುತ್ತದೆ. ಆದರೆ ಒಡಿಶಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇನ್ನೇನು ಹಸೆಮಣೆ ಏರಬೇಕಿದ್ದ ವಧು-ವರರು ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ದಿನವೇ ಬೇರಾಗಿದ್ದಾರೆ.

ಮದುವೆಯಲ್ಲಿ ಮಟನ್​ ಮಾಡಿಸಿಲ್ಲ ಎಂಬ ಕಾರಣಕ್ಕೆ ಈ ವರ ತನಗೆ ಮದುವೆಯೇ ಬೇಡ ಎಂದಿದ್ದಾನೆ. ಅಲ್ಲದೆ, ಮದುವೆಯನ್ನು ಧಿಕ್ಕರಿಸಿ ಮನೆಗೆ ಹೋಗುವ ಮೊದಲು ಬೇರೆ ಯುವತಿಯನ್ನು ಮದುವೆಯಾಗಿದ್ದಾರೆ. 27ವರ್ಷದ ಈ ವರನ ಹೆಸರು ರಮಾಕಾಂತ್​ ಪಾತ್ರಾ..ಜೈಪುರದ ಸುಕಿಂದಾದ ನಿವಾಸಿ. ಬಾಂಧಾಗಾಂವ್​​ನ ಯುವತಿಯನ್ನು ವರಿಸಲು ಆ ಗ್ರಾಮಕ್ಕೆ ಆಗಮಿಸಿದ್ದ. ವರನ ಕಡೆಯವರೊಂದಿಗೆ ಬಂದ ಮೆರವಣಿಗೆಯಲ್ಲಿ ಇದ್ದವರಿಗೆ ಮೊದಲು ಊಟ ಆಗಲಿ ಎಂದು ಊಟಕ್ಕೆಂದು ಸಿದ್ಧತೆ ಮಾಡಿದ್ದಲ್ಲಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಗೆ ಹೋಗುತ್ತಿದ್ದಂತೆ ವರನ ಸಂಬಂಧಿಕರು, ಮೆರವಣಿಗೆಯಲ್ಲಿ ಇದ್ದವರು ಮೊದಲು ಮಟನ್​ ಕರ್ರಿಗೆ ಬೇಡಿಕೆಯಿಟ್ಟರು. ಆದರೆ ವಧುವಿನ ಕಡೆಯವರು ಮಟನ್ ಮಾಡಿಸಿರಲಿಲ್ಲ. ಇದೇ ಕಾರಣಕ್ಕೆ ಜಗಳ ಶುರುವಾಯಿತು. ವರನೂ ಈ ವಾಗ್ವಾದದಲ್ಲಿ ಪಾಲ್ಗೊಂಡು ತಮ್ಮವರ ಪರವಾಗಿ ವಾದಕ್ಕೆ ನಿಂತ. ಬರುಬರುತ್ತ ಪರಿಸ್ಥಿತಿ ತೀರ ಬಿಗಾಡಿಯಿಸಿತು. ನಂತರ ವರ ತನಗೆ ಮದುವೆಯೇ ಬೇಡವೆಂದು ಎದ್ದು ನಡೆದ.

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ. ಈ ಬಗ್ಗೆ ಪೊಲೀಸ್​ ಕಂಪ್ಲೇಂಟ್ ದಾಖಲಾಗಿಲ್ಲ.

ಇದನ್ನೂ ಓದಿ: ಡೆಲ್ಟಾ ಪ್ಲಸ್ ಡೆಲ್ಟಾ ರೂಪಾಂತರಿಗೆ ತಮಿಳುನಾಡಿನಲ್ಲಿ ಒಬ್ಬರು ಬಲಿ, ಸುರಕ್ಷತೆ ಕ್ರಮ ಹೆಚ್ಚಿಸಲು ಕೇಂದ್ರದ ನಿರ್ದೇಶನ

ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ