AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ದುರ್ಬಲರು, ಬಡವರ ತಂದೆ‘-ರಾಕೇಶ್​ ಟಿಕಾಯತ್​ಗೆ ತಿರುಗೇಟು ನೀಡಿದ ಅಸಾದುದ್ದೀನ್​ ಓವೈಸಿ

Asaduddin Owaisi: ಈ ಹಿಂದೆ ಯೋಗಿ ಆದಿತ್ಯನಾಥ್​ ವಿರುದ್ಧ ಕಿಡಿಕಾರಿದ್ದ ಓವೈಸಿ,  ಯೋಗಿ ಆದಿತ್ಯನಾಥ್​ ಅವರೇಕೆ ಅಬ್ಬಾ ಜಾನ್​ ಎನ್ನುತ್ತಾರೆ? ಆ ಶಬ್ದದ ಬದಲಿಗೆ ಪಿತಾ ಜಿ ಎಂದು ಹೇಳಬಹುದಲ್ಲ ಎಂದು ಪ್ರಶ್ನಿಸಿದ್ದರು.

‘ನಾನು ದುರ್ಬಲರು, ಬಡವರ ತಂದೆ‘-ರಾಕೇಶ್​ ಟಿಕಾಯತ್​ಗೆ ತಿರುಗೇಟು ನೀಡಿದ ಅಸಾದುದ್ದೀನ್​ ಓವೈಸಿ
ಅಸಾದುದ್ದೀನ್​ ಓವೈಸಿ
TV9 Web
| Edited By: |

Updated on:Sep 23, 2021 | 12:27 PM

Share

ಸಂಭಾಲ್​: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ರೈತಸಂಘಟನೆ ಬಿಕೆಯು ಮುಖಂಡ ರಾಕೇಶ್​ ಟಿಕಾಯತ್​ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ. ಹಾಗೇ, ತಮ್ಮನ್ನು ತಾವು ದುರ್ಬಲ ವರ್ಗದ ತಂದೆ ಎಂದು ಕರೆದುಕೊಂಡಿದ್ದಾರೆ.  ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಪ್ರಚಾರ ಪ್ರಚಾರದ ವೇಳೆ ಮಾತನಾಡಿದ ಅವರು, ಕೆಲ ಜನರು ನನ್ನನ್ನು ಚಾಚಾ ಜಾನ್​ ಎಂದು ಕರೆಯುತ್ತಾರೆ. ಆದರೆ ನಾನು ದುರ್ಬಲರು, ಬಡವರ್ಗದವರು ಮತ್ತು ಉತ್ತರ ಪ್ರದೇಶದಲ್ಲಿ ದಬ್ಬಾಳಿಕೆಗೆ ಒಳಗಾದವರ ತಂದೆ ಎಂದು ಹೇಳಿಕೊಂಡಿದ್ದಾರೆ.  

ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಕೆಲವು ದಿನಗಳ ಹಿಂದೆ ಅಬ್ಬಾ ಜಾನ್​ ಎಂಬ ಪ್ರಯೋಗ ಮಾಡಿದ್ದರು. ಹಾಗೇ, ರಾಕೇಶ್​ ಟಿಕಾಯತ್​ ಅವರು ಅಸಾದುದ್ದೀನ್​ ಓವೈಸಿಯನ್ನು ಚಾಚಾ ಜಾನ್​ ಎಂದು ಕರೆದಿದ್ದರು. ಬಿಜೆಪಿ ಮತ್ತು ಓವೈಸಿ ಇಬ್ಬರೂ ಒಂದೇ ತಂಡ. ನಾವು ರೈತರು ಅವರ ನಡೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಲ್ಲದೆ, ಅಸಾದುದ್ದೀನ್​ ಓವೈಸಿ ಚಾಚಾ ಜಾನ್​  ಎಂದು ಹೇಳಿದ್ದರು.  ಅಸಾದುದ್ದೀನ್​ ಓವೈಸಿಗೆ ಬಿಜೆಪಿಯಿಂದ ಆಶೀರ್ವಾದ ಇದೆ. ಓವೈಸಿ ಬಿಜೆಪಿಯನ್ನು ನಿಂದಿಸಬಹುದು. ಆದರೆ ಬಿಜೆಪಿಯವರು ಅವರ ವಿರುದ್ಧ ಒಂದೂ ಪ್ರಕರಣ ದಾಖಲಿಸುವುದಿಲ್ಲ. ಓವೈಸಿಗೆ ಎರಡು ಮುಖ ಇದೆ. ಅವರಿಂದ ರೈತರ ಸರ್ವನಾಶ ಆಗುತ್ತದೆ. ಚುನಾವಣೆ ಸಮಯದಲ್ಲಿ ಒಟ್ಟಾಗಿ ಪಿತೂರಿಗಳನ್ನು ಮಾಡುತ್ತಾರೆ ಎಂದೂ ಟಿಕಾಯತ್​ ಆರೋಪಿಸಿದ್ದರು.

ಹಾಗೇ, ಈ ಹಿಂದೆ ಯೋಗಿ ಆದಿತ್ಯನಾಥ್​ ವಿರುದ್ಧ ಕಿಡಿಕಾರಿದ್ದ ಓವೈಸಿ,  ಯೋಗಿ ಆದಿತ್ಯನಾಥ್​ ಅವರೇಕೆ ಅಬ್ಬಾ ಜಾನ್​ ಎನ್ನುತ್ತಾರೆ? ಆ ಶಬ್ದದ ಬದಲಿಗೆ ಪಿತಾ ಜಿ ಎಂದು ಹೇಳಬಹುದಲ್ಲ. ಹೀಗೆ ಕೋಡ್​ ವರ್ಡ್​​ಗಳನ್ನು ಬಳಸುವುದು ಯಾಕೆ ಎಂದು ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದರು.  ಯೋಗಿ ಆದಿತ್ಯನಾಥ್​ ಅವರು ಸಮಾಜವಾದಿ ಪಕ್ಷವನ್ನು ಉದ್ದೇಶಿಸಿ ಮಾತನಾಡುವಾಗ ಮುಸ್ಲಿಂ ಸಮುದಾಯದವರನ್ನೂ ಉಲ್ಲೇಖಿಸಿ ಅಬ್ಬಾ ಜಾನ್​ ಎಂದು ಪದ ಪ್ರಯೋಗ ಮಾಡುತ್ತಿದ್ದರು.

ಉತ್ತರ ಪ್ರದೇಶ ಚುನಾವಣೆ ಸಿದ್ಧತೆ ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಸಿದ್ಧತೆಯಲ್ಲಿ ಅಸಾದುದ್ದೀನ್​ ಓವೈಸಿ ತೊಡಗಿದ್ದಾರೆ. ಯುಪಿಯಲ್ಲಿ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ.  2017ರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಕೇವಲ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಇದನ್ನೂ ಓದಿ: ಹಾಲು, ತಿಂಡಿಯ ಜೊತೆ ಆಲ್ಕೋ ಹಾಲ್ ಮಾರಾಟ; ಮದ್ಯ ಮಾರಾಟ ಮಾಡುತ್ತಿದ್ದವನಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು

Temple Tour: ಮೀಸೆ ಹೊತ್ತ ಶಕ್ತಿ ದೇವತೆ ಉಚ್ಚಂಗವ್ವನ ದರ್ಶನ ಮಾಡಿದ್ದೀರಾ?

Published On - 9:05 am, Thu, 23 September 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!