AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ಆಹಾರ ಧಾನ್ಯಗಳ ವಿತರಣೆ ಯೋಜನೆ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆ: ವರದಿ

ಏಪ್ರಿಲ್ 2020ರಲ್ಲಿ ಆರಂಭವಾದ ಈ ಯೋಜನೆ ಕೋವಿಡ್ 19 ಲಾಕ್​​ಡೌನ್ ಹೊತ್ತಲ್ಲಿ ಬಡವರಿಗೆ ಸಹಾಯ ಮಾಡಿತ್ತು. ಈ ಯೋಜನೆ ಅಂಗವಾಗಿ ಪ್ರತೀ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯ ನೀಡುತ್ತದೆ.

ಉಚಿತ ಆಹಾರ ಧಾನ್ಯಗಳ ವಿತರಣೆ ಯೋಜನೆ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆ: ವರದಿ
ಪ್ರಾತಿನಿಧಿಕ ಚಿತ್ರ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Sep 27, 2022 | 8:06 PM

Share

ಭಾರತ ಸರ್ಕಾರ ತನ್ನ ಉಚಿತ ಆಹಾರ ಧಾನ್ಯಗಳ ವಿತರಣೆ (food grains program) ಯೋಜನೆ ಮೂರು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಇದು ರಾಷ್ಟ್ರದ ಬಹುಪಾಲು ಜನಸಂಖ್ಯೆಯನ್ನು ತಲುಪಲಿದ್ದು ವಾರ್ಷಿಕವಾಗಿ  18 ಶತಕೋಟಿ  ಡಾಲರ್​​ಗಿಂತ ಹೆಚ್ಚು ವೆಚ್ಚವಾಗುತ್ತದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಆಹಾರ ಸಚಿವಾಲಯವು ವಿಸ್ತರಣೆಯನ್ನು ಕೋರಿರುವುದರಿಂದ ಸರ್ಕಾರವು ಡಿಸೆಂಬರ್‌ವರೆಗೆ ಸುಮಾರು 800 ಮಿಲಿಯನ್ ಜನರಿಗೆ ಉಚಿತ ಅಕ್ಕಿ ಅಥವಾ ಗೋಧಿ ನೀಡುವುದನ್ನು ಮುಂದುವರಿಸಬಹುದು. ಈ ಯೋಜನೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳು ತಿಳಿಸಿವೆ. ರಾಷ್ಟ್ರದ ಹಣಕಾಸು ಸಚಿವಾಲಯದ ಅಸಮ್ಮತಿ ಹೊರತಾಗಿಯೂ ಆಹಾರ ಸಚಿವಾಲಯವು ಈ ಯೋಜನೆಯನ್ನು ಅನ್ನು ವಿಸ್ತರಿಸಲು ಒತ್ತಾಯಿಸುತ್ತದೆ ಎಂದು ಬ್ಲೂಮ್‌ಬರ್ಗ್ ಈ ಹಿಂದೆ ವರದಿ ಮಾಡಿದೆ. ಯೋಜನೆ ವಿಸ್ತರಿಸುವ ಪರ  ವಹಿಸದ ಹಣಕಾಸು ಸಚಿವಾಲಯವು ಹಣಕಾಸಿನ ಒತ್ತಡ ಮತ್ತು ಜಾಗತಿಕವಾಗಿ ಬಿಗಿಯಾದ ಪೂರೈಕೆಗಳಿಂದ ನೀಡಲಾಗುವ ಧಾನ್ಯಗಳ ಪ್ರಮಾಣವನ್ನು ಕಡಿಮೆ ಮಾಡಲು ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಏಪ್ರಿಲ್ 2020ರಲ್ಲಿ ಆರಂಭವಾದ ಈ ಯೋಜನೆ ಕೋವಿಡ್ 19 ಲಾಕ್​​ಡೌನ್ ಹೊತ್ತಲ್ಲಿ ಬಡವರಿಗೆ ಸಹಾಯ ಮಾಡಿತ್ತು. ಈ ಯೋಜನೆ ಅಂಗವಾಗಿ ಪ್ರತೀ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯ ನೀಡುತ್ತದೆ.ಅಲ್ಲಿಂದ ಇಲ್ಲಿಯವರಗೆ ಇದರ ವೆಚ್ಚ 44 ಬಿಲಿಯನ್ ಡಾಲರ್ ಆಗಿದ್ದು,ಸರ್ಕಾರದ ಮೇಲೆ ಹೊರೆಯಾಗಿದೆ.

ಈ ಬಗ್ಗೆ ಆಹಾರ ಮತ್ತು ಹಣಕಾಸು ಸಚಿವಾಲಯಗಳ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಕ್ಟೋಬರ್‌ನಿಂದ ಪ್ರಾರಂಭವಾಗುವ ಭಾರತದ ಹಬ್ಬದ ಋತುವಿನಲ್ಲಿ ಈ ಪ್ರಸ್ತಾಪವು ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯವಾಗಿದ್ದು, ಕೆಲವು ರಾಜ್ಯಗಳಲ್ಲಿ ಚುನಾವಣೆಯೂ ನಡೆಯಲಿದೆ.

ಈ ಯೋಜನೆ ಬಹಳ ಜನಪ್ರಿಯವಾಗಿದ್ದರೂ, ಇದು ಅಗ್ಗದ ಧಾನ್ಯಗಳ ಸಮೃದ್ಧ ಪೂರೈಕೆಯ ಅಗತ್ಯವನ್ನು ಹೆಚ್ಚಿಸುತ್ತದೆ. ಈ ವರ್ಷ, ಅನಿಯಮಿತ ಹವಾಮಾನದಿಂದಾಗಿ ಕೃಷಿಗೆ ಹಾನಿಯಾದ ಕಾರಣ ಭಾರತ ಗೋಧಿ ಮತ್ತು ಅಕ್ಕಿಯ ರಫ್ತುಗಳನ್ನು ನಿರ್ಬಂಧಿಸಬೇಕಾಗಿ ಬಂದಿತ್ತು. ಇದು ಆಹಾರದ ಬೆಲೆಗಳ ಏರಿಕೆಗೂ ಕಾರಣವಾಗಿದೆ.

Published On - 8:04 pm, Tue, 27 September 22

Follow Us
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್