AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಾನ್ ಚಾಲೀಸಾ ಪಠಿಸಬೇಕಿದ್ದರೆ ಪಠಿಸಿ, ದಾದಾಗಿರಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ: ಬಿಜೆಪಿ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ

ಕಳೆದ ಕೆಲವು ದಿನಗಳಿಂದ ಬಿಜೆಪಿಯವರು ಶಿವಸೇನಾ ಹಿಂದುತ್ವವನ್ನು ಬಿಟ್ಟು ಹೋಗಿದೆ ಎಂದು ಕಿರುಚುತ್ತಿದ್ದಾರೆ. ನಾವು ಏನು ಬಿಟ್ಟಿದ್ದೇವೆ? ಹಿಂದುತ್ವವೇನು ಧೋತಿಯೇ? ಹಾಕಿ ಮತ್ತೆ ಅದನ್ನು ತೆಗೆದಿಡಲು? ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಹನುಮಾನ್ ಚಾಲೀಸಾ ಪಠಿಸಬೇಕಿದ್ದರೆ  ಪಠಿಸಿ, ದಾದಾಗಿರಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ: ಬಿಜೆಪಿ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Apr 25, 2022 | 10:16 PM

Share

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರು ಹಿಂದುತ್ವದ ಮೇಲಿನ ಆರೋಪ ಮತ್ತು ಹನುಮಾನ್ ಚಾಲೀಸಾ ವಿವಾದದಲ್ಲಿ(Hanuman Chalisa controversy) ಜೈಲು ಪಾಲಾಗಿರುವ ಸಂಸದೆ-ಶಾಸಕ ದಂಪತಿಗಳ ವಿರುದ್ಧ ಬಿಜೆಪಿಯನ್ನು(BJP) ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯನ್ನು ಟೀಕೆ ಮಾಡಿದ ಅವರು ”ಹನುಮಾನ್ ಚಾಲೀಸಾ ಪಠಿಸಬೇಕಿದ್ದರೆ ಪಠಿಸಿ, ಆದರೆ ದಾದಾಗಿರಿ ಮಾಡಿದರೆ ಹೇಗೆ ನಿಲ್ಲಿಸಬೇಕೆಂಬುದು ಗೊತ್ತು.ಶಿವಸೇನೆಗೆ ಸವಾಲೆಸೆದರೆ ಭೀಮಾ ರೂಪ, ಮಹಾ ರುದ್ರ ಏನು ಎಂಬುದನ್ನು ತೋರಿಸುತ್ತೇವೆ. ನಮ್ಮ ಹಿಂದುತ್ವವು ಗದಾಧಾರಿ ಹನುಮಂತನಷ್ಟೇ ಬಲಿಷ್ಠವಾಗಿದೆ ಎಂದಿದ್ದಾರೆ. “ಕಳೆದ ಕೆಲವು ದಿನಗಳಿಂದ ಬಿಜೆಪಿಯವರು ಶಿವಸೇನಾ ಹಿಂದುತ್ವವನ್ನು ಬಿಟ್ಟು ಹೋಗಿದೆ ಎಂದು ಕಿರುಚುತ್ತಿದ್ದಾರೆ. ನಾವು ಏನು ಬಿಟ್ಟಿದ್ದೇವೆ? ಹಿಂದುತ್ವವೇನು ಧೋತಿಯೇ? ಹಾಕಿ ಮತ್ತೆ ಅದನ್ನು ತೆಗೆದಿಡಲು? ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಿಂದುತ್ವದ ಬಗ್ಗೆ ನಮಗೆ ಉಪನ್ಯಾಸ ನೀಡುವವರು ಹಿಂದುತ್ವಕ್ಕಾಗಿ ಏನು ಮಾಡಿದ್ದಾರೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು” ಎಂದಿದ್ದಾರೆ. 2019 ರಲ್ಲಿ ಬಿಜೆಪಿಯೊಂದಿಗಿನ 35 ವರ್ಷಗಳ ಮೈತ್ರಿಯನ್ನು ನಮ್ಮ ಪಕ್ಷ ಕೊನೆಗೊಳಿಸಿತ್ತು. ಬಾಬರಿ ಮಸೀದಿಯನ್ನು ಕೆಡವಿದಾಗ, ನೀವು ನಿಮ್ಮ ಬಿಲಗಳಿಗೆ ಓಡಿಹೋದಿರಿ. ರಾಮ ಮಂದಿರವನ್ನು ನಿರ್ಮಿಸುವ ನಿರ್ಧಾರ ನಿಮ್ಮ ಸರ್ಕಾರದಿಂದಲ್ಲ, ಅದು ನ್ಯಾಯಾಲಯದಿಂದ ಬಂದಿದೆ. ಅದನ್ನು ನಿರ್ಮಿಸಿದಾಗ ನೀವು ಜೋಳಿಗೆ ಹಿಡಿದುಕೊಂಡು ಜನರ ಬಳಿಗೆ ಹೋಗಿದ್ದೀರಿ. ನಿಮ್ಮ ಹಿಂದುತ್ವ ಎಲ್ಲಿದೆ? ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

ಠಾಕ್ರೆ ಅವರ ಮನೆಯ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಒತ್ತಾಯಿಸಿದಕ್ಕೆ ಶನಿವಾರ ಬಂಧಿತರಾದ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಬಿಜೆಪಿ ಬೆಂಬಲಿಸುತ್ತಿದೆ.

ಅಜಾನ್‌ಗಳಿಗಾಗಿ ಧ್ವನಿವರ್ಧಕಗಳ ಮೇಲಿನ ರಾಜಕೀಯ ಯುದ್ಧದ ಕುರಿತು ವಿವಾದವು ಅಣಬೆಗಳಂತೆ ಹುಟ್ಟಿಕೊಂಡಿದೆ. ಆದರೆ ಉಪವಿಭಾಗವು ಶಿವಸೇನೆಯಿಂದ ನಿಯಂತ್ರಿಸಲ್ಪಡುವ ಮುಂಬೈನ ಬೃಹತ್ ಶ್ರೀಮಂತ ನಾಗರಿಕ ಸಂಸ್ಥೆಯಾದ ಬೃಹನ್‌ಮುಂಬೈ ಕಾರ್ಪೊರೇಷನ್‌ಗೆ ಮುಂಬರುವ ಚುನಾವಣೆಯಾಗಿದೆ. ಆಡಳಿತಾರೂಢ ಶಿವಸೇನೆ ಅತಿಯಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ದೇವೇಂದ್ರ ಫಡ್ನವಿಸ್ ಇಂದು ಈ ವಿಷಯದ ಬಗ್ಗೆ ಸರ್ವಪಕ್ಷ ಸಭೆಯನ್ನು ತಪ್ಪಿಸಿದ್ದಾರೆ. ರಾಣಾಗಳ ವಿರುದ್ಧ ಪೊಲೀಸ್ ಕ್ರಮ “ಹಿಟ್ಲರ್​​ಶಾಹಿ (ಹಿಟ್ಲರ್ ಅಧಿಕಾರ)” ಎಂದು ಆರೋಪಿಸಿದ್ದಾರೆ.

ಇದು ಸಿಎಂ ಸೂಚನೆ ಮೇರೆಗೆ ನಡೆಯುತ್ತಿದೆ “ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾವನ್ನು ಜಪಿಸದಿದ್ದರೆ ಅದನ್ನು ಪಾಕಿಸ್ತಾನದಲ್ಲಿ ಜಪಿಸಲಾಗುವುದೇ? ಹನುಮಾನ್ ಚಾಲೀಸಾವನ್ನು ಪಠಿಸುವುದು ದೇಶದ್ರೋಹವಾದರೆ, ನಾವೆಲ್ಲರೂ ಈ ದೇಶದ್ರೋಹದಲ್ಲಿ ತೊಡಗುತ್ತೇವೆ. ಸರ್ಕಾರಕ್ಕೆ ಧೈರ್ಯವಿದ್ದರೆ, ನಮ್ಮ ಮೇಲೆ ದೇಶದ್ರೋಹದ ಆರೋಪ ಹೊರಿಸಬೇಕು” ಎಂದು ಫಡ್ನವಿಸ್ ಹೇಳಿದರು.

ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಣ ದೇಶ ವಿರೋಧಿಯಾಗಿದ್ದರೆ ನಮ್ಮ ವಿರುದ್ಧವೂ ದೇಶದ್ರೋಹ ಕೇಸ್​ ದಾಖಲಿಸಿ: ದೇವೇಂದ್ರ ಫಡ್ನವೀಸ್​

Published On - 10:15 pm, Mon, 25 April 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು