ಗುಜರಾತ್​ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ; ಇಂದು ಹೊಸ ಸಚಿವರ ಪ್ರಮಾಣ ವಚನ ಸಾಧ್ಯತೆ

ಇನ್ನು ಗುಜರಾತ್​​ನಲ್ಲಿ ಹೊಸ ಮಂತ್ರಿಮಂಡಲ ರಚನೆ ಸಂಬಂಧ ಗುಜರಾತ್​ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಯಾದವ್​ ಅವರು ಸತತ ಎರಡು ದಿನಗಳಿಂದ ಸಭೆ ನಡೆಸುತ್ತಿದ್ದಾರೆ.

ಗುಜರಾತ್​ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ; ಇಂದು ಹೊಸ ಸಚಿವರ ಪ್ರಮಾಣ ವಚನ ಸಾಧ್ಯತೆ
ಗುಜರಾತ್​ ಬಿಜೆಪಿ
Edited By:

Updated on: Sep 16, 2021 | 12:02 PM

ದೆಹಲಿ: ಗುಜರಾತ್​​ನ ನೂತನ ಮುಖ್ಯಮಂತ್ರಿ (Gujarat New Chief Minister)ಯಾಗಿ ಭೂಪೇಂದ್ರ ಪಟೇಲ್​ (Bhupendra Patel) ಸೆಪ್ಟೆಂಬರ್​ 13ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಮೂರು ದಿನಗಳಾದರೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಬುಧವಾರವೇ ಹೊಸ ಸಚಿವ ಸಂಪುಟ ರಚನೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ, ಕೆಲವು ಆಂತರಿಕ ಕಲಹ, ಭಿನ್ನಾಭಿಪ್ರಾಯಗಳಿಂದಾಗಿ ಅದಾಗಲಿಲ್ಲ. ಈಗಾಗಲೇ ಇರುವ ಕೆಲವು ಸಚಿವರನ್ನು ಹೊಸ ಸಂಪುಟದಿಂದ ಕೈಬಿಡಲಾಗುವ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಎಂದು ಹೇಳಲಾಗಿದೆ.  

ಇಂದು (ಗುರುವಾರ) ಮಧ್ಯಾಹ್ನ 2ರಿಂದ 4 ಗಂಟೆಯ ಮಧ್ಯೆ ಹೊಸ ಮಂತ್ರಿ ಮಂಡಳಿ ರಚನೆಯಾಗಲಿದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸಿ.ಆರ್​.ಪಾಟೀಲ್​ ತಿಳಿಸಿದ್ದಾಗಿ ಇಂಡಿಯನ್​ ಎಕ್ಸ್​​ಪ್ರೆಸ್​ ವರದಿ ಮಾಡಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ರಚನೆ ಸಂಬಂಧ ರಾಜಭವನದಲ್ಲಿ ಸಕಲ ಸಿದ್ಧತೆಗಳೂ ನಡೆದಿವೆ ಎಂದು ಹೇಳಿದ್ದಾರೆ.

ಎರಡು ದಿನಗಳ ಸತತ ಸಭೆ
ಇನ್ನು ಗುಜರಾತ್​​ನಲ್ಲಿ ಹೊಸ ಮಂತ್ರಿಮಂಡಲ ರಚನೆ ಸಂಬಂಧ ಗುಜರಾತ್​ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಯಾದವ್​ ಅವರು ಸತತ ಎರಡು ದಿನಗಳಿಂದ ಸಭೆ ನಡೆಸುತ್ತಿದ್ದಾರೆ. ಮಂತ್ರಿಮಂಡಲ ಸೇರುವ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ವ್ಯಾಪಕ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಹಲವು ಶಾಸಕರು ಮಾಜಿ ಮುಖ್ಯಮಂತ್ರಿ ವಿಜಯ್​ ರೂಪಾನಿಯವರನ್ನೂ ಭೇಟಿಯಾಗಿದ್ದಾರೆ.

ಇದನ್ನೂ ಓದಿ: ವೃದ್ಧಾಪ್ಯ ವೇತನ ಬಂದಿಲ್ಲವೆಂದು ಅಜ್ಜಿಯ ಅಳಲು, ತಹಶೀಲ್ದಾರ್​ಗೆ ವಿಡಿಯೋ ಕಾಲ್ ಮಾಡಿ ನೆರವಿಗೆ ಬಂದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ

ರಸ್ತೆ ಮಧ್ಯೆ ಕುಣಿದು ವಿಡಿಯೋ ಹರಿಬಿಟ್ಟ ಯುವತಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ನೋಟೀಸು ನೀಡಿದ ಪೊಲೀಸರು

Published On - 11:54 am, Thu, 16 September 21

Web contact

TV9 Kannada

Read More
Follow Us