ಕೈಗಳನ್ನು ಕಟ್ಟಿಹಾಕಿ, ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಐಐಎಂಆರ್‌ ವಿದ್ಯಾರ್ಥಿಯ ಶವ ಪತ್ತೆ

ಶಿವಂ ಅವರ ತಂದೆ ಅಖಿಲೇಶ್ವರ ಪ್ರಸಾದ್ ಪಾಂಡೆ, ಸೋಮವಾರ ರಾತ್ರಿ 11.30 ರ ಸುಮಾರಿಗೆ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಲಾಯಿತು. ಆದಾಗ್ಯೂ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ತಮ್ಮ ಮಗನ ಕೈಗಳನ್ನು ಕಟ್ಟಲಾಗಿದೆ ಮತ್ತು ಕಾಲುಗಳು ನೆಲದ ಮೇಲೆ ಇರುವುದನ್ನು ಫೋಟೋಗಳು ತೋರಿಸುತ್ತವೆ ಎಂದು ಹೇಳಿದರು...

ಕೈಗಳನ್ನು ಕಟ್ಟಿಹಾಕಿ, ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಐಐಎಂಆರ್‌ ವಿದ್ಯಾರ್ಥಿಯ ಶವ ಪತ್ತೆ
ಪ್ರಾತಿನಿಧಿಕ ಚಿತ್ರ
Edited By: ರಶ್ಮಿ ಕಲ್ಲಕಟ್ಟ

Updated on: Jan 18, 2023 | 12:54 PM

ರಾಂಚಿ: ರಾಂಚಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (Indian Institute of Management-Ranchi) 22 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೊಠಡಿಯೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ (Suicide) ಪತ್ತೆಯಾಗಿದ್ದಾನೆ. ವಾರಣಾಸಿಯಿಂದ ಬಂದ ಶಿವಂ ಕುಮಾರ್ ಪಾಂಡೆ ಅವರು ಸೆಮಿಸ್ಟರ್ VI ರಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ ಕಲಿಯುತ್ತಿದ್ದನು. ಮನೆಯವರು ಸಂಶಯ ವ್ಯಕ್ತಪಡಿಸಿದ್ದರಿಂದ ಮಂಗಳವಾರ ಕೊಲೆ ಪ್ರಕರಣ ದಾಖಲಾಗಿತ್ತು.ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ಸಂಜೆ ಶಿವಂ ಅವರ ಕೊಠಡಿ ಒಳಗಿನಿಂದ ಬೀಗ ಹಾಕಿರುವುದನ್ನು ಅವರ ಸ್ನೇಹಿತರು ಕಂಡುಕೊಂಡಿದ್ದಾರೆ. ಅವರು ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ಸಿಬ್ಬಂದಿಗೆ ಮಾಹಿತಿ ನೀಡಿದರು, ಅವರು ವೆಂಟಿಲೇಟರ್‌ನಿಂದ ಒಳಗೆ ಇಣುಕಿ ನೋಡಿದಾಗ ನೇಣು ಹಾಕಿದ ಸ್ಥಿತಿಯಲ್ಲಿ ಶಿವಂ ಮೃತದೇಹ ಪತ್ತೆಯಾಗಿದೆ.

ಮಂಗಳವಾರ ರಾಂಚಿ ತಲುಪಿದ ಶಿವಂ ಅವರ ತಂದೆ ಅಖಿಲೇಶ್ವರ ಪ್ರಸಾದ್ ಪಾಂಡೆ, ಸೋಮವಾರ ರಾತ್ರಿ 11.30 ರ ಸುಮಾರಿಗೆ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಲಾಯಿತು. ಆದಾಗ್ಯೂ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ತಮ್ಮ ಮಗನ ಕೈಗಳನ್ನು ಕಟ್ಟಲಾಗಿದೆ ಮತ್ತು ಕಾಲುಗಳು ನೆಲದ ಮೇಲೆ ಇರುವುದನ್ನು ಫೋಟೋಗಳು ತೋರಿಸುತ್ತವೆ ಎಂದು ಹೇಳಿದರು. ಪೊಲೀಸರ ಅನುಪಸ್ಥಿತಿಯಲ್ಲಿ ವಿಡಿಯೊ ರೆಕಾರ್ಡಿಂಗ್‌ನಲ್ಲಿ ಶವವನ್ನು ಏಕೆ ಕೆಳಗಿಳಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:52 pm, Wed, 18 January 23

Web contact

TV9 Kannada

Read More
Follow Us