AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ನಿಂತು ರಷ್ಯಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಪಾನ್​ ಪ್ರಧಾನಿ; ಉಕ್ರೇನ್​​ಗೆ ನಮ್ಮ ಬೆಂಬಲವೆಂದ ಕಿಶಿದಾ

ಜಪಾನ್​ ಮತ್ತು ಭಾರತ ಕ್ವಾಡ್​​ ಶೃಂಗದಲ್ಲಿ ಇರುವ ರಾಷ್ಟ್ರಗಳು. ಕ್ವಾಡ್​​ನಲ್ಲಿರುವ ಜಪಾನ್​, ಆಸ್ಟ್ರೇಲಿಯಾ, ಯುಎಸ್​ಗಳು ಬಹಿರಂಗವಾಗಿಯೇ ರಷ್ಯಾವನ್ನು ವಿರೋಧಿಸಿವೆ, ತಮ್ಮ ಸಂಪೂರ್ಣ ಬೆಂಬಲ ಉಕ್ರೇನ್​​ಗೆ ಎಂದು ಹೇಳಿವೆ. ಆದರೆ ಭಾರತ ಎರಡೂ ದೇಶಗಳ ವಿರುದ್ಧವಾಗಲಿ-ಪರವಾಗಲಿ ಮಾತನಾಡುತ್ತಿಲ್ಲ

ಭಾರತದಲ್ಲಿ ನಿಂತು ರಷ್ಯಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಪಾನ್​ ಪ್ರಧಾನಿ; ಉಕ್ರೇನ್​​ಗೆ ನಮ್ಮ ಬೆಂಬಲವೆಂದ ಕಿಶಿದಾ
ಫುಮಿಯೊ ಕಿಶಿದಾ ಮತ್ತು ಪ್ರಧಾನಿ ಮೋದಿ
TV9 Web
| Edited By: |

Updated on: Mar 20, 2022 | 12:13 PM

Share

ಉಕ್ರೇನ್​ ಮೇಲೆ ರಷ್ಯಾ ಯುದ್ಧ (Russia-Ukraine War) ಸಾರಿ, ಅಲ್ಲಿ ಒಂದೇ ಸಮನೆ ಆಕ್ರಮಣ ಮಾಡುತ್ತಿರುವುದು ಗಂಭೀರವಾದ ವಿಚಾರವಾಗಿದೆ. ಇದು ಅಂತಾರಾಷ್ಟ್ರೀಯ ಕ್ರಮಬದ್ಧ ವ್ಯವಸ್ಥೆಯ ಬೇರನ್ನೇ ಅಲ್ಲಾಡಿಸುತ್ತಿದೆ ಎಂದು ಜಪಾನ್​ ಪ್ರಧಾನಮಂತ್ರಿ ಫುಮಿಯೊ ಕಿಶಿದಾ (Fumio Kishida) ಹೇಳಿದರು. ಶನಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಿಶಿದಾ ಜಂಟಿಯಾಗಿ, ಅಕ್ಕಪಕ್ಕ ನಿಂತುಕೊಂಡು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಜಪಾನ್​ ಪ್ರಧಾನಿ, ಉಕ್ರೇನ್​ ವಿಚಾರವನ್ನು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೇ, ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕ್ರಮಬದ್ಧತೆಯನ್ನು ಬದಲಿಸಲು ಯಾರೂ ಏಕಮುಖವಾಗಿ ಮುಂದಾಗಬಾರದು. ಅದರಲ್ಲೂ ಸೇನಾ ಬಲ ಪ್ರಯೋಗದ ಮೂಲಕ ಯಾವುದೇ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವುದು ಸ್ವಲ್ಪವೂ ಸರಿಯಲ್ಲ ಎಂದಿದ್ದಾರೆ. ಈ ಮೂಲಕ ರಷ್ಯಾ ಯಾರ ಮಾತುಗಳನ್ನೂ ಕೇಳದೆ ಒಂದೇ ಸಮ ಉಕ್ರೇನ್​ ಮೇಲೆ ಆಕ್ರಮಣ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ.

ಟೋಕಿಯೋ ಉಕ್ರೇನ್​ಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ.  ಉಕ್ರೇನ್​​ನಲ್ಲಿ ಉಂಟಾಗಿರುವ ಅಸ್ಥಿರತೆ, ರಷ್ಯಾ-ಉಕ್ರೇನ್​ ಬಿಕ್ಕಟ್ಟು ಶೀಘ್ರವೇ ಶಮನವಾಗಲಿ, ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತ ಮತ್ತು ಜಪಾನ್​ ರಾಷ್ಟ್ರಗಳು ಬಯಸುತ್ತವೆ. ಹಾಗೇ, ಇಂಡೋ-ಪೆಸಿಫಿಕ್​ ರಾಷ್ಟ್ರಗಳ ಸುರಕ್ಷತೆ, ಮುಕ್ತತೆಯೂ ನಮ್ಮ ಆದ್ಯತೆ ಎಂದು ಕಿಶಿದಾ ಹೇಳಿದ್ದಾರೆ.  ಪ್ರಧಾನಿ ಮೋದಿ ಮಾತನಾಡಿ, ಜಪಾನ್​ ಭಾರತದಲ್ಲಿ ಅತಿ ದೊಡ್ಡ ಹೂಡಿಕೆದಾರ ದೇಶಗಳಲ್ಲಿ ಒಂದು. ಮುಂಬೈ-ಅಹ್ಮದಾದಾಬ್​ ಹೈಸ್ಪೀಡ್​ ರೈಲು ಕಾರಿಡಾರ್​ ಯೋಜನೆಯಲ್ಲಿ ಭಾರತ-ಜಪಾನ್​ ಒಂದು ತಂಡ-ಒಂದು ಯೋಜನೆಯಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಮುಂದಿನ ಐದುವರ್ಷಗಳಲ್ಲಿ ಜಪಾನ್​  3.2 ಲಕ್ಷ  ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದೂ ತಿಳಿಸಿದ್ದಾರೆ.

ಜಪಾನ್​ ಮತ್ತು ಭಾರತ ಕ್ವಾಡ್​​ ಶೃಂಗದಲ್ಲಿ ಇರುವ ರಾಷ್ಟ್ರಗಳು. ಕ್ವಾಡ್​​ನಲ್ಲಿರುವ ಜಪಾನ್​, ಆಸ್ಟ್ರೇಲಿಯಾ, ಯುಎಸ್​ಗಳು ಬಹಿರಂಗವಾಗಿಯೇ ರಷ್ಯಾವನ್ನು ವಿರೋಧಿಸಿವೆ, ತಮ್ಮ ಸಂಪೂರ್ಣ ಬೆಂಬಲ ಉಕ್ರೇನ್​​ಗೆ ಎಂದು ಹೇಳಿವೆ. ಆದರೆ ಭಾರತ ಎರಡೂ ದೇಶಗಳ ವಿರುದ್ಧವಾಗಲಿ-ಪರವಾಗಲಿ ಮಾತನಾಡುತ್ತಿಲ್ಲ. ಭಾರತಕ್ಕೆ ರಷ್ಯ ಉತ್ತಮ ಸ್ನೇಹಿತ. ಹೀಗಾಗಿ ಅದು ರಷ್ಯಾ-ಉಕ್ರೇನ್​ ಯುದ್ಧದ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತಿದೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕಾಗಿ ಬಂದಾಗಲೆಲ್ಲ ದೂರವೇ ಉಳಿದುಕೊಂಡಿದೆ. ಇಂಡೋ-ಜಪಾನ್​ ವಾರ್ಷಿಕ ಶೃಂಗಕ್ಕಾಗಿ ಮಾರ್ಚ್​ 19ರಂದು ದೆಹಲಿಗೆ ಬಂದಿರುವ ಜಪಾನ್​ ಪ್ರಧಾನಿ ಕಿಶಿದಾ ಇಂದು ವಾಪಸ್​ ತೆರಳಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್​​ ₹3.2 ಲಕ್ಷ ಕೋಟಿ ಹೂಡಿಕೆ ಮಾಡಲಿದೆ: ಪ್ರಧಾನಿ ಮೋದಿ

Follow Us
TV9 Web
TV9 Web

TV9 Kannada

Read More
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!
ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್