AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿವೃದ್ಧಿಹೊಂದದ ರಾಜ್ಯಗಳ ಭಾಷೆ ಹಿಂದಿ, ರಾಜ್ಯದಲ್ಲಿ ಹಿಂದಿಗೆ ಅನುಮತಿ ನೀಡಿದರೆ ನಾವು ಗುಲಾಮ ಶೂದ್ರರಾಗುತ್ತೇವೆ: ತಮಿಳುನಾಡು ಸಂಸದ

ಹಿಂದಿ ಕಲಿಯುವ ಅಗತ್ಯವೇ ಇಲ್ಲ ಎಂದು ವಾದಿಸಿದ ಡಿಎಂಕೆ ನಾಯಕ, ಅಭಿವೃದ್ಧಿಹೊಂದಿದ ಕೆಲವು ರಾಜ್ಯಗಳಲ್ಲಿ ಹಿಂದಿ ಪ್ರಥಮ ಭಾಷೆಯೇ ಅಲ್ಲ. ಅಭಿವೃದ್ಧಿ ಹೊಂದದ ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಹಿಂದಿ ಪ್ರಥಮ ಭಾಷೆಯಾಗಿ..

ಅಭಿವೃದ್ಧಿಹೊಂದದ ರಾಜ್ಯಗಳ ಭಾಷೆ ಹಿಂದಿ, ರಾಜ್ಯದಲ್ಲಿ ಹಿಂದಿಗೆ ಅನುಮತಿ ನೀಡಿದರೆ ನಾವು ಗುಲಾಮ ಶೂದ್ರರಾಗುತ್ತೇವೆ: ತಮಿಳುನಾಡು ಸಂಸದ
ಟಿಕೆಎಸ್ ಇಳಂಗೋವನ್
TV9 Web
| Edited By: |

Updated on:Jun 06, 2022 | 8:05 PM

Share

ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿಕೆ (Hindi imposition) ಪ್ರಯತ್ನಗಳ ವಿರುದ್ಧ ನಡೆದ ಸಾರ್ವಜನಿಕ ಸಭೆಯಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ಸಂಸದ ಟಿಕೆಎಸ್ ಇಳಂಗೋವನ್ (TKS Elangovan) ಅವರು ಜಾತಿ ನಿಂದನೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದಿ ನಮ್ಮನ್ನು ಶೂದ್ರರನ್ನಾಗಿ ಮಾಡುತ್ತದೆ. ಇದರಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದು ನಮ್ಮ ನೆಲವನ್ನು ಪ್ರವೇಶಿಸಿದರೆ, ಅದು ಹಾನಿಯನ್ನುಂಟುಮಾಡುತ್ತದೆ. ಅದು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಮತ್ತು ನಮ್ಮ ಅಸ್ತಿತ್ವದಲ್ಲಿರುವ ಸಹೋದರತ್ವವನ್ನು ನಾಶಪಡಿಸುತ್ತದೆ, ಎಂದು ಇಳಂಗೋವನ್ ಶನಿವಾರ ಹೇಳಿದ್ದಾರೆ. ಸ್ವಾತಂತ್ರ್ಯಕ್ಕೆ ಮೊದಲು ಉತ್ತರ ಭಾರತದಲ್ಲಿ ವ್ಯಕ್ತಿಯೊಬ್ಬ ರಾಜನಾಗಬೇಕಿದ್ದರೆ ವರ್ಣಾಶ್ರಮದ ಪ್ರಕಾರ ಆತ ಕ್ಷತ್ರಿಯನಾಗಿರಬೇಕು.ಆದರೆ ದಕ್ಷಿಣ ಭಾರತದಲ್ಲಿನ ಪರಿಸ್ಥಿತಿ ಅದಾಗಿರಲಿಲ್ಲ. ಜಗತ್ತಿನಲ್ಲಿ ಎಲ್ಲರನ್ನೂ ಸಮಾನವಲಾಗಿ ಕಾಣುವ ನಾಗರಿಕತೆ ಎಂದರೆ ಅದು ತಮಿಳು ಸಂಸ್ಕೃತಿ. ಈಗ ಅವರು ಅದನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಮನುಧರ್ಮ ತರುವುದಕ್ಕಾಗಿ ಅವರು ಹಿಂದಿ ಹೇರಿಕೆ ಮಾಡುತ್ತಿದ್ದಾರೆ. ನಾವು ಅದಕ್ಕೆ ಅನುಮತಿಸಬಾರದು, ಹಾಗೆ ನಾವು ಅನುಮತಿಸಿದರೆ ನಾವು ಗುಲಾಮ ಶೂದ್ರರಾಗುತ್ತೇವೆ ಎಂದಿದ್ದಾರೆ.

ಹಿಂದಿ ಕಲಿಯುವ ಅಗತ್ಯವೇ ಇಲ್ಲ ಎಂದು ವಾದಿಸಿದ ಡಿಎಂಕೆ ನಾಯಕ, ಅಭಿವೃದ್ಧಿಹೊಂದಿದ ಕೆಲವು ರಾಜ್ಯಗಳಲ್ಲಿ ಹಿಂದಿ ಪ್ರಥಮ ಭಾಷೆಯೇ ಅಲ್ಲ. ಅಭಿವೃದ್ಧಿ ಹೊಂದದ ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಹಿಂದಿ ಪ್ರಥಮ ಭಾಷೆಯಾಗಿದೆ. ಹೀಗಿರುವಾಗ ನಾವೇಕೆ ಹಿಂದಿಕಲಿಯಬೇಕು ಎಂದು ಸಚಿವರು ಕೇಳಿದ್ದಾರೆ. ಸಂಸದರ ಪ್ರಕಾರ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ , ಕರ್ನಾಟಕ,ಗುಜರಾತ್ ಮತ್ತು ಪಂಜಾಬ್ ಅಭಿವೃದ್ಧಿಹೊಂದಿದ ರಾಜ್ಯಗಳಾಗಿವೆ.

ಇದನ್ನೂ ಓದಿ
Image
60 ವರ್ಷಗಳ ಹಿಂದೆ ನಾಶವಾದ ರಾಮೇಶ್ವರಂ-ಧನುಷ್ಕೋಡಿ ಮಾರ್ಗವನ್ನು ಪುನಃಸ್ಥಾಪಿಸಲಿದೆ ಭಾರತೀಯ ರೈಲ್ವೆ
Image
M Karunanidhi ರಾಜಕೀಯ, ಸಾಹಿತ್ಯದ ಮೂಲಕ ತಮಿಳುನಾಡಿನ ಜನನಾಯಕನಾದ ಕರುಣಾನಿಧಿ ಎಂಬ ದ್ರಾವಿಡ ಸೂರ್ಯ
Image
PM Modi in Chennai ತಮಿಳು ಭಾಷೆಗೆ ಹಿಂದಿಯ ಸ್ಥಾನ ನೀಡಿ: ವೇದಿಕೆ ಮೇಲೆ ಪ್ರಧಾನಿ ಮೋದಿಗೆ ಮನವಿ ಮಾಡಿದ ಸ್ಟಾಲಿನ್

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:04 pm, Mon, 6 June 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?