Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹದಿನಾರು ಯಂತ್ರಗಳ ಬಳಸಿ ಸ್ವಚ್ಛತಾ ಅಭಿಯಾನ ಶುರು, ಮತ್ತಷ್ಟು ಕಣ್ಮನ ತಣಿಸಲಿದೆ ಆಕರ್ಷಕ ದಾಲ್ ಸರೋವರ! ನೀವೂ ನೋಡಿ

ಕೊರೊನಾ ವೈರಸ್ನಿಂದ ದಾಲ್ ಸರೋವರದ ಸ್ವಚ್ಛತಾ ಕಾರ್ಯ ಕಳೆದ ವರ್ಷ ನಿಂತು ಹೋಗಿತ್ತು. ಸರೋವರಗಳು ಮತ್ತು ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರ (LAWDA) ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಹದಿನಾರು ಯಂತ್ರಗಳ ಬಳಸಿ ಸ್ವಚ್ಛತಾ ಅಭಿಯಾನ ಶುರು, ಮತ್ತಷ್ಟು ಕಣ್ಮನ ತಣಿಸಲಿದೆ ಆಕರ್ಷಕ ದಾಲ್ ಸರೋವರ! ನೀವೂ ನೋಡಿ
ದಾಲ್ ಸರೋವರದಲ್ಲಿ ಸ್ವಚ್ಛತಾ ಅಭಿಯಾನ ಶುರು
Follow us
TV9 Web
| Updated By: ಆಯೇಷಾ ಬಾನು

Updated on: Sep 30, 2021 | 9:36 AM

ಕಾಶ್ಮೀರದ ಎರಡನೇ ದೊಡ್ಡ ಸರೋವರ ಹಾಗೂ ಶ್ರೀನಗರದ ರತ್ನ ಎಂದು ಖ್ಯಾತಿ ಪಡೆದಿರುವ ದಾಲ್ ಸರೋವರದಲ್ಲಿ(Dal Lake) ಸ್ವಚ್ಛತಾ ಅಭಿಯಾನ ಭರದಿಂದ ಸಾಗಿದೆ. ದಾಲ್ ಸರೋವರವು ಅತ್ಯಂತ ಜನಪ್ರಿಯ ಮತ್ತು ಪಾರಂಪರಿಕ ಜಲಮೂಲಗಳಲ್ಲಿ ಒಂದಾಗಿದೆ. ಈ ಪ್ರಸಿದ್ಧ ಪ್ರವಾಸಿ ತಾಣ ಪ್ರಪಂಚದಾದ್ಯಂತ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆದರೆ ಸರೋವರದಲ್ಲಿ ಬೆಳೆದಿರುವ ಕೊಚ್ಚೆ ಗಿಡಗಳು ಮತ್ತು ಲಿಲ್ಲಿ ಎಲೆಗಳು ಸರೋವರದ ಸೌಂದರ್ಯವನ್ನೇ ಹಾಳು ಮಾಡಿವೆ. ಹೀಗಾಗಿ ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರ (LAWDA) ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಕೊರೊನಾ ವೈರಸ್ನಿಂದ ದಾಲ್ ಸರೋವರದ ಸ್ವಚ್ಛತಾ ಕಾರ್ಯ ಕಳೆದ ವರ್ಷ ನಿಂತು ಹೋಗಿತ್ತು. ಸರೋವರಗಳು ಮತ್ತು ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರ (LAWDA) ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಈ ಬಗ್ಗೆ ಮಾತನಾಡಿದ LAWDAಯ ಉಪಾಧ್ಯಕ್ಷರಾದ ಡಾ.ಬಶೀರ್ ಅಹ್ಮದ್ ಭಟ್, “ಇದು ಸವಾಲಿನ ಕೆಲಸವಾಗಿದೆ. ನಾವು ಇಲ್ಲಿ ಬೆಳೆದಿರುವ ಗಿಡ-ಎಲೆಗಳನ್ನು ತೆಗೆಯಲು 15-16 ಕ್ಕೂ ಹೆಚ್ಚು ಯಂತ್ರಗಳನ್ನು ಬಳಸುತ್ತಿದ್ದೇವೆ. ದಾಲ್ ಸರೋವರವು ಶ್ರೀನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಆಕರ್ಷಣೀಯ ಸ್ಥಳವಾಗಿ ಉಳಿದಿದೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ಕೊಡುಗೆ ನೀಡುತ್ತಿದೆ ಎಂದರು.

Dal Lake

ದಾಲ್ ಸರೋವರ

ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷಗಳಿಂದ ದಾಲ್ ಸರೋವರದ ಶುಚಿಗೊಳಿಸುವಿಕೆ ನಡೆಯುತ್ತಿರಲಿಲ್ಲ. ಅದೃಷ್ಟವಶಾತ್, ಈಗ ಇದನ್ನು ಆರಂಭಿಸಲಾಗಿದೆ. ಯಂತ್ರಗಳನ್ನು ಬಳಸಿ ಮತ್ತು ಕೈಯಾರೆ ಸ್ವಚ್ಛಗೊಳಿಸಲಾಗುತ್ತಿದೆ. ಸರೋವರ ತನ್ನ ಸೌಂದರ್ಯವನ್ನು ಕಳೆದುಕೊಂಡರೆ ಪ್ರವಾಸಿಗರು ಬರುವುದಿಲ್ಲ. ಆದ್ದರಿಂದ ಅದರ ಸ್ವಚ್ಛತೆ ಮುಖ್ಯವಾಗಿದೆ. ಪ್ರವಾಸೋದ್ಯಮವೇ ನಮ್ಮ ಆದಾಯದ ಮೂಲವಾಗಿದೆ ಎಂದು ಸ್ಥಳೀಯ ನಿವಾಸಿ ಆಶಿಕ್ ಹುಸೇನ್ ತಿಳಿಸಿದರು.

ಸರ್ಕಾರವು ಕೆರೆಯನ್ನು ಸ್ವಚ್ಛಗೊಳಿಸಲು ಆರಂಭಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅದರ ನೈಸರ್ಗಿಕ ಸೌಂದರ್ಯವನ್ನು ಪುನಃಸ್ಥಾಪಿಸಲು ಸರ್ಕಾರ ಶ್ರಮಿಸುತ್ತಿದೆ. ದಾಲ್ ಸರೋವರವು ನಮ್ಮ ಪರಂಪರೆಯಾಗಿದೆ ಎಂದು ದಾಲ್ ಸರೋವರ ನೋಡಲು ಬಂದಿದ್ದ ಪ್ರವಾಸಿ ಮುನೀರ್ ಖಾನ್ ಹೇಳಿದರು.

Dal Lake

16 ಕ್ಕೂ ಹೆಚ್ಚು ಯಂತ್ರಗಳನ್ನು ಬಳಸಿ ಸ್ವಚ್ಛತಾ ಅಭಿಯಾನ

ಇದನ್ನೂ ಓದಿ: ಅಂದು ಅಂಕಲ್​ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್​ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್

ಉತ್ತರ ಕರ್ನಾಟಕ ಸ್ಪೆಷಲ್ ಅರಳು ಹಿಟ್ಟಿನ ಉಂಡೆ ಹೇಗೆ ಮಾಡ್ತಾರೆ ಗೊತ್ತಾ? ವಿಧಾನ ಇಲ್ಲಿದೆ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್