AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದಾಗ ಮೋದಿ ತಮ್ಮ ಡೈರಿಯಲ್ಲಿ ಬರೆದ ಸಾಲುಗಳಿವು

ಯುವ ಮನಸ್ಸಿನಲ್ಲಿ ಬಿತ್ತಿದ ಅಂತಾರಾಷ್ಟ್ರೀಯ ಸೌಹಾರ್ದತೆ ಮತ್ತು ಏಕತೆಯ ಕನಸಿನ ಬೀಜಗಳು. ವಿಶ್ವಶಾಂತಿ ದಿನದಂದು ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರ ಡೈರಿಯ ಪುಟ...

ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದಾಗ ಮೋದಿ ತಮ್ಮ ಡೈರಿಯಲ್ಲಿ ಬರೆದ ಸಾಲುಗಳಿವು
ನರೇಂದ್ರ ಮೋದಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Sep 22, 2022 | 4:27 PM

Share

ವಿಶ್ವದಾದ್ಯಂತ ಸೆಪ್ಟೆಂಬರ್ 21 ರಂದು ‘ಅಂತರರಾಷ್ಟ್ರೀಯ ಶಾಂತಿ ದಿನ’ (International Day of Peace)ಆಚರಿಸಲಾಗುತ್ತದೆ. ಸಹಾನುಭೂತಿ ಮತ್ತು ದ್ವೇಷವನ್ನು ಜಯಿಸುವ ಪ್ರಪಂಚದ ಗುರಿಯೊಂದಿಗೆ 2022 ರ ಅಂತರರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹಳೇ ಖಾಸಗಿ ಡೈರಿಯ ಪುಟವೊಂದನ್ನು ಮೋದಿ ಆರ್ಕೈವ್ ಎಂಬ ಟ್ವಿಟರ್ ಹ್ಯಾಂಡಲ್​​ನಲ್ಲಿ ಶೇರ್ ಮಾಡಲಾಗಿದೆ. ಯುವ ಮನಸ್ಸಿನಲ್ಲಿ ಬಿತ್ತಿದ ಅಂತಾರಾಷ್ಟ್ರೀಯ ಸೌಹಾರ್ದತೆ ಮತ್ತು ಏಕತೆಯ ಕನಸಿನ ಬೀಜಗಳು. ವಿಶ್ವಶಾಂತಿ ದಿನದಂದು ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರ ಡೈರಿಯ ಪುಟ ಎಂದು  ಡೈರಿಯ ಹಾಳೆಯ ಚಿತ್ರವನ್ನು ಟ್ವೀಟ್ ಮಾಡಲಾಗಿದೆ.

ಈ ಡೈರಿಯ ಪುಟದಲ್ಲಿ ಕೈ ಬರಹದಲ್ಲಿ ಬರೆಯಲಾಗಿದ್ದು ಅದು ಹೀಗಿದೆ.

ನಮ್ಮ ಪ್ರಜ್ಞೆ, ನಮ್ಮ ಅಸ್ತಿತ್ವದ ಸಾರ – ವೈವಿಧ್ಯತೆಯಲ್ಲಿ ಏಕತೆ

ಕೆಲಸದ ಸಂಸ್ಕೃತಿ – ತ್ಯಾಗವು ಪ್ರತಿಫಲ ಪಡೆಯುತ್ತದೆ

ಕಾರ್ಯಶೈಲಿ – ದೇವರು ನಮ್ಮೆಲ್ಲರನ್ನು ಕಾಪಾಡಲಿ. ನಮ್ಮೆಲ್ಲರನ್ನೂ ಒಟ್ಟಿಗೆ ಪೋಷಿಸಲಿ

ರಾಷ್ಟ್ರೀಯ ಆಕಾಂಕ್ಷೆ – ನಾನು ಈ ಜೀವನವನ್ನು ದೇಶ ಸೇವೆಗಾಗಿ ಅರ್ಪಿಸುತ್ತೇನೆ, ಅದು ನನ್ನದಲ್ಲ

ಇಡೀ ಪ್ರಪಂಚವೇ ನಮ್ಮ ಕುಟುಂಬ

ನಮ್ಮ ಸಂಪ್ರದಾಯ – ಮುಂದುವರಿಯಿರಿ (ನಿರಂತರರಾಗಿರಿ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಿ ಮತ್ತು ಸಾಹಸವನ್ನು ಮುಂದುವರಿಸಿ)

ಇಡೀ ಜಗತ್ತು ಸುಖವಾಗಿರಬೇಕೆಂಬುದು ನಮ್ಮ ಕನಸು

ನಮ್ಮ ತತ್ವ – ನಾನು ರಾಜ್ಯವನ್ನು ಹುಡುಕುವುದಿಲ್ಲ ಅಥವಾ ನಾನು ಸ್ವರ್ಗವನ್ನು ಬಯಸುವುದಿಲ್ಲ, ಪುನರ್ಜನ್ಮವೂ ಅಲ್ಲ!

ಮಾತೃಭೂಮಿಗೆ ನಮನ

Follow Us
Web contact
Web contact

TV9 Kannada

Read More