AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?

ಗಂಡು ಕಚಿಡಿ ಮೀನುಗಳು ಚಿನ್ನದ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಚಿನ್ನದ ಮೀನು ಎಂದೂ ಕರೆಯುತ್ತಾರೆ. ಈ ಮೀನು ಅಮೂಲ್ಯವಾಗಿದ್ದು, ಬಲೆ ಬೀಸಿ ಇದನ್ನು ಹಿಡಿದವರ ಜೀವನವೇ ಬದಲಾಗುತ್ತದೆ.

ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?
ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?
TV9 Web
| Edited By: |

Updated on: Oct 13, 2022 | 12:48 PM

Share

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಅಂತರವೇದಿ ಸಮುದ್ರ ತೀರದಲ್ಲಿ (Antarvedi seashore) ಅಪರೂಪದ ಮೀನು ಬಲೆಗೆ ಸಿಕ್ಕಿಬಿದ್ದಿದೆ. ಉಪ್ಪಡದ (Uppada ) ಮೀನುಗಾರರೊಬ್ಬರು ಗಂಡು ಕಚಿಡಿ ಮೀನು (kachidi fish) ಹಿಡಿದಿದ್ದಾರೆ. ಇದನ್ನು ಸ್ಥಳೀಯ ದಲ್ಲಾಳಿಯೊಬ್ಬರು ಹರಾಜಿನಲ್ಲಿ ರೂಪಾಯಿ 2 ಲಕ್ಷ 90 ಸಾವಿರಕ್ಕೆ ಪಡೆದುಕೊಂಡಿದ್ದಾರೆ. ಈ ಮೀನಿನ ಹೊಟ್ಟೆಯ ಭಾಗವು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಈ ಮೀನಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಕಚಿಡಿ ಮೀನನ್ನು ಸಮುದ್ರ ಚಿನ್ನದ ಮೀನು ಎಂದೂ ಕರೆಯಲ್ಪಡುತ್ತದೆ.

kachidi fish medicinal values -ಕಚಿಡಿ ಮೀನಿನ ಔಷಧೀಯ ಗುಣಗಳು:

ಈ ಕಚಿಡಿ ಮೀನು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಬಳಸಲು, ಈ ಮೀನಿನ ಗಾಲ್ ಬ್ಲಾಡೆರ್​​ ಕೋಶದಿಂದ ಹೊಲಿಗೆ ದಾರವನ್ನು ತಯಾರಿಸಲಾಗುತ್ತದೆ. ಕಾಸ್ಲಿ ವೈನ್‌ಗಳಿಗೆ ಈ ಮೀನನ್ನು ಸೇರಿಸುವುದರಿಂದ ವೈನ್‌ನ ಬೆಲೆಯೂ ಹೆಚ್ಚಾಗುತ್ತದೆ ಎನ್ನುತ್ತಾರೆ. ಕಚಿಡಿ ಮೀನಿನ ಹೊಟ್ಟೆ ಭಾಗವನ್ನು ಶಕ್ತಿವರ್ಧಕ ಔಷಧಿಗಳಲ್ಲಿ ಬಳಸಲಾಗುತ್ತದೆ.

ಗಂಡು ಕಚಿಡಿ ಮೀನುಗಳು ಚಿನ್ನದ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಚಿನ್ನದ ಮೀನು ಎಂದೂ ಕರೆಯುತ್ತಾರೆ. ಈ ಮೀನು ಅಮೂಲ್ಯವಾಗಿದ್ದು, ಬಲೆ ಬೀಸಿ ಇದನ್ನು ಹಿಡಿದವರ ಜೀವನವೇ ಬದಲಾಗುತ್ತದೆ. ಅದಕ್ಕಾಗಿಯೇ ಈ ಮೀನು ತುಂಬಾ ವಿಶೇಷವಾಗಿದೆ ಎಂದು ಹೇಳಲಾಗುತ್ತದೆ. ಈ ಹಿಂದೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೀನುಗಾರರಿಗೆ ಈ ಮೀನು ಸಿಕ್ಕಿತ್ತು. ಇದರ ತೂಕ 30 ಕೆ.ಜಿ. ಯಷ್ಟಿತ್ತು. ಉದ್ಯಮಿಯೊಬ್ಬರು ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರಿಂದ ಈ ಸುದ್ದಿ ಚರ್ಚೆಗೆ ಗ್ರಾಸವಾಯಿತು.

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ