ಮುಂಬೈ ಹೋರ್ಡಿಂಗ್ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

ಮುಂಬೈನಲ್ಲಿ ಜಾಹೀರಾತು ಫಲಕ ಬಿದ್ದು 16 ಜೀವಗಳನ್ನು ಬಲಿ ಪಡೆದಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈ ಹೋರ್ಡಿಂಗ್ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು
ಹೋರ್ಡಿಂಗ್​
Follow us
|

Updated on: May 17, 2024 | 11:56 AM

ಮುಂಬೈನ ಘಾಟ್ಕೋಪರ್ ಹೋರ್ಡಿಂಗ್(Hoarding)​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಘಾಟ್ಕೋಪರ್​ನ ಪೆಟ್ರೋಲ್​ ಬಂಕ್ ಮೇಲೆ ಬೃಹತ್ ಗಾತ್ರದ ಹೋರ್ಡಿಂಗ್​ ಬಿದ್ದಿತ್ತು. ಇದರ ಕೆಳಗೆ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದರು. ಇವರ ರಕ್ಷಣೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ ಧಾವಿಸಿತ್ತು. ಸುಮಾರು 66 ಗಂಟೆಗಳ ಕಾರ್ಯಾಚರಣೆ ಗುರುವಾರ ಅಂತ್ಯಗೊಂಡಿದ್ದು, 16 ಮಂದಿ ಶವಗಳು ಪತ್ತೆಯಾಗಿದೆ.

ಜಾಹೀರಾತು ಸಂಸ್ಥೆ, ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಆಗಿತ್ತು. ಕಂಪನಿಯ ಮಾಲೀಕ ಭವೇಶ್ ಭಿಂಡೆ 3 ದಿನಗಳ ಕಾಲ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಅಂತಿಮವಾಗಿ ಉದಯಪುರದಿಂದ ಬಂಧಿಸಲಾಯಿತು.

ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ತಿಳಿಯುತ್ತಿದ್ದಂತೆ ಭವೇಶ್​ ನಾಪತ್ತೆಯಾಗಿದ್ದರು. ಸುಳ್ಳು ಗುರುತು ಇಟ್ಟುಕೊಂಡು ಬೇರೆ ಬೇರೆ ನಗರಗಳಿಗೆ ಹೋಗುತ್ತಲೇ ಇದ್ದ. ಆದರೆ ಪೊಲೀಸರ ವಿಶೇಷ ತಂಡ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ಮುಂಬೈನಲ್ಲಿ ಹೋರ್ಡಿಂಗ್ ಕುಸಿತ; ಮೃತರ ಸಂಖ್ಯೆ 14ಕ್ಕೆ ಏರಿಕೆ, ಸಿಎಂ ಏಕನಾಥ್ ಶಿಂಧೆ ಪರಿಹಾರ ಘೋಷಣೆ

ಪೊಲೀಸರ ಕಾರ್ಯಾಚರಣೆ ಎಷ್ಟು ಜಾಣ್ಮೆಯಿಂದ ಕೂಡಿತ್ತು ಎಂದರೆ ಭಿಂಡೆಯನ್ನು ಹಿಡಿಯಲು ತಂಡವೊಂದು ಪಟ್ಟಣದಲ್ಲಿದೆ ಎಂದು ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ. ಈ ಘಟನೆಯು ಮುಂಬೈನಲ್ಲಿ ಜಾಹೀರಾತು ಸ್ಥಾಪನೆಗಳ ನಿಯಂತ್ರಕ ಮೇಲ್ವಿಚಾರಣೆಯಲ್ಲಿ ತೀವ್ರವಾದ ಲೋಪಗಳನ್ನು ಎತ್ತಿ ತೋರಿಸಿದೆ, ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಾದ ಜಾರಿಗಾಗಿ ಒತ್ತಾಯಿಸಲಾಗುತ್ತಿದೆ.

ಈ ಘಟನೆಯಲ್ಲಿ ಸಾವನ್ನಪ್ಪಿದ್ದವರಲ್ಲಿ ವಾಯು ಸಂಚಾರ ನಿಯಂತ್ರಣ ಕೇಂದ್ರದ ನಿವೃತ್ತ ಮುಖ್ಯ ವ್ಯವಸ್ಥಾಪಕ ಹಾಗೂ ಅವರ ಪತ್ನಿ ಕೂಡ ಸೇರಿದ್ದಾರೆ. ಚಲಿಸುತ್ತಿದ್ದ ಕಾರು ಬೀಳುತ್ತಿದ್ದ ಹೋರ್ಡಿಂಗ್ ಅಡಿ ಸಿಲುಕಿತ್ತು. ಇವರನ್ನೂ ಒಳಗೊಂಡಂತೆ 16 ಮಂದಿಯ ಶವವನ್ನು ಹೊರ ತೆಗೆಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ