AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತವು ಅಮೆರಿಕದೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್

S Jaishankar: 21 ನೇ ಶತಮಾನದಲ್ಲಿ ಹೆಚ್ಚು ಬಹುಧ್ರುವೀಯವಾಗಿರುವ ಒಂದು ಪ್ರಮುಖ ಗುಂಪಾಗಿದೆ ಕ್ವಾಡ್. ಆದರೆ ಭಾರತದ ಹಿತಾಸಕ್ತಿಗಳು ಪೂರ್ವದಲ್ಲಿ ಅಮೆರಿಕಾದೊಂದಿಗೆ  ಹೊಂದಿಕೊಂಡಿದ್ದರೂ ಪಶ್ಚಿಮದಲ್ಲಿ ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಸಚಿವರು ಹೇಳಿದರು.

ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತವು ಅಮೆರಿಕದೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್
ಎಸ್.ಜೈಶಂಕರ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Aug 16, 2021 | 12:08 PM

Share

ದೆಹಲಿ: ಭಾರತೀಯ ನಾಯಕತ್ವವೇ ಆಗಿರಲಿ ಅಥವಾ ಸರಾಸರಿ ಭಾರತೀಯನೇ ಆಗಲಿ “ನಾವು ದೊಡ್ಡ ವಿಷಯಗಳನ್ನು ಬಯಸುತ್ತೇವೆ” ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಹೇಳಿದರು. ದಿ ಟೈಮ್ಸ್ ನೌ ಭಾನುವಾರ ಆಯೋಜಿಸಿದ ಇಂಡಿಯಾ@75:  ಸ್ವಾತಂತ್ರ್ಯ ಶೃಂಗಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು ಸಾಮರ್ಥ್ಯ ಅವರವರ ಮನೆಯಿಂದಲೇ ಆರಂಭವಾಗುತ್ತದೆ. ಕಳೆದ ಏಳು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯು ಇಲ್ಲಿ ಗೋಚರಿಸುತ್ತದೆ ಎಂದು ಹೇಳಿದರು.

ಉತ್ಪಾದನೆಯನ್ನು ವಿಸ್ತರಿಸುವುದು, ಕೃಷಿ ಸುಧಾರಣೆಗಳನ್ನು ಕೈಗೊಳ್ಳುವುದು, ನಮ್ಮ ಮಾನವ ಸಂಪನ್ಮೂಲಗಳನ್ನು ನೋಡುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆ ಮತ್ತು ಸುಧಾರಣೆಯನ್ನು ಸಚಿವರು ಸೂಚಿಸಿದ್ದಾರೆ. ಅದೇ ವೇಳೆ ಶಿಕ್ಷಣ ಮತ್ತು ಕೌಶಲ್ಯವನ್ನು ಸುಧಾರಿಸುವುದು, ವ್ಯಾಪಾರ ಮಾಡಲು ಸುಲಭವಾಗಿಸುವುದು, ನಾವು ನಮ್ಮ ಜನರನ್ನು ನೋಡಿಕೊಳ್ಳುವ ವ್ಯವಸ್ಥೆಯನ್ನು ಸೃಷ್ಟಿಸುವುದು, ಆರೋಗ್ಯ, ವಸತಿ, ವಿದ್ಯುತ್ ಮತ್ತು ನೀರು ಮೂಲಭೂತ ಅವಶ್ಯಕತೆಗಳಂತೆ ಒದಗಿಸಬೇಕಾಗಿರುವುದರಿಂದ ಜೀವನ ಗುಣಮಟ್ಟ ಮತ್ತು ನಮ್ಮ ಸಂಪನ್ಮೂಲಗಳ ಗುಣಮಟ್ಟ ಹೆಚ್ಚು ಉತ್ತಮವಾಗಿದೆ. ಚೀನಾದಂತಹ ದೇಶಗಳು ಹೇಗೆ ಬೆಳೆದು ಅಭಿವೃದ್ಧಿ ಹೊಂದಿದವು ಎಂದು ಜೈಶಂಕರ್ ಉದಾಹರಣೆಯಾಗಿ ನೀಡಿದ್ದಾರೆ.

21 ನೇ ಶತಮಾನದಲ್ಲಿ ಹೆಚ್ಚು ಬಹುಧ್ರುವೀಯವಾಗಿರುವ ಒಂದು ಪ್ರಮುಖ ಗುಂಪಾಗಿದೆ ಕ್ವಾಡ್. ಆದರೆ ಭಾರತದ ಹಿತಾಸಕ್ತಿಗಳು ಪೂರ್ವದಲ್ಲಿ ಅಮೆರಿಕಾದೊಂದಿಗೆ  ಹೊಂದಿಕೊಂಡಿದ್ದರೂ ಪಶ್ಚಿಮದಲ್ಲಿ ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಸಚಿವರು ಹೇಳಿದರು.

ಇತ್ತೀಚೆಗೆ ಗುಂಡಿನ ದಾಳಿಗೊಳಗಾದ ನೆರೆಹೊರೆಯಲ್ಲಿ ಭಾರತದ ಸಂಬಂಧಗಳ ಬಗ್ಗೆ ಜೈಶಂಕರ್ ಹೆಚ್ಚಿನ ಒತ್ತು ನೀಡಿದ್ದಾರೆ . “ಪ್ರಧಾನಿ ಮೋದಿ ನೇಪಾಳಕ್ಕೆ ಹೋಗುವ ಮೊದಲು, ಆ ದೇಶವು 17 ವರ್ಷಗಳಿಂದ ನಮ್ಮ ಕಡೆಯಿಂದ ದ್ವಿಪಕ್ಷೀಯ ಭೇಟಿಯನ್ನು ಪಡೆಯಲಿಲ್ಲ. ಶ್ರೀಲಂಕಾ 35 ವರ್ಷಗಳವರೆಗೆ ಒಂದನ್ನು ಪಡೆಯಲಿಲ್ಲ. ಯುಎಇಗೆ ನರೇಂದ್ರ ಮೋದಿಗಿಂತ ಮುಂಚೆ ಹೋದ ಕೊನೆಯ ಭಾರತೀಯ ಪ್ರಧಾನಿ ಇಂದಿರಾ ಗಾಂಧಿ. ನಿಮ್ಮ ನೆರೆಹೊರೆ ಮತ್ತು ನಿಮ್ಮ ವಿಸ್ತೃತ ನೆರೆಹೊರೆಗೆ ನೀವು ಗಮನ ಕೊಡದಿದ್ದರೆ, ನಿಮ್ಮನ್ನು ಪ್ರಮುಖವಾಗಿ ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ.

“ಇಂದು, ನೇಪಾಳವು ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತಿದೆ, ಪೆಟ್ರೋಲಿಯಂ ಮತ್ತು ಡೀಸೆಲ್ ತೆಗೆದುಕೊಳ್ಳುವ ಇಂಧನ ಪೈಪ್‌ಲೈನ್ ಇದೆ. ಬಾಂಗ್ಲಾದೇಶವು ಭಾರತದಿಂದ ವಿದ್ಯುತ್ ಅನ್ನು ಖರೀದಿಸುತ್ತಿದೆ ಮತ್ತು ನಮ್ಮ 1965 ರ ಪೂರ್ವದ ಬಹಳಷ್ಟು ಲಿಂಕ್‌ಗಳನ್ನು ಪುನಃಸ್ಥಾಪಿಸಲಾಗುತ್ತಿದೆ. ನೀವು ಮಾಲ್ಡೀವ್ಸ್ ಅನ್ನು ನೋಡಿದರೆ, ನಾವು ಅವರ ಅಭಿವೃದ್ಧಿ ಯೋಜನೆಗಳ ಭಾಗವಾಗಿದ್ದೇವೆ. ಶ್ರೀಲಂಕಾದೊಂದಿಗೆ, ಸಂಘರ್ಷದ ನಂತರ ಬಹಳಷ್ಟು ಪುನರ್ನಿರ್ಮಾಣವು ನಮ್ಮ ಒಳಗೊಳ್ಳುವಿಕೆಯನ್ನು ಹೊಂದಿದೆ ಎಂದು ಬದಲಾವಣೆಗಳನ್ನು ಜೈಶಂಕರ್ ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ, ಕಾಬೂಲ್ ಏರ್‌ಪೋರ್ಟ್‌ ಬಳಿ ಫೈರಿಂಗ್, ವಿಮಾನಗಳ ಹಾರಾಟ ರದ್ದು

(India’s interests converge with the US’ in the east there are divergences in the west particularly Afghanistan says EAM S Jaishankar)

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!