AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸ್​ ಡಿಜಿಯಾಗಿ ಸಂಜಯ್ ಅಧಿಕಾರ ಸ್ವೀಕಾರ

ಡಿಜಿ ಸ್ಥಾನಕ್ಕೆ ಏರಿದ ಸಂಜಯ್​ ಅರೋರಾ, ಸಿಆರ್​ಪಿಎಫ್​ (ಕೇಂದ್ರೀಯ ಮೀಸಲು ಪಡೆ)ನ ವಿಶೇಷ ಮಹಾ ನಿರ್ದೇಶಕರಾಗಿದ್ದು. 1997ರಿಂದ 2002ರವರೆಗೆ ಕಮಾಂಡಂಟ್​ ಆಗಿ ಐಟಿಬಿಪಿಯಲ್ಲಿ ಸೇವೆ ಸಲ್ಲಿಸಿದ್ದರು.

ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸ್​ ಡಿಜಿಯಾಗಿ ಸಂಜಯ್ ಅಧಿಕಾರ ಸ್ವೀಕಾರ
ಸಂಜಯ್​ ಅರೋರಾ ಅಧಿಕಾರ ಸ್ವೀಕಾರ
TV9 Web
| Edited By: |

Updated on:Aug 31, 2021 | 6:20 PM

Share

ಐಪಿಎಸ್​ ಅಧಿಕಾರಿ ಸಂಜಯ್​ ಅರೋರಾ ಇಂದು ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​ ಪಡೆ (ITBP) ಮಹಾ ನಿರ್ದೇಶಕ (Director General-DG)ಯಾಗಿ ಅಧಿಕಾರ ವಹಿಸಿಕೊಂಡರು. ಈ ಹಿಂದಿದ್ದ ಎಸ್​.ಎಸ್​.ದೇಸ್ವಾಲ್​ ನಿವೃತ್ತಿ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸಂಜಯ್ ಅರೋರಾ ಏರಿದ್ದಾರೆ. 31ನೇ ಡಿಜಿಯಾಗಿ ನೇಮಕಗೊಂಡ ಸಂಜಯ್​ ಅರೋರಾರಿಗೆ, ನಿರ್ಗಮಿತ ಡಿಜಿ ದೇಸ್ವಾಲ್​, ಐಟಿಬಿಪಿ ಪ್ರಧಾನ ಕಚೇರಿಯಲ್ಲಿ ಅಧಿಕಾರ ದಂಡವನ್ನು ಹಸ್ತಾಂತರ ಮಾಡಿದ್ದಾರೆ.

ದೇಸ್ವಾಲ್​ ಹರ್ಯಾಣ ಕೇಡರ್​ನ ಐಪಿಎಸ್ ಅಧಿಕಾರಿಯಾಗಿದ್ದವರು, 2018ರ ಅಕ್ಟೋಬರ್ 31ರಂದು ಐಟಿಬಿಪಿ ಡಿಜಿಯಾಗಿ ನೇಮಕಗೊಂಡಿದ್ದರು. ಸಶಸ್ತ್ರ ಸೀಮಾ ಬಲದ ಡಿಜಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇದೀಗ ಡಿಜಿ ಸ್ಥಾನಕ್ಕೆ ಏರಿದ ಸಂಜಯ್​ ಅರೋರಾ, ಸಿಆರ್​ಪಿಎಫ್​ (ಕೇಂದ್ರೀಯ ಮೀಸಲು ಪಡೆ)ನ ವಿಶೇಷ ಮಹಾ ನಿರ್ದೇಶಕರಾಗಿದ್ದು. 1997ರಿಂದ 2002ರವರೆಗೆ ಕಮಾಂಡಂಟ್​ ಆಗಿ ಐಟಿಬಿಪಿಯಲ್ಲಿ ಸೇವೆ ಸಲ್ಲಿಸಿದ್ದರು. ತರಬೇತಿ ಕ್ಷೇತ್ರದಲ್ಲಿ ಬೋಧಕರಾಗಿ ಮಹತ್ವದ ಸಾಧನೆ ಮಾಡಿದ್ದಾರೆ. ಹಾಗೇ, 2000-2002ರವರೆಗೆ ಉತ್ತರಾಖಂಡ್​ನ ಮಸ್ಸೂರಿಯಲ್ಲಿರುವ ಐಟಿಬಿಪಿ ಅಕಾಡೆಮಿಯ ತರಬೇತಿ ವಿಭಾಗದಲ್ಲಿ ಕಮಾಂಡಂಟ್​ ಆಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಹಿಂದೂಗಳ ಜನಸಂಖ್ಯೆ ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯಲಿದೆ: ಸಿ ಟಿ ರವಿ

ಇದು ಸ್ವಾತಂತ್ರ್ಯ ಹೋರಾಟವೇನೂ ಅಲ್ಲ, ಹೋರಾಡುವುದಾದರೆ ಕೊವಿಡ್ ವಿರುದ್ಧ ಹೋರಾಡಿ: ಬಿಜೆಪಿ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ

Published On - 6:19 pm, Tue, 31 August 21

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!