AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explained: ಕ್ರಿಸ್ಮಸ್, ಈಸ್ಟರ್ ಆಚರಿಸೊಲ್ಲ, ರಾಷ್ಟ್ರಗೀತೆ ಹಾಡೊಲ್ಲ, ರಾಷ್ಟ್ರಧ್ವಜಕ್ಕೆ ವಂದಿಸುವುದಿಲ್ಲ; ಒಬ್ಬನೇ ದೇವ: ಇದು ಜೆಹೋವಾಸ್ ವಿಟ್ನೆಸಸ್ ಪಂಗಡದವರ ನಂಬಿಕೆ

Know Who Are Jehovah's Witnesses: ಕೇರಳದ ಎರ್ನಾಕುಲಂನಲ್ಲಿ ಜೆಹೋವಾಸ್ ವಿಟ್ನೆಸಸ್ ಎಂಬ ಕ್ರೈಸ್ತ ಪಂಗಡದವರ ಧಾರ್ಮಿಕ ಸಭೆಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿದೆ. ಅದೇ ಪಂಗಡಕ್ಕೆ ಸೇರಿದವನೆನ್ನಲಾದ ಒಬ್ಬ ವ್ಯಕ್ತಿ ತಾನೇ ಈ ಸ್ಫೋಟ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಈ ಪಂಗಡವರು ಬೈಬಲ್ ಗ್ರಂಥದಲ್ಲಿರುವ ನುಡಿಗಳನ್ನ ಪರಮಸತ್ಯವೆಂದು ಭಾವಿಸಿ ನಂಬಿಕೆ ಇಟ್ಟುಕೊಂಡಿದ್ದಾರೆ. ಇವರು ಯಾವುದೇ ದೇಶದ ರಾಜಕೀಯ ಗುಂಪಿಗೆ ಸೇರುವುದಿಲ್ಲ, ಬೇರೆ ಧರ್ಮದವರ ಜೊತೆ ಬೆರೆಯುವುದಿಲ್ಲ, ಕ್ರಿಸ್ಮಸ್ ಇತ್ಯಾದಿ ಹಬ್ಬಗಳ ಆಚರಣೆ ಮಾಡುವುದಿಲ್ಲ. ಇವರ ಬಗ್ಗೆ ಒಂದು ಪರಿಚಯ ಇಲ್ಲಿದೆ.

Explained: ಕ್ರಿಸ್ಮಸ್, ಈಸ್ಟರ್ ಆಚರಿಸೊಲ್ಲ, ರಾಷ್ಟ್ರಗೀತೆ ಹಾಡೊಲ್ಲ, ರಾಷ್ಟ್ರಧ್ವಜಕ್ಕೆ ವಂದಿಸುವುದಿಲ್ಲ; ಒಬ್ಬನೇ ದೇವ: ಇದು ಜೆಹೋವಾಸ್ ವಿಟ್ನೆಸಸ್ ಪಂಗಡದವರ ನಂಬಿಕೆ
ಜೆಹೋವಾಸ್ ವಿಟ್ನೆಸ್ ಜನರ ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2023 | 5:26 PM

ಎರ್ನಾಕುಲಂ, ಅಕ್ಟೋಬರ್ 29: ಕೇರಳದ ಕೊಚ್ಚಿ ಸಮೀಪದ ಎರ್ನಾಕುಲಂನ ಕ್ರೈಸ್ತ ಪಂಗಡವೊಂದರ ಧಾರ್ಮಿಕ ಸಭೆಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ ಒಬ್ಬರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಏರುವ ಭೀತಿ ಇದೆ. ಕಳಮಚೇರಿಯ (Kalamassery) ಝಮ್ರ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಶನ್ ಸೆಂಟರ್​ನಲ್ಲಿ ಜೆಹೋವಾಸ್ ವಿಟ್ನೆಸಸ್ (Jehovah’s Witnesses) ಎಂಬ ಕ್ರೈಸ್ತ ಪಂಗಡದ ಧಾರ್ಮಿಕ ಸಭೆ ನಡೆಯುವ ವೇಳೆ ಸ್ಫೋಟಗಳು ಸಂಭವಿಸಿವೆ. ಈ ವೇಳೆ 2,500 ಮಂದಿ ಪ್ರಾರ್ಥನೆ ಮಾಡುತ್ತಿದ್ದರು. ಸಭೆಯ ಮಧ್ಯಭಾಗದಲ್ಲೇ ಇರಿಸಲಾಗಿದ್ದ ಟಿಫನ್ ಬಾಕ್ಸ್​ನಲ್ಲಿ ಐಇಡಿ ಬಚ್ಚಿಡಲಾಗಿತ್ತು.

ಈ ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡ ಇರಬಹುದು ಎಂಬ ಶಂಕೆ ಇದೆ. ಕಣ್ಣೂರು ರೈಲ್ವೆ ಪೊಲೀಸ್ ಸ್ಟೇಷನ್​ನಲ್ಲಿ ಗುಜರಾತಿ ವ್ಯಕ್ತಿಯೊಬ್ಬನನ್ನು ಶಂಕೆಯ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದೇ ವೇಳೆ, ಕೋಡಕರ ಪೊಲೀಸ್ ಠಾಣೆಯಲ್ಲಿ ಮತ್ತೊಬ್ಬ ವ್ಯಕ್ತಿ ತಾನೇ ಬಾಂಬ್ ಸ್ಫೋಟ ಮಾಡಿದ್ದಾಗಿ ಹೇಳಿಕೊಂಡು ಶರಣಾಗಿದ್ದಾನೆ. ಡಾಮಿನಿಕ್ ಮಾರ್ಟಿನ್ ಹೆಸರಿನ ಈತ ತಾನು ಜೆಹೋವಾಸ್ ವಿಟ್ನೆಸಸ್ ಅನುಯಾಯಿ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಕೇರಳದ ಎರ್ನಾಕುಲಂ ಸರಣಿ ಸ್ಫೋಟ ಪ್ರಕರಣ: ಸ್ಫೋಟದ ಹೊಣೆಹೊತ್ತು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣು

ಯಾವುದಿದು ಜೆಹೋವಾಸ್ ವಿಟ್ನೆಸಸ್?

ಇದು ತಾನು ಪರಿಶುದ್ಧ ಕ್ರೈಸ್ತ ನಂಬಿಕಸ್ಥ ಪಂಗಡವೆಂದು ಹೇಳಿಕೊಳ್ಳುತ್ತದೆ. ಬೈಬಲ್​ನಲ್ಲಿರುವ ವಿಚಾರಗಳು ದೇವರ ನುಡಿಗಳಾಗಿದ್ದು, ಅವು ಮಾತ್ರ ಸತ್ಯವೆಂದು ಇದರ ನಂಬಿಕೆ. ಅಬ್ರಹಾಂ ಆಗಲೀ, ಮೋಸಸ್ ಆಗಲೀ ಜೀಸಸ್ ಆಗಲೀ ಇವರಾರೂ ದೈವಾಂಶ ಸಂಭೂತರಲ್ಲ. ಜೆಹೋವಾಹ್ ಮಾತ್ರವೇ ಏಕಮಾತ್ರ ದೇವರು. ಏಸು ಕ್ರಿಸ್ತನು ಸ್ವರ್ಗದಲ್ಲಿರುವ ದೇವಲೋಕದ ದೊರೆಯಷ್ಟೇ ಎಂದು ಪರಿಗಣಿಸುತ್ತದೆ.

ಜಗತ್ತು ವಿನಾಶಗೊಂಡು, ಭೂಮಿಯಲ್ಲಿ ದೈವ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ ಎಂದು ನಂಬಿಕೊಂಡಿದೆ ಈ ಪಂಗಡ

ಜೆಹೋವಾಸ್ ವಿಟ್ನೆಸಸ್ ಬೈಬಲ್ ನುಡಿಗಳ ಮೇಲೆ ಅಚಲ ನಂಬಿಕೆ ಇಟ್ಟುಕೊಂಡಿರುವ ಪಂಗಡ. ಬೈಬಲ್​ನಲ್ಲಿ ಪ್ರಸ್ತಾಪಿಸಿರುವ ಆರ್ಮೆಗೆಡ್ಡಾನ್ ಎಂಬ ಪ್ರಳಯ ಸದ್ಯದಲ್ಲೇ ಸಂಭವಿಸುತ್ತದೆ ಎಂದು ನಂಬಿದೆ. ಆರ್ಮೆಗೆಡ್ಡಾನ್ ಎಂದರೆ ಇಡೀ ಜಗತ್ತು ಬಹಳ ಬೇಗ ವಿನಾಶಗೊಂಡು, ಆ ಬಳಿಕ ದೇವರ ಸಾಮ್ರಾಜ್ಯವು ಈ ಭೂಮಿಯಲ್ಲಿ ಸ್ಥಾಪನೆಯಾಗುತ್ತದೆ. ಮನುಷ್ಯ ಆಡಳಿತ ಇರುವುದಿಲ್ಲ. ಎಲ್ಲವನ್ನೂ ದೇವರೇ ನಿಭಾಯಿಸುತ್ತದೆ ಎಂದು ಇದು ಹೇಳುತ್ತದೆ.

ಇದನ್ನೂ ಓದಿ: ಕೇರಳ: ಕ್ರಿಶ್ಚಿಯನ್ನರ ಸಭೆ, ಎಲ್ಲರೂ ಕಣ್ಮುಚ್ಚಿ ಪ್ರಾರ್ಥಿಸುವ ವೇಳೆಯೇ ಸ್ಫೋಟ, ಉಗ್ರರ ಕೈವಾಡ ಶಂಕೆ

ಯೇಸು ಕ್ರಿಸ್ತನ ಜನ್ಮದಿನದ ಕ್ರಿಸ್ಮಸ್ ಹಬ್ಬವನ್ನಾಗಲೀ, ಈಸ್ಟರ್ ಹಬ್ಬವನ್ನಾಗಲೀ ಜೆಹೋವಾಸ್ ವಿಟ್ನೆಸಸ್ ಪಂಗಡ ಆಚರಿಸುವುದಿಲ್ಲ. ಯಾರದೇ ಜಯಂತಿ, ಪುಣ್ಯತಿಥಿಗಳಲ್ಲಿ ಇವರು ಪಾಲ್ಗೊಳ್ಳುವುದಿಲ್ಲ. ಅವೆಲ್ಲವೂ ಸೈತಾನ್ ಪ್ರೇರಿತ ಆಚರಣೆಗಳು ಎಂಬುದು ಅದರ ವಾದ.

19ನೇ ಶತಮಾನದಲ್ಲಿ ಶುರುವಾದ ಈ ಪಂಗಡ ವಿಶ್ವಾದ್ಯಂತ ಕೋಟ್ಯಂತ ಅನುಯಾಯಿಗಳಿದ್ದಾರೆ. ಭಾರತದಲ್ಲಿ ಇದು 1905ರಿಂದಲೂ ಇದೆ. ಬೇರೆ ಧರ್ಮಗಳು ಮತ್ತು ರಾಜಕೀಯದಿಂದ ಈ ಪಂಗಡದವರು ದೂರವೇ ಉಳಿಯುತ್ತಾರೆ. ಇನ್ನೊಬ್ಬರ ರಕ್ತವನ್ನು ಇವರ ಮೈಗೆ ಹರಿಯಬಿಡುವುದಿಲ್ಲ. ಯಾವುದೇ ದೇಶದ ಮಿಲಿಟರಿಗೆ ಇವರು ಸೇರುವುದಿಲ್ಲ. ಯಾವ ರಾಷ್ಟ್ರಧ್ವಜಕ್ಕೂ ಇವರು ವಂದಿಸುವುದಿಲ್ಲ. ಎಂಬತ್ತರ ದಶಕದಲ್ಲಿ ಕೇರಳದ ಶಾಲೆಯೊಂದರಲ್ಲಿ ಈ ಪಂಗಡದ ಕೆಲ ಮಕ್ಕಳು ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಘಟನೆ ನಡೆದಿತ್ತು. ಜೆಹೋವಾಹನಿಗೆ ಮಾತ್ರವೇ ಇವರ ಶರಣಾರ್ಥಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ