AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈ ಮೂಲದ 2 ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಐಟಿ ದಾಳಿ; 300 ಕೋಟಿ ರೂ. ಬಹಿರಂಗ ಪಡಿಸದ ಆದಾಯ ಪತ್ತೆ

ಈ ಹಣಕಾಸು ಸಂಸ್ಥೆಗಳು ಆಸ್ತಿ ಹೂಡಿಕೆ ಮಾಡಿವೆ. ನೈಜ ಆದಾಯವನ್ನು ಮರೆಮಾಚಿ ಮೋಸ ಮಾಡಿವೆ. ಅಸುರಕ್ಷಿತ ಸಾಲದ ದಂಧೆ ನಡೆಸುತ್ತಿವೆ ಎಂಬ ಬಗ್ಗೆ ಐಟಿ ಇಲಾಖೆಗೆ ಸಾಕ್ಷಿ ದೊರೆತಿದೆ.

ಚೆನ್ನೈ ಮೂಲದ 2 ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಐಟಿ ದಾಳಿ; 300 ಕೋಟಿ ರೂ. ಬಹಿರಂಗ ಪಡಿಸದ ಆದಾಯ ಪತ್ತೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 25, 2021 | 12:09 PM

Share

ಆದಾಯ ತೆರಿಗೆ ಇಲಾಖೆ (Income Tax Department) ಚೆನ್ನೈ ಮೂಲದ ಎರಡು ಖಾಸಗಿ ಸಿಂಡಿಕೇಟ್​ ಹಣಕಾಸು ಗ್ರೂಪ್​​ಗಳ ಮೇಲೆ ಸೆಪ್ಟೆಂಬರ್​ 23ರಂದು ದಾಳಿ ನಡೆಸಿದೆ. ಈ ಎರಡು ಹಣಕಾಸು ಸಂಸ್ಥೆಗಳಿಗೆ ಸಂಬಂಧಪಟ್ಟ ಚೆನ್ನೈನಲ್ಲಿರುವ ಒಟ್ಟು 35 ಪ್ರದೇಶಗಳಲ್ಲಿ ಹುಡುಕಾಟ ನಡೆಸಿರುವ ಐಟಿ ಇಲಾಖೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 

ಈ ಸಿಂಡಿಕೇಟ್​ ಹಣಕಾಸು ಸಂಸ್ಥೆಗಳು ತಮಿಳುನಾಡಿನ ಹಲವು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು, ಉದ್ಯಮಗಳಿಗೆ ಸಾಲ ನೀಡಿವೆ. ಅದರಲ್ಲೂ ಹೆಚ್ಚಾಗಿ ನಗದುರೂಪದಲ್ಲೇ ಹಣ ನೀಡುತ್ತವೆ. ಅತ್ಯಂತ ಅಧಿಕ ಮೊತ್ತದ ಬಡ್ಡಿ ವಿಧಿಸುತ್ತವೆ ಮತ್ತು ತೆರಿಗೆ ವಂಚನೆ ಮಾಡಿವೆ ಎಂಬುದು ಇದೀಗ ಸಿಕ್ಕ ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಐಟಿ ಹೇಳಿದೆ.  ಈ ಹಣಕಾಸು ಸಂಸ್ಥೆಗಳು ಸಾಲಗಾರರಿಂದ ಬಡ್ಡಿ ಸ್ವೀಕರಿಸಲು ನಕಲಿ ಬ್ಯಾಂಕ್​ ಖಾತೆಗಳನ್ನು ಬಳಸಿವೆ ಎಂದೂ ಮಾಹಿತಿ ನೀಡಿದೆ.

ಈ ಹಣಕಾಸು ಸಂಸ್ಥೆಗಳು ಆಸ್ತಿ ಹೂಡಿಕೆ ಮಾಡಿವೆ. ನೈಜ ಆದಾಯವನ್ನು ಮರೆಮಾಚಿ ಮೋಸ ಮಾಡಿವೆ. ಅಸುರಕ್ಷಿತ ಸಾಲದ ದಂಧೆ ನಡೆಸುತ್ತಿವೆ ಎಂಬುದು ಐಟಿ ಇಲಾಖೆಗೆ ಸಿಕ್ಕ ಸಾಕ್ಷಿಗಳಿಂದ ಪಕ್ಕಾ ಆಗಿದೆ. ಐಟಿ ಇಲಾಖೆ ಇಲ್ಲಿವರೆಗೆ ನಡೆಸಿದ ಶೋಧದಲ್ಲಿ ಸುಮಾರು 300 ಕೋಟಿ ರೂ.ಬಹಿರಂಗಪಡಿಸದ ಆದಾಯವನ್ನು ಪತ್ತೆ ಹಚ್ಚಿದೆ. ಹಾಗೇ, 9 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.  ಇನ್ನೂ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬರ್ತ್​​ ಡೇ ಪಾರ್ಟಿಗೆ ಬಂದು ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ

ಕಳ್ಳತನಕ್ಕೆ ಅಡ್ಡಿಯಾಗುತ್ತೆಂದು ಸಿಸಿ ಕ್ಯಾಮರಾ ಹೊಡೆದು ಹಾಕಿದ ಮಹಿಳೆ; ವಿಡಿಯೋ ನೋಡಿ 

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್