AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್​ಗೆ ಹೊರಟಿದ್ದ ಪತ್ರಕರ್ತೆ ರಾಣಾ ಅಯೂಬ್​​​ಗೆ ಏರ್​ಪೋರ್ಟ್​​ನಲ್ಲಿ ತಡೆ; ಆ ಕ್ಷಣದಲ್ಲಿ ಬಂತು ಇ.ಡಿ.ಯಿಂದ ಸಮನ್ಸ್​

ಮಾರ್ಚ್​ 29ರಂದು International Center for Journalists ಟ್ವಿಟರ್ ಅಕೌಂಟ್​​ನಲ್ಲಿ ರಾಣಾ ಅಯೂಬ್​ ಫೋಟೊ ಹಾಕಿ, ಮಹಿಳಾ ಪತ್ರಕರ್ತರ ಮೇಲೆ ಆನ್​​ಲೈನ್​​ ಮೂಲಕವೂ ದೌರ್ಜನ್ಯ ಎಂಬ ವಿಚಾರದ ಬಗ್ಗೆ ಮಾತನಾಡಲು ನಾವು ರಾಣಾ ಅಯೂಬ್​ರನ್ನು ಯುಕೆಗೆ ಕರೆಸುತ್ತಿದ್ದೇವೆ ಎಂದು ಹೇಳಿತ್ತು.

ಲಂಡನ್​ಗೆ ಹೊರಟಿದ್ದ ಪತ್ರಕರ್ತೆ ರಾಣಾ ಅಯೂಬ್​​​ಗೆ ಏರ್​ಪೋರ್ಟ್​​ನಲ್ಲಿ ತಡೆ; ಆ ಕ್ಷಣದಲ್ಲಿ ಬಂತು ಇ.ಡಿ.ಯಿಂದ ಸಮನ್ಸ್​
ರಾಣಾ ಅಯೂಬ್​
TV9 Web
| Updated By: Lakshmi Hegde|

Updated on: Mar 30, 2022 | 1:44 PM

Share

ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿರುವ ಪತ್ರಕರ್ತೆ ರಾಣಾ ಅಯೂಬ್ (Rana Ayyub)​​ರನ್ನು ಲಂಡನ್​ಗೆ ಹೋಗದಂತೆ ತಡೆಯಲಾಗಿದೆ. ರಾಣಾ ಅವರು ಲಂಡನ್​​ನಲ್ಲಿ ನಡೆಯಲಿರುವ ಇಂಟರ್​ನ್ಯಾಶನಲ್​ ಸೆಂಟರ್​ ಫಾರ್​ ಜರ್ನಲಿಸ್ಟ್ಸ್​ (ICJ) ಕಾರ್ಯಕ್ರಮದಲ್ಲಿ ಭಾಷಣ ಮಾಡಲು ತೆರಳುವವರಿದ್ದರು. ಹೀಗಾಗಿ ಮಾರ್ಚ್​ 29ರಂದು ಮುಂಬೈ ಏರ್​ಪೋರ್ಟ್​ಗೆ ಬಂದಿದ್ದರು. ಆದರೆ ಅವರು ಫ್ಲೈಟ್​ ಹತ್ತಲು ಕೆಲವೇ ಹೊತ್ತಿರುವಾಗ ಇ.ಡಿ. ಅವರಿಗೆ ಸಮನ್ಸ್​ ಕಳಿಸಿದೆ. ಈ ಬಗ್ಗೆ ರಾಣಾ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ನಾನು ಲಂಡನ್​ಗೆ ಯಾಕಾಗಿ ಹೋಗುತ್ತೇನೆ ಎಂಬುದನ್ನು ಮುಂಚಿತವಾಗಿಯೇ ಬಹಿರಂಗಪಡಿಸಿದ್ದೆ. ಹೀಗಿದ್ದಾಗ್ಯೂ ನಾನು ಏರ್​ಪೋರ್ಟ್​ಗೆ ಬಂದ ಮೇಲೆ ಇ.ಡಿ. ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಾರ್ಚ್​ 29ರಂದು International Center for Journalists ಟ್ವಿಟರ್ ಅಕೌಂಟ್​​ನಲ್ಲಿ ರಾಣಾ ಅಯೂಬ್​ ಫೋಟೊ ಹಾಕಿ, ಮಹಿಳಾ ಪತ್ರಕರ್ತರ ಮೇಲೆ ಆನ್​​ಲೈನ್​​ ಮೂಲಕವೂ ದೌರ್ಜನ್ಯ ಎಂಬ ವಿಚಾರದ ಬಗ್ಗೆ ಮಾತನಾಡಲು ನಾವು ರಾಣಾ ಅಯೂಬ್​ರನ್ನು ಯುಕೆಗೆ ಕರೆಸುತ್ತಿದ್ದೇವೆ ಎಂದು ಹೇಳಿತ್ತು. ಅದಕ್ಕಾಗಿ ಹೊರಟಿದ್ದ ತಮ್ಮನ್ನು ಮುಂಬೈ ಏರ್​ಪೋರ್ಟ್​ನಲ್ಲಿ ತಡೆಯುತ್ತಿದ್ದಂತೆ ಇದೇ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡ ರಾಣಾ, ಲಂಡನ್​​ಗೆ ಹೊರಟಿದ್ದ ನನ್ನನ್ನು ಮುಂಬೈ ಏರ್​ಪೋರ್ಟ್​​ನಲ್ಲಿ ತಡೆಯಲಾಯಿತು. ನಾನು ಲಂಡನ್​​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಕಳೆದ ಒಂದು ವಾರದ ಹಿಂದೆಯೇ ತಿಳಿಸಿದ್ದೇನೆ. ಆದರೆ ಇ.ಡಿ.ಯವರು ಏನೂ ಹೇಳಲಿಲ್ಲ. ಆದರೆ ನಾನು ಮುಂಬೈ ಏರ್​ಪೋರ್ಟ್​ಗೆ ಬಂದಮೇಲೆ ನನ್ನನ್ನು ತಡೆಯಲಾಯಿತು ಮತ್ತು ಅರೆಕ್ಷಣದಲ್ಲಿ ನನ್ನ ಇನ್​ಬಾಕ್ಸ್​ಗೆ ಇ.ಡಿ.ಯಿಂದ ಸಮನ್ಸ್​ ಬಂತು ಎಂದು ತಿಳಿಸಿದ್ದಾರೆ.

ಇನ್ನು ಇ.ಡಿ.ಅಧಿಕಾರಿಗಳು ರಾಣಾ ಅಯೂಬ್​​ರಿಗೆ ಏಪ್ರಿಲ್​ 1ರಂದು ವಿಚಾಚರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.  ರಾಣಾ ವಿರುದ್ಧ ಕಳೆದ ಸೆಪ್ಟೆಂಬರ್​​ನಲ್ಲಿ ಉತ್ತರ ಪ್ರದೇಶ ಘಾಜಿಯಾಬಾದ್​ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ.  ಹಿಂದು ಐಟಿ ಸೆಲ್​  ಎಂಬ ಎನ್​ಜಿಒದ ಸಂಸ್ಥಾಪಕರು, ಘಾಜಿಯಾಬಾದ್​ನ ಇಂದಿರಾಪುರಂ ನಿವಾಸಿಯಾಗಿರುವ ವಿಕಾಸ್​ ಸಾಂಕೃತ್ಯಾಯನ್ ಎಂಬುವರು ರಾಣಾ ವಿರುದ್ಧ ದೂರು ನೀಡಿದ್ದರು. 2020-2021ರ ಅವಧಿಯಲ್ಲಿ ರಾಣಾ ದತ್ತಿ ಉದ್ದೇಶಗಳ ಕಾರಣ ನೀಡಿ ಆನ್​ಲೈನ್​ ಮೂಲಕ ಸುಮಾರು 2.69 ಕೋಟಿ ರೂಪಾಯಿಯನ್ನು ಆನ್​​ಲೈನ್​ ವೇದಿಕೆ ಕೆಟ್ಟೋ ಮೂಲಕ ಸಂಗ್ರಹಿಸಿದ್ದಾರೆ. ಇದರಲ್ಲಿ ಕೆಲವು ಘಟಕಗಳ ಹೆಸರಲ್ಲಿ ನಕಲಿ ಬಿಲ್​ಗಳನ್ನು ಸಿದ್ಧಪಡಿಸಿದ್ದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವನ್ನು ಇ.ಡಿ.ಕೈಗೆತ್ತಿಕೊಂಡಿದ್ದು, ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?

ಗಾಜಿಯಾಬಾದ್ ಪ್ರಕರಣ: ಪತ್ರಕರ್ತೆ ರಾಣಾ ಅಯೂಬ್​ಗೆ ಬಾಂಬೆ ಹೈಕೋರ್ಟ್​ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ