AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ದಂಡ ಪಾವತಿಸುವವರಿಗೆ ಭಾರೀ ರಿಯಾಯಿತಿ ಘೋಷಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸ್

ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಕಮಿಷನರೇಟ್‌ಗಳ ಮಿತಿಯಲ್ಲಿ 600 ಕೋಟಿ ರೂ.ಗಳ 1.6 ಕೋಟಿಗೂ ಹೆಚ್ಚು ಚಲನ್‌ಗಳು ಬಾಕಿ ಉಳಿದಿವೆ.

ಟ್ರಾಫಿಕ್ ದಂಡ ಪಾವತಿಸುವವರಿಗೆ ಭಾರೀ ರಿಯಾಯಿತಿ ಘೋಷಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸ್
ಟ್ರಾಫಿಕ್ ಪೊಲೀಸ್
TV9 Web
| Edited By: |

Updated on:Feb 24, 2022 | 7:08 PM

Share

ಹೈದರಾಬಾದ್: ಪ್ರಿಯ ಹೈದರಾಬಾದ್ ನಿವಾಸಿಗಳೇ, ನಿಮ್ಮ ಬಳಿ ಟ್ರಾಫಿಕ್ ಚಲನ್ (traffic challans) ಬಾಕಿ ಇದೆಯೇ? ಹೌದು ಎಂದಾದರೆ, ನಿಮಗೊಂದು ಗುಡ್ ನ್ಯೂಸ್ ಇದೆ. ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡದ ಟ್ರಾಫಿಕ್ ಪೊಲೀಸರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ನಲ್ಲಿ ನೋಂದಾಯಿಸಲಾದ ವಾಹನಗಳ ಮೇಲೆ ಟ್ರಾಫಿಕ್ ದಂಡ (Traffic Fine) ಪಾವತಿಯ ಮೇಲೆ ಭಾರೀ ರಿಯಾಯಿತಿ ನೀಡಲು ನಿರ್ಧರಿಸಿದ್ದಾರೆ. ಚಲನ್ ಮನ್ನಾವನ್ನು ಮಾನವೀಯ ಸೂಚಕ ಎಂದು ಕರೆದಿರುವ ಪೊಲೀಸರು, ಕಳೆದ ಎರಡು ವರ್ಷಗಳಲ್ಲಿ COVID ಸಾಂಕ್ರಾಮಿಕ ರೋಗದಿಂದಾಗಿ ಸಾರ್ವಜನಿಕರು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಲೈವ್‌ಮಿಂಟ್ ವರದಿ ಮಾಡಿದ್ದು, ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಕಮಿಷನರೇಟ್‌ಗಳ ಮಿತಿಯಲ್ಲಿ 600 ಕೋಟಿ ರೂ.ಗಳ 1.6 ಕೋಟಿಗೂ ಹೆಚ್ಚು ಚಲನ್‌ಗಳು ಬಾಕಿ ಉಳಿದಿವೆ. ಅವುಗಳಲ್ಲಿ 60% ಕೇಸುಗಳು ಸಂಚಾರ ಉಲ್ಲಂಘನೆಗಾಗಿ ದ್ವಿಚಕ್ರ ವಾಹನಗಳ ವಿರುದ್ಧ ಇವೆ ಎಂದು ವರದಿಯಾಗಿದೆ. 85% ಬಾಕಿ ಇರುವ ಎಲ್ಲಾ ಚಲನ್‌ಗಳು ದ್ವಿಚಕ್ರ ವಾಹನ ಮಾಲೀಕರು ಅಥವಾ ಆಟೋ ಮಾಲೀಕರು ಮುಖ್ಯವಾಗಿ ಸಮಾಜದ ಮಧ್ಯಮ / ಕೆಳ ಮಧ್ಯಮ / ಬಡ ವರ್ಗಗಳಿಂದ ಬಂದವರಾಗಿದ್ದಾರೆ.

ಚಲನ್ ರಿಯಾಯಿತಿ ಯೋಜನೆಯಡಿ ದ್ವಿಚಕ್ರ ವಾಹನ ಮಾಲೀಕರು ಶೇ. 25, ಕಾರು ಮಾಲೀಕರು ಶೇ. 50ರಷ್ಟು ಮತ್ತು ಆರ್‌ಟಿಸಿ ಬಸ್‌ ಮಾಲೀಕರು ಶೇ. 30ರಷ್ಟು ಬಾಕಿ ಪಾವತಿಸಿದರೆ, ತೆಲಂಗಾಣ ಪೊಲೀಸರು ಉಳಿದ ಮೊತ್ತವನ್ನು ಮನ್ನಾ ಮಾಡುತ್ತಾರೆ. ಸಂಚಾರದ ವೇಳೆ ಚಲನ್ ಪಾವತಿಸುವಂತೆ ಸಂಚಾರಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ ಸಲಹೆ ನೀಡುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಾಚರಣೆಯಲ್ಲಿ ಟ್ರಾಫಿಕ್ ಪೊಲೀಸರು ಎಷ್ಟು ಬಾಕಿಯನ್ನು ತೆರವುಗೊಳಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ದ್ವಿಚಕ್ರ ವಾಹನದ ವಿರುದ್ಧ ಚಲನ್‌ಗಳಿಗೆ 25% ಮೊತ್ತವನ್ನು ಪಾವತಿಸಿದರೆ, ಉಳಿದ 75% ಅನ್ನು ಮನ್ನಾ ಮಾಡಲಾಗುತ್ತದೆ. ತಳ್ಳುಗಾಡಿಗಳು ಮತ್ತು ಸಣ್ಣಪುಟ್ಟ ಮಾರಾಟಗಾರರು 20% ಚಲನ್ ಪಾವತಿಸಿದರೆ 80% ಮನ್ನಾ ಮಾಡಲಾಗುತ್ತದೆ. RTC ಚಾಲಕರು 30% ಪಾವತಿಸಿದರೆ 70% ಮನ್ನಾ ಮಾಡಲಾಗುತ್ತದೆ. ಕಾರು, ಲಘು ಮೋಟಾರು ವಾಹನಗಳು, ಜೀಪುಗಳು ಮತ್ತು ಭಾರೀ ವಾಹನಗಳ ಮಾಲೀಕರು ಶೇ.50ರಷ್ಟು ಪಾವತಿಸಿದರೆ ಉಳಿದ ಮೊತ್ತವನ್ನು ಮನ್ನಾ ಮಾಡಲಾಗುತ್ತದೆ. “ ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ವಿರುದ್ಧ ಭ್ರಷ್ಟಾಚಾರ ದೂರು ಹಿನ್ನೆಲೆ; ಬಾಡಿ ಕ್ಯಾಮರಾ ಧರಿಸುವಂತೆ ಸೂಚನೆ

ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಹೊಸ ಕ್ರಮ: ಆರ್​ಟಿಒ ಕಚೇರಿಗಳಿಗೆ ಸಿಬ್ಬಂದಿ ನಿಯೋಜನೆ

Published On - 7:04 pm, Thu, 24 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ