ನಾಲ್ವರು ಕ್ಯಾಬ್ ಬುಕ್​ ಮಾಡಿದ್ರು, ಲೊಕೇಷನ್​ಗೆ ಬಂದಾಗ ಕೀ ಕಸಿದು, ಚಾಲಕನನ್ನು ತಳ್ಳಿ ಕಾರಿನೊಂದಿಗೆ ಪರಾರಿ

ನಾಲ್ವರು ಆ್ಯಪ್ ಮೂಲಕ ಕ್ಯಾಬ್ ಬುಕ್​ ಮಾಡಿ , ಚಾಲಕ ಕರೆದುಕೊಂಡು ಹೋಗಲು ಲೊಕೇಷನ್​ಗೆ ಬಂದಾಗ ಕಾರನ್ನೇ ಕದ್ದು ಪರಾರಿಯಾಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ನಾಲ್ವರು ಕ್ಯಾಬ್ ಬುಕ್​ ಮಾಡಿದ್ರು, ಲೊಕೇಷನ್​ಗೆ ಬಂದಾಗ ಕೀ ಕಸಿದು, ಚಾಲಕನನ್ನು ತಳ್ಳಿ ಕಾರಿನೊಂದಿಗೆ ಪರಾರಿ
ಟ್ಯಾಕ್ಸಿ

Updated on: May 14, 2023 | 3:02 PM

ನಾಲ್ವರು ಆ್ಯಪ್ ಮೂಲಕ ಕ್ಯಾಬ್ ಬುಕ್​ ಮಾಡಿ , ಚಾಲಕ ಕರೆದುಕೊಂಡು ಹೋಗಲು ಲೊಕೇಷನ್​ಗೆ ಬಂದಾಗ ಕಾರನ್ನೇ ಕದ್ದು ಪರಾರಿಯಾಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಮಾನೇಸರ್‌ನ ಐಎಂಟಿ ಬಳಿಯ ಚೌಕರ್ ಕಿ ಧನಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಅಜಂಗಢ್‌ನ ಕ್ಯಾಬ್ ಚಾಲಕ ಹರೀಶ್ ಕುಮಾರ್ ಕ್ಯಾಬ್ ಅಗ್ರಿಗೇಟರ್ ಆ್ಯಪ್‌ನಲ್ಲಿ ಬುಕಿಂಗ್ ಸ್ವೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಪಿಕಪ್ ಪಾಯಿಂಟ್ ತಲುಪಿದರು, ನಾಲ್ಕು ಜನರು ನಿಂತಿರುವುದನ್ನು ಕಂಡಿದ್ದಾರೆ, ನೀವೇ ಕ್ಯಾಬ್ ಬುಕ್ ಮಾಡಿದ್ದಾ ಎಂದು ಎಂದು ಕ್ಯಾಬ್ ಇಳಿಯುತ್ತಿದ್ದಂತೆ ಅವರು ಆತನಿಂದ ಕಾರಿನ ಕೀಗಳನ್ನು ಕಸಿದುಕೊಂಡು, ಅವರನ್ನು ತಳ್ಳಿ ಅವರ ವಾಹನದಲ್ಲಿ ಪರಾರಿಯಾಗಿದ್ದಾರೆ. ದೂರುದಾರರ ಮೊಬೈಲ್ ಫೋನ್ ಕೂಡ ಕ್ಯಾಬ್ ಒಳಗೆ ಇತ್ತು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಕಾರು-ಬೈಕ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೆ ಇಬ್ಬರು ಸಾವು: ದ್ವೇಷಕ್ಕೆ ನಡೆಯಿತಾ ಅಪಘಾತ ರೀತಿಯ ಕೊಲೆ?

ಘಟನೆಗೆ ಸಂಬಂಧಿಸಿದಂತೆ ಸೆಕ್ಟರ್ 10 ಎ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us