AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?

ಗಂಡು ಕಚಿಡಿ ಮೀನುಗಳು ಚಿನ್ನದ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಚಿನ್ನದ ಮೀನು ಎಂದೂ ಕರೆಯುತ್ತಾರೆ. ಈ ಮೀನು ಅಮೂಲ್ಯವಾಗಿದ್ದು, ಬಲೆ ಬೀಸಿ ಇದನ್ನು ಹಿಡಿದವರ ಜೀವನವೇ ಬದಲಾಗುತ್ತದೆ.

ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?
ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?
TV9 Web
| Edited By: ಸಾಧು ಶ್ರೀನಾಥ್​|

Updated on: Oct 13, 2022 | 12:48 PM

Share

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಅಂತರವೇದಿ ಸಮುದ್ರ ತೀರದಲ್ಲಿ (Antarvedi seashore) ಅಪರೂಪದ ಮೀನು ಬಲೆಗೆ ಸಿಕ್ಕಿಬಿದ್ದಿದೆ. ಉಪ್ಪಡದ (Uppada ) ಮೀನುಗಾರರೊಬ್ಬರು ಗಂಡು ಕಚಿಡಿ ಮೀನು (kachidi fish) ಹಿಡಿದಿದ್ದಾರೆ. ಇದನ್ನು ಸ್ಥಳೀಯ ದಲ್ಲಾಳಿಯೊಬ್ಬರು ಹರಾಜಿನಲ್ಲಿ ರೂಪಾಯಿ 2 ಲಕ್ಷ 90 ಸಾವಿರಕ್ಕೆ ಪಡೆದುಕೊಂಡಿದ್ದಾರೆ. ಈ ಮೀನಿನ ಹೊಟ್ಟೆಯ ಭಾಗವು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಈ ಮೀನಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಕಚಿಡಿ ಮೀನನ್ನು ಸಮುದ್ರ ಚಿನ್ನದ ಮೀನು ಎಂದೂ ಕರೆಯಲ್ಪಡುತ್ತದೆ.

kachidi fish medicinal values -ಕಚಿಡಿ ಮೀನಿನ ಔಷಧೀಯ ಗುಣಗಳು:

ಈ ಕಚಿಡಿ ಮೀನು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಬಳಸಲು, ಈ ಮೀನಿನ ಗಾಲ್ ಬ್ಲಾಡೆರ್​​ ಕೋಶದಿಂದ ಹೊಲಿಗೆ ದಾರವನ್ನು ತಯಾರಿಸಲಾಗುತ್ತದೆ. ಕಾಸ್ಲಿ ವೈನ್‌ಗಳಿಗೆ ಈ ಮೀನನ್ನು ಸೇರಿಸುವುದರಿಂದ ವೈನ್‌ನ ಬೆಲೆಯೂ ಹೆಚ್ಚಾಗುತ್ತದೆ ಎನ್ನುತ್ತಾರೆ. ಕಚಿಡಿ ಮೀನಿನ ಹೊಟ್ಟೆ ಭಾಗವನ್ನು ಶಕ್ತಿವರ್ಧಕ ಔಷಧಿಗಳಲ್ಲಿ ಬಳಸಲಾಗುತ್ತದೆ.

ಗಂಡು ಕಚಿಡಿ ಮೀನುಗಳು ಚಿನ್ನದ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಚಿನ್ನದ ಮೀನು ಎಂದೂ ಕರೆಯುತ್ತಾರೆ. ಈ ಮೀನು ಅಮೂಲ್ಯವಾಗಿದ್ದು, ಬಲೆ ಬೀಸಿ ಇದನ್ನು ಹಿಡಿದವರ ಜೀವನವೇ ಬದಲಾಗುತ್ತದೆ. ಅದಕ್ಕಾಗಿಯೇ ಈ ಮೀನು ತುಂಬಾ ವಿಶೇಷವಾಗಿದೆ ಎಂದು ಹೇಳಲಾಗುತ್ತದೆ. ಈ ಹಿಂದೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೀನುಗಾರರಿಗೆ ಈ ಮೀನು ಸಿಕ್ಕಿತ್ತು. ಇದರ ತೂಕ 30 ಕೆ.ಜಿ. ಯಷ್ಟಿತ್ತು. ಉದ್ಯಮಿಯೊಬ್ಬರು ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರಿಂದ ಈ ಸುದ್ದಿ ಚರ್ಚೆಗೆ ಗ್ರಾಸವಾಯಿತು.

Follow Us
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ