AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ: ಕಲ್ಯಾಣ್​ನಲ್ಲಿರುವ ಐತಿಹಾಸಿಕ ದುರ್ಗಾದಿ ಕೋಟೆಗೆ ಬೇರೆ ಹೆಸರಿಡುವ ಪ್ರಯತ್ನ, ನಕಲಿ ದಾಖಲೆ ಸೃಷ್ಟಿ

ಕಲ್ಯಾಣ್ ನಗರದಲ್ಲಿನ ಪೂಜ್ಯ ಸ್ಮಾರಕವಾದ ಐತಿಹಾಸಿಕ ದುರ್ಗಾದಿ ಕೋಟೆಯ ಮಹತ್ವ ಎಲ್ಲರಿಗೂ ತಿಳಿದಿದೆ.ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯಕ್ಕೆ ನಿಕಟ ಸಂಬಂಧ ಹೊಂದಿರುವ ಕಲ್ಯಾಣ್ ನಗರದಲ್ಲಿ ಇನ್ನೂ ಅನೇಕ ಐತಿಹಾಸಿಕ ಕಟ್ಟಡಗಳನ್ನು ನೀವು ಕಾಣಬಹುದು. ಅದರಲ್ಲಿ ದುರ್ಗದಿ ಕೋಟೆಯೂ ಒಂದು. ಕಲ್ಯಾಣ್ ಕೊಲ್ಲಿಯ ದಡದಲ್ಲಿ ನಿಂತಿರುವ ಈ ಕೋಟೆಯು ನಗರದ ಇತಿಹಾಸವನ್ನು ಹೇಳುತ್ತದೆ.

ಮಹಾರಾಷ್ಟ್ರ: ಕಲ್ಯಾಣ್​ನಲ್ಲಿರುವ ಐತಿಹಾಸಿಕ ದುರ್ಗಾದಿ ಕೋಟೆಗೆ ಬೇರೆ ಹೆಸರಿಡುವ ಪ್ರಯತ್ನ, ನಕಲಿ ದಾಖಲೆ ಸೃಷ್ಟಿ
ದುರ್ಗಾದಿ ಕೋಟೆImage Credit source: The Bijoors Blog
ನಯನಾ ರಾಜೀವ್
|

Updated on: Nov 03, 2023 | 1:11 PM

Share

ಕಲ್ಯಾಣ್ ನಗರದಲ್ಲಿನ ಪೂಜ್ಯ ಸ್ಮಾರಕವಾದ ಐತಿಹಾಸಿಕ ದುರ್ಗಾದಿ ಕೋಟೆಯ ಮಹತ್ವ ಎಲ್ಲರಿಗೂ ತಿಳಿದಿದೆ. ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯಕ್ಕೆ ನಿಕಟ ಸಂಬಂಧ ಹೊಂದಿರುವ ಕಲ್ಯಾಣ್ ನಗರದಲ್ಲಿ ಇನ್ನೂ ಅನೇಕ ಐತಿಹಾಸಿಕ ಕಟ್ಟಡಗಳನ್ನು ನೀವು ಕಾಣಬಹುದು. ಅದರಲ್ಲಿ ದುರ್ಗದಿ ಕೋಟೆಯೂ ಒಂದು. ಕಲ್ಯಾಣ್ ಕೊಲ್ಲಿಯ ದಡದಲ್ಲಿ ನಿಂತಿರುವ ಈ ಕೋಟೆಯು ನಗರದ ಇತಿಹಾಸವನ್ನು ಹೇಳುತ್ತದೆ.

ಐತಿಹಾಸಿಕ ದುರ್ಗಾದಿ ಕೋಟೆಯ ನಕಲಿ ದಾಖಲೆ ಸೃಷ್ಟಿಸಿ ಕೋಟೆಯ ಹೆಸರನ್ನು ಬದಲಾಯಿಸಲು ಕೆಲವರು ಪಿತೂರಿ ಮಾಡಿರುವುದು ಬೆಳಕಿಗೆ ಬಂದಿದೆ. ತಹಸೀಲ್ದಾರ್ ಕಚೇರಿಯು ಘೋಡೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ, ಬಳಿಕ ಕಲ್ಯಾಣ್ ಮಹಾತ್ಮ ಫುಲೆ ಪೊಲೀಸ್ ಠಾಣೆಯಲ್ಲಿ ಸುಯಶ್ ಶಿರ್ಕೆ ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಸುಯಶ್ ಶಿರ್ಕೆ ಅವರು ಮಲ್ಶೆಜ್ ನಾನೇಘಾಟ್ ಮತ್ತು ಇತರ ಅರಣ್ಯ ಪ್ರದೇಶ ಮತ್ತು ಪ್ರವಾಸಿ ತಾಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಕಲ್ಯಾಣ್ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಕಲ್ಯಾಣ್‌ನಲ್ಲಿರುವ ದುರ್ಗಾದಿ ಕೋಟೆಯು ಐತಿಹಾಸಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಧಾರ್ಮಿಕ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಮತ್ತಷ್ಟು ಓದಿ: ಚಿತ್ರದುರ್ಗ: 7 ಸುತ್ತಿನ ಕೋಟೆಯಲ್ಲಿ ಏಳೇಳು ಸುತ್ತು ಸಮಸ್ಯೆಗಳ ಕಾಟ! ಕೇಂದ್ರ ಸಚಿವ ನಾರಾಯಣಸ್ವಾಮಿ-ಪುರಾತತ್ವ ಇಲಾಖೆ ಮಾತ್ರ ಗಪ್​ಚುಪ್!

ಇಲ್ಲಿ ನೆಲೆಸಿರುವ ದುರ್ಗಾ ಮಾತೆಯ ದೇವಸ್ಥಾನ, ಇಲ್ಲಿ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಜಾತ್ರೆಯನ್ನೂ ಆಯೋಜಿಸಲಾಗುತ್ತದೆ. ದುರ್ಗಾದಿ ಕೋಟೆಯು 11 ಗೋಪುರಗಳನ್ನು ಮತ್ತು ಅನೇಕ ದ್ವಾರಗಳನ್ನು ಹೊಂದಿತ್ತು. ಕೋಟೆಯ ನಿರ್ಮಾಣವನ್ನು ಶಹಜಹಾನ್ ಪ್ರಾರಂಭಿಸಿದರು.

ನಂತರ ಇದನ್ನು ಆದಿಲ್ ಷಾ ವಶಪಡಿಸಿಕೊಂಡರು ಮತ್ತು 1654 ರಲ್ಲಿ ಕಲ್ಯಾಣ್, ಭಿವಂಡಿ ಮತ್ತು ಸೂರತ್ ಅನ್ನು ಛತ್ರಪತಿ ಶಿವಾಜಿ ಮಹಾರಾಜರು ವಿಮೋಚನೆಗೊಳಿಸಿದರು. ಇದಾದ ನಂತರ ಈ ಕೋಟೆಗೆ ದುರ್ಗಾದೇವಿಯ ಹೆಸರನ್ನು ಇಡಲಾಯಿತು. ಆಗ ಶಿವಾಜಿಗೆ ಉತ್ಖನನದ ವೇಳೆ ಸಾಕಷ್ಟು ಹಣ ಸಿಕ್ಕಿತ್ತು, ದೇವಸ್ಥಾನದ ಮುಖ್ಯ ಭಾಗದಲ್ಲಿ ದುರ್ಗಾ ದೇವಿಯ ಹಿತ್ತಾಳೆಯ ಪ್ರತಿಮೆಯು ಗೋಚರಿಸುತ್ತದೆ.

ಮುರ್ಬಾದ್‌ನ ಕುಶಲಕರ್ಮಿಗಳಿಂದ ಆಗಿನ ಕಲ್ಯಾಣ್‌ನ ಪುರಸಭೆ ಅಧ್ಯಕ್ಷರಾದ ಎನ್.ಎ. ಅಹೆರ್ ಅದನ್ನು ಸಿದ್ಧಪಡಿಸಿದ್ದರು. ಕೋಟೆಯು ಪ್ರವೇಶ ದ್ವಾರವನ್ನು ಹೊಂದಿದ್ದು, ಅದರ ಮುಂದೆ ಗಣೇಶನ ಪ್ರತಿಮೆ ಇರುವುದರಿಂದ ಇದನ್ನು ಗಣೇಶ ದ್ವಾರ ಎಂದು ಕರೆಯಲಾಗುತ್ತದೆ. ಶಿವಾಜಿ ಮಹಾರಾಜರ ನಂತರ ಪೇಶ್ವೆಗಳ ಕಾಲದಲ್ಲಿ ಸುಬೇದಾರ್ ರಾಮ್‌ಜಿ ಬಿವಾಲ್ಕರ್ ಅವರು ಕೋಟೆಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು ಎಂದು ಹೇಳಲಾಗುತ್ತದೆ.

1968 ರಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರು ತಮ್ಮ ಪತ್ನಿ ದುರ್ಗಾದಿ ದೇವಿಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿ ದೇವಸ್ಥಾನದ ಜೊತೆಗೆ ಮಸೀದಿಯೂ ಇದೆ, ಹೀಗಾಗಿ ವಿವಾದ ಉಂಟಾಗಿದೆ.

ಈ ಕಾರಣಕ್ಕಾಗಿಯೇ ಇಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಆ ಸಮಯದಲ್ಲಿ ನಿಷೇಧಾಜ್ಞೆ ಇದ್ದಾಗ ಠಾಕ್ರೆ ಆದೇಶವನ್ನು ಧಿಕ್ಕರಿಸಿ ಪೂಜೆ ನಡೆಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ