AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

M Karunanidhi ರಾಜಕೀಯ, ಸಾಹಿತ್ಯದ ಮೂಲಕ ತಮಿಳುನಾಡಿನ ಜನನಾಯಕನಾದ ಕರುಣಾನಿಧಿ ಎಂಬ ದ್ರಾವಿಡ ಸೂರ್ಯ

ತಾನು ಪರಮ ನಾಸ್ತಿಕ ಎನುತ್ತಿದ್ದ ಕರುಣಾನಿಧಿ ಅವರ ಆರೋಗ್ಯ ಹದಗೆಟ್ಟಾಗ ಇಡೀ ತಮಿಳುನಾಡು ಅವರಿಗಾಗಿ ಪ್ರಾರ್ಥಿಸಿತು. ಪುರೈಟ್ಚಿ ತಲೈವಿ ಜಯಲಲಿತಾ ಅವರೊಂದಿಗೆ ಸೈದ್ಧಾಂತಿಕ ಮತ್ತು ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಕರುಣಾನಿಧಿ, ಜೀವನದಲ್ಲಿ ತಾನು ಕಂಡ ಮಹಾನ್ ಹೋರಾಟಗಾರ್ತಿ ಜಯಲಲಿತಾ...

M Karunanidhi ರಾಜಕೀಯ, ಸಾಹಿತ್ಯದ ಮೂಲಕ ತಮಿಳುನಾಡಿನ ಜನನಾಯಕನಾದ ಕರುಣಾನಿಧಿ ಎಂಬ ದ್ರಾವಿಡ ಸೂರ್ಯ
ಕರುಣಾನಿಧಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 03, 2022 | 7:00 AM

Share

‘ಎನ್ ಉಯಿರಿನುಂ ಮೇಲಾನ ಉಡನ್​​ಪ್ಪಿರಪ್ಪುಗಳೇ’ ಬಿಳಿ ಧೋತಿ, ಶರ್ಟ್ ಧರಿಸಿ, ಹಳದಿ ಶಾಲು ಹೊದ್ದು ದಪ್ಪದ ಕಪ್ಪು ಕನ್ನಡಕ ಧರಿಸಿದ ಕರುಣಾನಿಧಿ(Karunanidhi) ಭಾಷಣ ಆರಂಭಿಸುತ್ತಿದ್ದದ್ದೇ ಹೀಗೆ. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಡಿಎಂಕೆ (DMK) ನಾಯಕ, ಕಲೈಂಜರ್ ಕರುಣಾನಿಧಿ ರಾಜಕೀಯ, ಸಿನಿಮಾ, ಸಾಮಾಜಿಕ ಹೋರಾಟ ಮತ್ತು ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ತಮಿಳುನಾಡಿನ ಜನಮನಸ್ಸನ್ನು ಗೆದ್ದವರು. ಕರುಣಾನಿಧಿಯವರ 98ನೇ ಜಯಂತಿ (M Karunanidhi Birth Anniversary )ಇಂದು. ವಯೋಸಹಜ ಕಾಯಿಲೆಗಳಿಂದಾಗಿ 2018 ರಲ್ಲಿ ನಿಧನರಾದಾಗ ಅವರಿಗೆ ತೊಂಬತ್ನಾಲ್ಕು ವರ್ಷ ವಯಸ್ಸಾಗಿತ್ತು. ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ತಿರುಕುವಲೈನ ಮುತ್ತುವೇಲರ್ ಮತ್ತು ಅಂಜುಕಮ್ ಅಮ್ಮಯ್ಯರ್ ಅವರ ಮಗ ಕರುಣಾನಿಧಿ (ಅವರ ಮೊದಲ ಹೆಸರು ದಕ್ಷಿಣಮೂರ್ತಿ) ತಮಿಳುನಾಡಿನ ಜನಪ್ರಿಯ ನಾಯಕ, ಹೋರಾಟಗಾರ, ಪರಮ ನಾಸ್ತಿಕ. ವಿಚಾರವಾದಿ ಚಳವಳಿಯತ್ತ ಆಕರ್ಷಿತರಾಗಿದ್ದರಿಂದ ಕರುಣಾನಿಧಿ ಎಂಬ ಹೆಸರು ನಿನಗೆ ಒಪ್ಪುತ್ತದೆ ಎಂದಿದ್ದರು ಅಣ್ಣಾದೊರೈ. ಕರುಣಾನಿಧಿಯವರ ಶಾಲಾ ದಿನಗಳಿಂದಲೂ ನಾಟಕ, ಕವನ, ಕಥೆಗಳನ್ನು ಬರೆಯುತ್ತಿದ್ದರು. ಹದಿಮೂರನೆಯ ವಯಸ್ಸಿನಲ್ಲಿ ಜಸ್ಟಿಸ್ ಪಕ್ಷದ ಕಾರ್ಯಕರ್ತ ಅಳಗಿರಿ ಸ್ವಾಮಿಯವರ ಭಾಷಣಗಳಿಂದ ಆಕರ್ಷಿತರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ವಿದ್ಯಾರ್ಥಿಗಳ ಸಾಹಿತ್ಯ ಕಲೆಗಳನ್ನು ಉತ್ತೇಜಿಸಲು ಎಲೈನರ್ ಮರುಮಲರರ್ಚಿ ಎಂಬ ಸಂಘಟನೆ ರೂಪುಗೊಂಡಿದ್ದು ಕರುಣಾನಿಧಿ ಅವರ ನೇತೃತ್ವದಿಂದಾಗಿತ್ತು. ಇದೇ ನಂತರ ವಿದ್ಯಾರ್ಥಿ ಸಂಘಟನೆಯಾಗಿ ಮಾರ್ಪಟ್ಟಿತು.

ಕರುಣಾನಿಧಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದರು. ತಂದೈ ಪೆರಿಯಾರ್ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ಕರುಣಾನಿಧಿ ಈರೋಡ್‌ನಿಂದ ಪ್ರಕಟವಾದ ಕುಡಿಯರಶ್ ಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಅವರು ದ್ರಾವಿಡ ವಿಚಾರಗಳನ್ನು ಪ್ರಚಾರ ಮಾಡಲು ಮುರಸೋಲಿ ಪತ್ರಿಕೆಯನ್ನು ಸ್ಥಾಪಿಸಿದರು. ಈ ಸಮಯದಲ್ಲಿ ಕೊಯಮತ್ತೂರಿನ ಜುಪಿಟರ್ ಪಿಕ್ಚರ್ಸ್ ರಾಜಕುಮಾರಿ ಚಿತ್ರಕ್ಕೆ ಸಂಭಾಷಣೆ ಬರೆಯಲು ಅವರನ್ನು ಸಂಪರ್ಕಿಸಿತು. ಪೆರಿಯಾರ್ ಅವರಲ್ಲಿ ಅನುಮತಿ ಕೇಳಿದಾಗ ಅವರು ಯುವ ಕರುಣಾನಿಧಿಯನ್ನು ಪ್ರೋತ್ಸಾಹಿಸಲಿಲ್ಲ. ಕರುಣಾನಿಧಿ ಅವರ ಕಲಾಜೀವನದ ಮಹತ್ವದ ತಿರುವು ನೀಡಿದ್ದು ರಾಜಕುಮಾರಿ ಚಿತ್ರಕ್ಕೆ ಬರೆದ ಸಂಭಾಷಣೆ. ಅವರು ಆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂಜಿಆರ್ ಜತೆ  ಸ್ನೇಹ ಬೆಳೆಸಿದರು. ಗಾಂಧೀಜಿಯವರ ಅಭಿಮಾನಿಯಾಗಿದ್ದ ಎಂಜಿಆರ್ ಅವರನ್ನು ದ್ರಾವಿಡ ವಿಚಾರಗಳತ್ತ ಸೆಳೆದವರು ಕೂಡಾ ಕರುಣಾನಿಧಿಯೇ.

1969ರಲ್ಲಿ ಡಿಎಂಕೆಯ ಸಂಸ್ಥಾಪಕ ನಾಯಕ ಸಿ.ಎನ್. ಅಣ್ಣಾದೊರೈ ನಿಧನದ ನಂತರ ಪಕ್ಷದ ನಾಯಕತ್ವವನ್ನು ಕರುಣಾನಿಧಿ ವಹಿಸಿಕೊಂಡರು. ಎಂಜಿಆರ್ ಜೊತೆಗಿನ ವಿಚಾರಗಳ ಘರ್ಷಣೆಯಿಂದ ಇಬ್ಬರೂ ಬೇರೆಯಾದರು. ಎಂ.ಜಿ.ಆರ್ ಅವರು ಎಐಎಡಿಎಂಕೆ ರಚನೆ ಮಾಡಿದ್ದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು.

ಕರುಣಾನಿಧಿ ಅವರು 1969-71, 1971-74, 1989-91, 1996-2001 ಮತ್ತು 2006-2011ರಲ್ಲಿ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ವಿಶೇಷವೆಂದರೆ  ವೃದ್ದಾಪ್ಯದ ದಿನಗಳಲ್ಲಿ ಕರುಣಾನಿಧಿ ಅವರು ಸಾರ್ವಜನಿಕರಿಂದ ದೂರವಿದ್ದು ಸಾಹಿತ್ಯದಲ್ಲಿ ತೊಡಗಿದ್ದರು. ಸಿನಿಮಾಗಳಿಗೆ ಸಂಭಾಷಣೆ ಬರೆಯುವುದು, ಕವಿತೆಗಳನ್ನು ಬರೆಯುವುದರಲ್ಲಿ ಅವರು ಮಗ್ನರಾಗಿದ್ದರು.

ತಾನು ಪರಮ ನಾಸ್ತಿಕ ಎನುತ್ತಿದ್ದ ಕರುಣಾನಿಧಿ ಅವರ ಆರೋಗ್ಯ ಹದಗೆಟ್ಟಾಗ ಇಡೀ ತಮಿಳುನಾಡು ಅವರಿಗಾಗಿ ಪ್ರಾರ್ಥಿಸಿತು. ಪುರೈಟ್ಚಿ ತಲೈವಿ ಜಯಲಲಿತಾ ಅವರೊಂದಿಗೆ ಸೈದ್ಧಾಂತಿಕ ಮತ್ತು ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಕರುಣಾನಿಧಿ, ಜೀವನದಲ್ಲಿ ತಾನು ಕಂಡ ಮಹಾನ್ ಹೋರಾಟಗಾರ್ತಿ ಜಯಲಲಿತಾ ಎಂದು ಹೇಳಿದ್ದರು.

ರಾಮಸೇತು ಕುರಿತು ಕರುಣಾನಿಧಿ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದ ಕರುಣಾನಿಧಿ ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ? ಎಂದು ಕೇಳಿದ್ದರು.

ಮ್ಯಾಕ್ಸಿಂ ಗಾರ್ಕಿ ಅವರು ಬರೆದ ‘ದಿ ಮದರ್’ನ ತಮಿಳು ಅನುವಾದ ಸೇರಿದಂತೆ 200 ಕ್ಕೂ ಹೆಚ್ಚು ಪುಸ್ತಕಗಳನ್ನು ಕರುಣಾನಿಧಿ ಬರೆದಿದ್ದಾರೆ. 60 ಕ್ಕೂ ಹೆಚ್ಚು ಚಿತ್ರಕಥೆಗಳು, ಜೀವನಚರಿತ್ರೆಗಳು, ಕಾದಂಬರಿಗಳು, ಐತಿಹಾಸಿಕ ಕಾದಂಬರಿಗಳು, ನಾಟಕಗಳು, ಚಲನಚಿತ್ರ ಗೀತೆಗಳು ಹೀಗೆ ಕಲೈಂಜರ್ ಕೈಯಾಡಿಸದ ತಮಿಳು ಸಾಹಿತ್ಯದ ಪ್ರಕಾರವೇ ಇಲ್ಲ. ಕಲೆ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಅಣ್ಣಾಮಲೈ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 2018 ಅಗಸ್ಟ್ 7ರಂದು ಮುತ್ತುವೇಲ್ ಕರುಣಾನಿಧಿ ಎಂಬ ಎಂ.ಕರುಣಾನಿಧಿ ಇಹಲೋಕ ತ್ಯಜಿಸಿದರು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ