AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಡ್ರೋನ್ ನಿಗ್ರಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಸೇನಾಪಡೆಗೆ ಶೀಘ್ರದಲ್ಲೇ ಲಭ್ಯವಾಗಲಿದೆ: ಅಮಿತ್ ಶಾ

“ಯಾವುದೇ ದೇಶವು ಸುಭದ್ರವಾಗಿರುವಾಗ ಮಾತ್ರ ಪ್ರಗತಿ ಹೊಂದಲು ಮತ್ತು ಅದರ ಸಂಸ್ಕೃತಿಯನ್ನು ಸಮೃದ್ಧಗೊಳಿಸಲು ಸಾಧ್ಯವಾಗುತ್ತದೆ. ನೀವು ದೇಶವನ್ನು ಭದ್ರಪಡಿಸುವವರು. ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಮೋದಿ ಸರ್ಕಾರಕ್ಕೆ ಗಡಿ ಭದ್ರತೆ ಎಂದರೆ ರಾಷ್ಟ್ರೀಯ ಭದ್ರತೆ...

ಭಾರತ ಡ್ರೋನ್ ನಿಗ್ರಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಸೇನಾಪಡೆಗೆ ಶೀಘ್ರದಲ್ಲೇ ಲಭ್ಯವಾಗಲಿದೆ: ಅಮಿತ್ ಶಾ
ಅಮಿತ್ ಶಾ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Dec 05, 2021 | 8:47 PM

Share

ಜೈಸಲ್ಮೇರ್ : ದೇಶದ ಗಡಿಯಲ್ಲಿ ಹೆಚ್ಚುತ್ತಿರುವ ಡ್ರೋನ್‌ ಬೆದರಿಕೆಯನ್ನು ತಡೆಯಲು ಭಾರತವು ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಶೀಘ್ರದಲ್ಲೇ ಭದ್ರತಾ ಪಡೆಗಳಿಗೆ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಹೇಳಿದ್ದಾರೆ. “ಜಗತ್ತಿನಲ್ಲಿ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನವನ್ನು ಗಡಿ ಭದ್ರತೆಗಾಗಿ ನಿಮಗೆ ನೀಡಲಾಗುವುದು. ಇದು ಸರ್ಕಾರದ ಬದ್ಧತೆ. ಡ್ರೋನ್‌ಗಳ ಬೆದರಿಕೆಯನ್ನು ಎದುರಿಸಲು, ಬಿಎಸ್‌ಎಫ್, ಎನ್‌ಎಸ್‌ಜಿ ಮತ್ತು ಡಿಆರ್‌ಡಿಒ ಡ್ರೋನ್ ನಿಗ್ರಹ ರಕ್ಷಣಾ ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ನಮ್ಮ ವಿಜ್ಞಾನಿಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಶೀಘ್ರದಲ್ಲೇ ನಾವು ದೇಶದಲ್ಲಿ ಸ್ಥಳೀಯ ಆಂಟಿ-ಡ್ರೋನ್ ವ್ಯವಸ್ಥೆಯನ್ನು ಹೊಂದಲಿದ್ದೇವೆ ”ಎಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ (Jaisalmer) ಪಡೆಯ 57 ನೇ ರೈಸಿಂಗ್ ಡೇ (57th Raising Day) ಸಂದರ್ಭದಲ್ಲಿ ಬಿಎಸ್‌ಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಶಾ ಹೇಳಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಇದೇ ಮೊದಲ ಬಾರಿಗೆ ಬಿಎಸ್‌ಎಫ್ ರೈಸಿಂಗ್ ಡೇ ಆಚರಿಸಲಾಗುತ್ತಿದೆ. ಸೇನಾ ಪಡೆಯ ಈ ಕ್ರಮವನ್ನು ಶ್ಲಾಘಿಸಿದ ಗೃಹ ಸಚಿವರು, ಸೇನೆಯ ಯೋಧರು ಪ್ರತಿದಿನ ಶೌರ್ಯದ ಉದಾಹರಣೆಗಳನ್ನು ನೀಡುವ ಸ್ಥಳಗಳಲ್ಲಿ ಇಂತಹ ಆಚರಣೆಗಳನ್ನು ಮಾಡಬೇಕೇ ಹೊರತು ದೆಹಲಿಯಲ್ಲಲ್ಲ ಎಂದು ಹೇಳಿದರು. “ಯಾವುದೇ ದೇಶವು ಸುಭದ್ರವಾಗಿರುವಾಗ ಮಾತ್ರ ಪ್ರಗತಿ ಹೊಂದಲು ಮತ್ತು ಅದರ ಸಂಸ್ಕೃತಿಯನ್ನು ಸಮೃದ್ಧಗೊಳಿಸಲು ಸಾಧ್ಯವಾಗುತ್ತದೆ. ನೀವು ದೇಶವನ್ನು ಭದ್ರಪಡಿಸುವವರು. ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಮೋದಿ ಸರ್ಕಾರಕ್ಕೆ ಗಡಿ ಭದ್ರತೆ ಎಂದರೆ ರಾಷ್ಟ್ರೀಯ ಭದ್ರತೆ. ಆದ್ದರಿಂದ ನೆನಪಿಡಿ, ನೀವು ಕೇವಲ ಗಡಿಗಳನ್ನು ಭದ್ರಪಡಿಸುತ್ತಿಲ್ಲ ಆದರೆ ರಾಷ್ಟ್ರಕ್ಕೆ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವಕಾಶವನ್ನು ನೀಡುತ್ತಿದ್ದೀರಿ ಎಂದು ಶಾ ಹೇಳಿದರು.

ಸೇನಾ ಸಿಬ್ಬಂದಿಯ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಮಾತ್ರವಲ್ಲದೆ ಗಡಿಯ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ ಎಂದು ಶಾ ಹೇಳಿದರು.  “ಗಡಿಗಳಲ್ಲಿ ಉತ್ತಮ ಮೂಲಸೌಕರ್ಯಕ್ಕಾಗಿ, ರಸ್ತೆ ನಿರ್ಮಾಣಕ್ಕಾಗಿ ಬಜೆಟ್ ಅನ್ನು 2008 ಮತ್ತು 2014 ರ ನಡುವೆ 23,000 ಕೋಟಿ ರೂ.ಗಳಿಂದ 2014 ಮತ್ತು 2020 ರ ನಡುವೆ 44,600 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ಗಡಿಯ ಮೂಲಸೌಕರ್ಯವನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ” ಎಂದು ಶಾ ಹೇಳಿದರು.

ಗಡಿ ಪ್ರದೇಶಗಳಲ್ಲಿ ವಾಸಿಸುವ ಬಿಎಸ್‌ಎಫ್ ಸಿಬ್ಬಂದಿ ಮತ್ತು ನಾಗರಿಕರ ನಡುವಿನ ಸಂಬಂಧವನ್ನು ಸುಧಾರಿಸುವ ಬಗ್ಗೆಯೂ ಗೃಹ ಸಚಿವರು ಒತ್ತು ನೀಡಿದರು. ಬಿಎಸ್‌ಎಫ್ ಜನರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಎಲ್ಲಾ ಸರ್ಕಾರಿ ಯೋಜನೆಗಳು ನೆಲದ ಮೇಲೆ ಜಾರಿಯಾಗುತ್ತಿವೆಯೇ ಎಂದು ನೋಡಬೇಕು ಎಂದು ಅವರು ಹೇಳಿದರು.

ಸರ್ಕಾರವು ಗಡಿಯಲ್ಲಿ ವಾಸಿಸುವವರಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. ಗಡಿಗಳನ್ನು ಭದ್ರಪಡಿಸುವುದರ ಜೊತೆಗೆ, ನಿಮಗೆ ಸಮಯ ಸಿಕ್ಕಾಗಲೆಲ್ಲಾ, ಈ ಯೋಜನೆಗಳ ಅನುಷ್ಠಾನಕ್ಕೆ ಸ್ವಲ್ಪ ಗಮನ ಕೊಡಿ ಎಂದು ನಾನು ಬಿಎಸ್‌ಎಫ್ ಯೋಧರನ್ನು ಒತ್ತಾಯಿಸುತ್ತೇನೆ. ನಾವು ನಮ್ಮ ಗಡಿಭಾಗದ ಜನರನ್ನು ಸಂತೋಷವಾಗಿಡಲು, ಅವರ ಸೌಲಭ್ಯಗಳನ್ನು ಉತ್ತಮಗೊಳಿಸಲು ಸಾಧ್ಯವಾದರೆ, ಅದು ಗಡಿಗಳನ್ನು ಭದ್ರಪಡಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಗಡಿಭಾಗದ ಜನರೊಂದಿಗೆ ನೀವಿಬ್ಬರೂ ಸಂಬಂಧ ಮತ್ತು ಸಂವಹನವನ್ನು ನಿರ್ವಹಿಸುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.

ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ಅರ್ಪಿಸಿದ ಬಿಎಸ್‌ಎಫ್‌ನ ಯೋಧರಿಗೆ ಶಾ ಅವರು ಶ್ರದ್ಧಾಂಜಲಿ ಸಲ್ಲಿಸಿದರು. “1971 ರ ಯುದ್ಧದಂತಹ ವಿವಿಧ ಐತಿಹಾಸಿಕ ಘಟನೆಗಳಲ್ಲಿ ಬಿಎಸ್‌ಎಫ್ ಪಾತ್ರವನ್ನು ಅವರು ನೆನಪಿಸಿಕೊಂಡರು, ಬಿಎಸ್‌ಎಫ್ ಸಿಬ್ಬಂದಿಗಳು ಸಂಖ್ಯಾತ್ಮಕವಾಗಿ ಬಲಾಢ್ಯವಾದ ಪಡೆಗಳ ಬೆಳವಣಿಗೆಯ ಆರಂಭಿಕ ಹಂತದಲ್ಲಿದ್ದರೂ ಅದರ ವಿರುದ್ಧ ಧೈರ್ಯದಿಂದ ಹೋರಾಡಿದರು” ಎಂದು ಬಿಎಸ್‌ಎಫ್ ಹೇಳಿದೆ.

“ಪರೇಡ್ ಸಮಯದಲ್ಲಿ, ಗಡಿ ಭದ್ರತಾ ಪಡೆಯ ವಿವಿಧ ಗಡಿ ಪ್ರದೇದ ತುಕಡಿಗಳು ಸೀಮಾ ಪ್ರಹಾರಿಗಳ ಶೌರ್ಯ, ಸಾಹಸ ಮತ್ತು ರಾಷ್ಟ್ರದ ಬದ್ಧತೆಯನ್ನು ಪ್ರದರ್ಶಿಸಿದರು. ಮೆರವಣಿಗೆಯಲ್ಲಿ ಮಹಿಳಾ ಪ್ರಹರಿ ತುಕಡಿ, ಅಲಂಕೃತ ಅಧಿಕಾರಿಗಳು ಮತ್ತು ಪುರುಷರು, ಪ್ರಸಿದ್ಧ ಒಂಟೆ ಕಾಂಟೆಜೆಂಟ್ ಮತ್ತು ಒಂಟೆ ಬ್ಯಾಂಡ್, ಮೌಂಟೆಡ್ ಪಡೆ, ಡಾಗ್ ಸ್ಕ್ವಾಡ್, ಬಿಎಸ್‌ಎಫ್ ಬ್ಯಾಗ್‌ಪೈಪರ್‌ಗಳ ವಿಶೇಷ ಪ್ರದರ್ಶನವಿತ್ತು ಎಂದು ಬಿಎಸ್ಎಫ್ ಹೇಳಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಳವಾದ ಮಿರಾಜ್ ಫೈಟರ್ ಜೆಟ್ ಟೈರ್ ಪತ್ತೆ

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​