ನೋಡಲು ಚೆನ್ನಾಗಿದೆ; ಜಲಿಯನ್ ವಾಲಾಬಾಗ್ ನವೀಕರಣ ಬಗ್ಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್
Amarinder Singh: "ಏನು ತೆಗೆದುಹಾಕಲಾಗಿದೆ ಎಂದು ನನಗೆ ಗೊತ್ತಿಲ್ಲ. ನನಗೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ" ಎಂದು ಸಿಂಗ್ ಹೇಳಿದ್ದಾರೆ. ಇತ್ತ ರಾಹುಲ್ ಗಾಂಧಿ "ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಅವಮಾನ" ಎಂದು ಕರೆದಿದ್ದು ಸಿಂಗ್ ರಾಹುಲ್ಗಿಂತ ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದಾರೆ.

ದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇಂದು ಜಲಿಯನ್ ವಾಲಾಬಾಗ್ ನವೀಕರಣವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಜಲಿಯನ್ ವಾಲಾಬಾಗ್ ನವೀಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಇತಿಹಾಸಕಾರರು ಮತ್ತು ನಾಗರಿಕ ಸಮಾಜದಿಂದ ಟೀಕೆಗಳನ್ನು ಎದುರಿಸುತ್ತಿದೆ. ಜಲಿಯನ್ ವಾಲಾಬಾಗ್ ನವೀಕರಣವನ್ನು ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರ ಯಾಕೆ ತಡೆದಿಲ್ಲ ಎಂಬ ಪ್ರಶ್ನೆಗಳೂ ಕೇಳಿಬಂದಿದೆ. ಲೇಸರ್ ಶೋ ಸೇರಿದಂತೆ, ಸ್ಟ್ಯಾಕ್ ಕಾರಿಡಾರ್ ಮೊದಲಾದ ನವೀಕರಣದಿಂದಾಗಿ ಜನರ ತ್ಯಾಗವನ್ನು ಕ್ಷುಲ್ಲಕವಾಗಿಸಿದೆ ಮತ್ತು ಪಂಜಾಬ್ ಸರ್ಕಾರ ಅದನ್ನು ಆರಂಭದಲ್ಲಿಯೇ ನಿಲ್ಲಿಸಬೇಕಾಗಿತ್ತು ಎಂದು ಹಲವರು ಹೇಳಿದ್ದಾರೆ. “ಏನು ತೆಗೆದುಹಾಕಲಾಗಿದೆ ಎಂದು ನನಗೆ ಗೊತ್ತಿಲ್ಲ. ನನಗೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ” ಎಂದು ಸಿಂಗ್ ಹೇಳಿದ್ದಾರೆ. ಇತ್ತ ರಾಹುಲ್ ಗಾಂಧಿ “ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಅವಮಾನ” ಎಂದು ಕರೆದಿದ್ದು ಸಿಂಗ್ ರಾಹುಲ್ಗಿಂತ ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದಾರೆ. “ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಇಂತಹ ಅವಮಾನವನ್ನು ಹುತಾತ್ಮರ ಅರ್ಥ ತಿಳಿಯದವರು ಮಾತ್ರ ಮಾಡಬಹುದು. ನಾವು ಈ ಕ್ರೌರ್ಯದ ವಿರುದ್ಧ ಇದ್ದೇವೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
जलियाँवाला बाग़ के शहीदों का ऐसा अपमान वही कर सकता है जो शहादत का मतलब नहीं जानता।
मैं एक शहीद का बेटा हूँ- शहीदों का अपमान किसी क़ीमत पर सहन नहीं करूँगा।
हम इस अभद्र क्रूरता के ख़िलाफ़ हैं। pic.twitter.com/3tWgsqc7Lx
— Rahul Gandhi (@RahulGandhi) August 31, 2021
102 ವರ್ಷಗಳ ಹಿಂದೆ ಬ್ರಿಟಿಷ್ ಜನರಲ್ ಡೈಯರ್ ಶಾಂತಿಯುತ ಪ್ರತಿಭಟನೆ ವಿರುದ್ಧ ಗುಂಡು ಹಾರಿಸಿದ್ದ ಜಲಿಯನ್ ವಾಲಾಬಾಗ್ ಈ ನವೀಕರಣದೊಂದಿಗೆ ಘನತೆ, ನಷ್ಟ ಮತ್ತು ಭಯಾನಕತೆಯ ಸ್ಥಳವನ್ನು ಕಸಿದುಕೊಂಡಿದೆ ಎಂದು ಇತರ ವಿರೋಧ ಪಕ್ಷದ ಖಂಡಿಸಿದರು.
ಸಿಪಿಎಂನ ಸೀತಾರಾಂ ಯೆಚೂರಿಯಂತಹ ನಾಯಕರು ಬಲಪಂಥೀಯ ಇತಿಹಾಸವನ್ನು ಉಲ್ಲೇಖಿಸಿ ತೀವ್ರವಾಗಿ ಟೀಕಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದವರು ಮಾತ್ರ ಇದನ್ನು ಮಾಡಬಹುದು ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು “ನೋವು … ನಷ್ಟ (ಮತ್ತು) ದುರಂತದ ಬಗ್ಗೆ ನೆನಪುಗಳನ್ನು ಸುಂದರಗೊಳಿಸುವ “ಅಥವಾ” ಆ ನೆನಪುಗಳನ್ನು “ಮಾರ್ಪಡಿಸುವ ಪ್ರಯತ್ನಗಳು ನಮ್ಮ ಸಾಮೂಹಿಕ ಇತಿಹಾಸಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನೂ ಹುತಾತ್ಮರ ಮಗ, ಈ ಅವಮಾನ ಸಹಿಸುವುದಿಲ್ಲ; ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕರಣಕ್ಕೆ ರಾಹುಲ್ ಗಾಂಧಿ ಕಿಡಿ
(Punjab CM Amarinder Singh support the renovations at Jallianwala Bagh says Looks Nice)




