AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ, ವಿಮರ್ಶಕ ಸುನಿಲ್ ಕೊಠಾರಿ ನಿಧನ

ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಅದಮ್ಯ ಸೇವೆ ಸಲ್ಲಿಸಿದ್ದ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ ಹಾಗೂ ವಿಮರ್ಶಕ ಸುನಿಲ್ ಕೊಠಾರಿ (87) ನಿಧನರಾಗಿದ್ದಾರೆ.

ಭಾರತೀಯ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ, ವಿಮರ್ಶಕ ಸುನಿಲ್ ಕೊಠಾರಿ ನಿಧನ
ಸುನಿಲ್ ಕೊಠಾರಿ (ಎಡ), ಸುನಿಲ್ ಕೊಠಾರಿ ಹಾಗೂ ಪ್ರತಿಭಾ ಪ್ರಹ್ಲಾದ್ (ಬಲ)
TV9 Web
| Updated By: ganapathi bhat|

Updated on:Apr 06, 2022 | 11:18 PM

Share

ದೆಹಲಿ: ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಅದಮ್ಯ ಸೇವೆ ಸಲ್ಲಿಸಿದ್ದ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ ಹಾಗೂ ವಿಮರ್ಶಕ ಸುನಿಲ್ ಕೊಠಾರಿ (87) ನಿಧನರಾಗಿದ್ದಾರೆ. ಇಂದು ಮುಂಜಾನೆಯ ವೇಳೆ ಹೃದಯಾಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಕೊಠಾರಿ ಕೊನೆಯುಸಿರೆಳೆದಿದ್ದಾರೆ. ದೆಹಲಿಯಲ್ಲಿ ವಾಸವಾಗಿದ್ದ ಅವರು, ನವೆಂಬರ್ ತಿಂಗಳಲ್ಲಿ ಕೊವಿಡ್-19ಗೆ ತುತ್ತಾಗಿದ್ದರು.

‘ನಾವು ಖುಷಿ, ದುಃಖಗಳನ್ನು ಹಂಚಿಕೊಂಡಿದ್ದೆವು. ಹಲವು ವಿಚಾರಗಳಿಗೆ ಜಗಳವಾಡಿದ್ದೆವು. ನಂತರ ಎಲ್ಲವನ್ನೂ ಮರೆತು ಸಹಜವಾಗಿ ಬದುಕಿದ್ದೆವು. ಅದೆಲ್ಲವನ್ನೂ ಸಾಧ್ಯವಾಗಿಸಲು ಈಗ ನೀವು ಇಲ್ಲಿಲ್ಲ. ನೀವು ಅತಿಯಾಗಿ ಪ್ರೀತಿಸುತ್ತಿದ್ದ ನೃತ್ಯ ಪ್ರಪಂಚ ಈಗ ಖಾಲಿಯಾದಂತೆ ಭಾಸವಾಗುತ್ತಿದೆ. ನೀವು ಬಿಟ್ಟು ಹೋದ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಭಾರತದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಟಿವಿ9 ಕನ್ನಡ ಡಿಜಿಟಲ್​ನೊಂದಿಗೆ ಸುನಿಲ್ ಕೊಠಾರಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸುನಿಲ್ ಕೊಠಾರಿ ಅವರು 2001ರಲ್ಲಿ ಪದ್ಮಶ್ರೀ ಹಾಗೂ 1995ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಅವರು, ಮುಂಬೈನ ಸಿಡೆನ್​ಹ್ಯಾಮ್ ವಾಣಿಜ್ಯ ಹಾಗೂ ಅರ್ಥಶಾಸ್ತ್ರ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಗಿದ್ದರು.

ಭಾರತೀಯ ನಾಟ್ಯಶಾಸ್ತ್ರದ ಹಲವು ವಿಧಾನಗಳ ಬಗ್ಗೆ ಸಂಶೋಧನೆ ನಡೆಸಿದ್ದ ಸುನಿಲ್ ಕೊಠಾರಿ, ಭಾಗವತ ಮೇಳ ನಾಟಕ, ಕೂಚಿಪುಡಿ, ಕೊರವಂಜಿ ವಿಷಯಗಳ ಅಧ್ಯಯನಕ್ಕೆ ಪಿಎಚ್​ಡಿಯನ್ನೂ ಪಡೆದಿದ್ದರು. ಉತ್ತರ ಗುಜರಾತ್​ನ ನೃತ್ಯ ಶಿಲ್ಪಕಲೆಗಳ ಸಂಶೋಧನೆಗೆ, ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯ 1986ರಲ್ಲಿ ಡಿ.ಲಿಟ್ ನೀಡಿ ಗೌರವಿಸಿತ್ತು. ಭಾರತೀಯ ನಾಟ್ಯಶಾಸ್ತ್ರದ ವಿವಿಧ ಪ್ರಕಾರಗಳ ಬಗ್ಗೆ 20 ಪುಸ್ತಕಗಳನ್ನೂ ಬರೆದಿದ್ದರು.

ಹಿರಿಯ ವಿದ್ವಾಂಸರ ನಿಧನಕ್ಕೆ ಪದ್ಮಶ್ರೀ ಗೀತಾ ಚಂದ್ರನ್, ಶೋಭನಾ ನಾರಾಯಣ್, ಮಲ್ಲಿಕಾ ಸಾರಾಭಾಯ್ ಮುಂತಾದವರು ಕಂಬನಿ ಮಿಡಿದಿದ್ದಾರೆ.

ಅಸಾಮಾನ್ಯ ಪಾಂಡಿತ್ಯದ ಖನಿ ಬನ್ನಂಜೆ ಗೋವಿಂದಾಚಾರ್ಯ

Published On - 1:09 pm, Sun, 27 December 20

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ