AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2023ರ ಮೊದಲ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕೈಬಿಡಲು ಕೇರಳ ಸಚಿವ ಸಂಪುಟ ನಿರ್ಧಾರ

ನಿಯಮಗಳ ಪ್ರಕಾರ, ವಿಧಾನಸಭೆಯ ಮೊದಲ ಅಧಿವೇಶನ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ನೀತಿ ಭಾಷಣದೊಂದಿಗೆ ಪ್ರಾರಂಭವಾಗಬೇಕು. ರಾಜ್ಯಪಾಲರೊಂದಿಗಿನ ಎಲ್ಲಾ ಸಂಭಾವ್ಯ ಸಂವಾದಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿರುವ ಸರ್ಕಾರ, ಪ್ರಸ್ತುತ ವಿಶೇಷ ವಿಧಾನಸಭೆಯನ್ನು ಮುಂದೂಡಲು ನಿರ್ಧರಿಸಿದೆ.

2023ರ ಮೊದಲ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕೈಬಿಡಲು ಕೇರಳ ಸಚಿವ ಸಂಪುಟ ನಿರ್ಧಾರ
ಆರಿಫ್ ಮೊಹಮ್ಮದ್ ಖಾನ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Dec 14, 2022 | 8:43 PM

Share

ತಿರುವನಂತಪುರಂ: 2023ರಲ್ಲಿ ಕೇರಳ ವಿಧಾನಸಭೆಯ (Kerala Assembly) ಮೊದಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕೈ ಬಿಡಲು ಕೇರಳ ಸಚಿವ ಸಂಪುಟ ನಿರ್ಧರಿಸಿದ್ದು, ಅಧಿವೇಶನ ರಾಜ್ಯಪಾಲರ ಭಾಷಣವಿಲ್ಲದೆ ಪ್ರಾರಂಭವಾಗಲಿದೆ. ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammad Khan) ಮತ್ತು ಕೇರಳದ ಪಿಣರಾಯಿ ವಿಜಯನ್ (Pinarayi Vijayan)  ನೇತೃತ್ವದ ಎಲ್‌ಡಿಎಫ್ ಸರ್ಕಾರದ ನಡುವಿನ ಜಗಳದ ನಡುವೆ ಹೊಸ ಬೆಳವಣಿಗೆ ನಡೆದಿದೆ. ನಿಯಮಗಳ ಪ್ರಕಾರ, ವಿಧಾನಸಭೆಯ ಮೊದಲ ಅಧಿವೇಶನ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ನೀತಿ ಭಾಷಣದೊಂದಿಗೆ ಪ್ರಾರಂಭವಾಗಬೇಕು. ರಾಜ್ಯಪಾಲರೊಂದಿಗಿನ ಎಲ್ಲಾ ಸಂಭಾವ್ಯ ಸಂವಾದಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿರುವ ಸರ್ಕಾರ, ಪ್ರಸ್ತುತ ವಿಶೇಷ ವಿಧಾನಸಭೆಯನ್ನು ಮುಂದೂಡಲು ನಿರ್ಧರಿಸಿದೆ. ಹೀಗಾಗಿ ಡಿಸೆಂಬರ್ 3 ರಿಂದ 13 ರವರೆಗೆ ನಡೆದ ವಿಶೇಷ ವಿಧಾನಸಭೆ ಅಧಿವೇಶನ ಮುಂದಿನ ತಿಂಗಳು ವಿರಾಮದ ನಂತರ ಮುಂದುವರಿಯಲಿದೆ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ರಾಜ್ಯಪಾಲರಿಗೆ ಮಾಹಿತಿ ನೀಡುವ ನಿಯಮವನ್ನೂ ಸರ್ಕಾರ ಮುರಿದಿದೆ. ಮುಂದಿನ ಅಸೆಂಬ್ಲಿ ಅಧಿವೇಶನವು ಜನವರಿ 2023 ರಲ್ಲಿ ಮುಂದುವರಿಯುತ್ತದೆ. ಅದೇ ವೇಳೆ ಮುಂದಿನ ಹಣಕಾಸು ವರ್ಷದ ಬಜೆಟ್ ಮಂಡನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ಕೇರಳ ವಿಧಾನಸಭೆ ಮಂಗಳವಾರ ವಿಶ್ವವಿದ್ಯಾನಿಲಯ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು.  ಇದು ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ಬದಲಾಯಿಸುವ ಗುರಿಯನ್ನು ಹೊಂದಿದೆ. ಈ ಬೆಳವಣಿಗೆಗಳ ನಡುವೆ ಬುಧವಾರ ರಾಜಭವನದಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್ ಹಬ್ಬಕ್ಕೆ ಸಿಎಂ, ಕ್ಯಾಬಿನೆಟ್ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಗೈರಾಗಿದ್ದರು.

ಇದನ್ನೂ ಓದಿಪಠಾಣ್ ಚಿತ್ರದಲ್ಲಿ ದೀಪಿಕಾ ಉಡುಗೆಗೆ ಆಕ್ಷೇಪ, ಸಿನಿಮಾ ಬಿಡುಗಡೆಯಾಗದಂತೆ ತಡೆಯುತ್ತೇನೆ ಎಂದು ಬೆದರಿಕೆಯೊಡ್ಡಿದ ಸಚಿವ

ಕೆಲವು ತಿಂಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ವಿರುದ್ಧ ಸ್ವಜನಪಕ್ಷಪಾತ ಆರೋಪ ಸೇರಿದಂತೆ ಹಲವಾರು ಆರೋಪಗಳನ್ನು ರಾಜ್ಯಪಾಲರು ಮಾಡಿದ್ದರು. ರಾಜ್ಯದ 9 ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ಪದಚ್ಯುತಗೊಳಿಸಿದ ರಾಜ್ಯಪಾಲರ ಕ್ರಮ ಹಾಗೂ ‘ಭೋಗ ಹಿಂಪಡೆಯುವ’ ಎಚ್ಚರಿಕೆ ನೀಡಿರುವುದು ಭಿನ್ನಾಭಿಪ್ರಾಯವನ್ನು ತೀವ್ರಗೊಳಿಸಿದೆ. ಇತ್ತೀಚೆಗೆ, ರಾಜ್ಯ ಸರ್ಕಾರವು ರಾಜ್ಯಪಾಲರನ್ನು ಬದಲಿಸಿ ಕಲಾವಿದೆ ಮಲ್ಲಿಕಾ ಸಾರಾಭಾಯ್ ಅವರನ್ನು ಕೇರಳ ಕಲಾಮಂಡಲಂನ ಕುಲಪತಿ ಹುದ್ದೆಗೆ ನೇಮಕ ಮಾಡಿತ್ತು.

Published On - 8:43 pm, Wed, 14 December 22