ಟಿಬಿ ರೋಗಿಗಳಿಗೆ ನಿಕ್ಷಯ ಪೋಷಣ ಯೋಜನೆಯಡಿ 3,202 ಕೋಟಿ ರೂ. ವಿತರಣೆ; ಜೆ.ಪಿ. ನಡ್ಡಾ

|

Updated on: Oct 07, 2024 | 7:54 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತವು ಟಿಬಿ ಮುಕ್ತ ಭಾರತ ನಿರ್ಮಾಣದಲ್ಲಿ ದೃಢವಾಗಿದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಟಿಬಿ ರೋಗಿಗಳಿಗೆ ನಿಕ್ಷಯ ಪೋಷಣ ಯೋಜನೆಯಡಿ 3,202 ಕೋಟಿ ರೂ. ವಿತರಣೆ; ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ
Follow us on

ನವದೆಹಲಿ: ಯಾವುದೇ ಒಂದು ರೋಗದ ಚಿಕಿತ್ಸೆಯಲ್ಲಿ ಪೌಷ್ಠಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ರೋಗದ ವಿರುದ್ಧದ ಹೋರಾಟದಲ್ಲಿ ಟಿಬಿ ವಾರಿಯರ್​ಗಳನ್ನು ಬಲಪಡಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ನಿ-ಕ್ಷಯ್ ಪೋಷಣ್ ಯೋಜನೆಯಡಿ ಚಿಕಿತ್ಸೆಯ ಅವಧಿಯಲ್ಲಿ ಎಲ್ಲಾ ಟಿಬಿ ರೋಗಿಗಳಿಗೆ ಮಾಸಿಕ ಪೌಷ್ಟಿಕಾಂಶದ ಬೆಂಬಲವನ್ನು  ತಿಂಗಳಿಗೆ 500 ರೂ.ನಿಂದ 1,000 ರೂ.ಗೆ ದುಪ್ಪಟ್ಟು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತವು ಟಿಬಿ ಮುಕ್ತ ಭಾರತ ನಿರ್ಮಾಣದಲ್ಲಿ ದೃಢವಾಗಿದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಎಲ್ಲಾ ಟಿಬಿ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲವಾಗಿ ನಿಕ್ಷಯ ಪೋಷಣ್ ಯೋಜನೆಯಡಿ 1040 ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆಯನ್ನು ಅನುಮೋದಿಸಲಾಗಿದೆ. ಈಗ ಟಿಬಿ ರೋಗಿಗಳ ಎಲ್ಲಾ ಮನೆಯ ಸಂಪರ್ಕಗಳನ್ನು ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಒಳಗೊಳ್ಳಲಾಗುತ್ತದೆ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ.


ಇಲ್ಲಿಯವರೆಗೆ ನಿಕ್ಷಯ ಪೋಷಣ ಯೋಜನೆಯಡಿ ನೇರ ಲಾಭ ವರ್ಗಾವಣೆ ಮೂಲಕ 1.13 ಕೋಟಿ ಫಲಾನುಭವಿಗಳಿಗೆ 3,202 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂಬುದು ಗಮನಾರ್ಹ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ