AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮುನ್ನಡೆ ಸಾಧಿಸಿದ LDF, ಕಣ್ಣೂರಿನಲ್ಲಿ ಕಣ್​ಬಿಟ್ಟ BJP

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ   ಬಹುತೇಕ ಸ್ಥಾನಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದ್ದು, ಕಣ್ಣೂರು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆದಿದೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮುನ್ನಡೆ ಸಾಧಿಸಿದ LDF, ಕಣ್ಣೂರಿನಲ್ಲಿ ಕಣ್​ಬಿಟ್ಟ BJP
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
| Edited By: |

Updated on: Dec 16, 2020 | 12:22 PM

Share

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಬಹುತೇಕ ಸ್ಥಾನಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ. ಎರಡು ಜಿಲ್ಲೆಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ಎರ್ನಾಕುಳಂ, ಮಲಪ್ಪುರಂ ಜಿಲ್ಲೆಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದ್ದು,  ನಗರ ಮತ್ತು ಗ್ರಾಮಗಳಲ್ಲಿ ಯುಡಿಎಫ್​ಗೆ ಹಿನ್ನಡೆಯುಂಟಾಗಿದೆ. ಪಾಲಕ್ಕಾಡ್, ಶೊರ್ನೂರ್ , ಚೆಂಙನ್ನೂರ್ ನಗರಸಭೆಗಳಲ್ಲಿ ಬಿಜೆಪಿ ಲೀಡ್ ಇದೆ. ಕಣ್ಣೂರು ಕಾರ್ಪೊರೇಷನ್​​ನಲ್ಲಿ ಬಿಜೆಪಿ ಖಾತೆ ತೆರೆದಿದೆ.

ಇತ್ತ ತಿರುವನಂತಪುರಂ ಕಾರ್ಪೊರೇಷನ್​ನಲ್ಲಿ ಬಿಜೆಪಿ ಮತ್ತು ಎಲ್​​ಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತಾಜಾ ಮಾಹಿತಿ ಪ್ರಕಾರ 21 ಸೀಟುಗಳಲ್ಲಿ ಎಲ್​​ಡಿಎಫ್ , 3 ಸೀಟುಗಳಲ್ಲಿ ಯುಡಿಎಫ್ ಮತ್ತು 13 ಸೀಟುಗಳಲ್ಲಿ ಎನ್​​ಡಿಎ, ಒಂದು ಸೀಟಿನಲ್ಲಿ ಸ್ವತಂತ್ರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಬಾರಿ ಎಲ್​​ಡಿಎಫ್ ಗೆ 43 ಸೀಟುಗಳು ಲಭಿಸಿತ್ತು. ಎಲ್​​ಡಿಎಫ್​ಗೆ 35, ಕಾಂಗ್ರೆಸ್​ಗೆ 21 ಸೀಟು ಲಭಿಸಿತ್ತು. ಒಟ್ಟು 100 ಸೀಟುಗಳಿರುವ ತಿರುವನಂತಪುರಂ ಕಾರ್ಪೊರೇಷನ್​ನಲ್ಲಿ ಬಹುಮತ ಗಳಿಸಲು 51 ಸೀಟುಗಳ ಅಗತ್ಯವಿದೆ.

ಕೊಚ್ಚಿ ಕಾರ್ಪೊರೇಷನ್ ಯುಡಿಎಫ್ ಮೇಯರ್ ಅಭ್ಯರ್ಥಿ ಎನ್. ವೇಣುಗೋಪಾಲ್ ಒಂದು ಮತದಿಂದ ಪರಾಭವಗೊಂಡಿದ್ದಾರೆ. ಐಲ್ಯಾಂಡ್ ಡಿವಿಷನ್​ನಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಯುಡಿಎಫ್ ಮತ ಮರುಎಣಿಕೆಗೆ ಒತ್ತಾಯಿಸಿದೆ. ಕೊಲ್ಲಂ ಕಾರ್ಪೊರೇಷನ್​ನಲ್ಲಿ ಎಲ್​​ಡಿಎಫ್ – ಯುಡಿಎಫ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಬ್ಲಾಕ್, ಜಿಲ್ಲಾ ಪಂಚಾಯತ್ ಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ.

ತಿರುವನಂತಪುರಂ ಕಾರ್ಪರೇಷನ್​ನಲ್ಲಿ ಮೊದಲ ಗೆಲುವು ಎಲ್​​ಡಿಎಫ್​ಗೆ ತಿರುವನಂತಪುರಂ ಕಾರ್ಪರೇಷನ್​​ನ ಬಿಮಾಪಳ್ಳಿ ವಾರ್ಡ್ ಎಲ್​ಡಿಎಫ್ ಗೆದ್ದು ಕೊಂಡಿದ್ದು, ಹೆಚ್ಚಿನ ವಾರ್ಡ್​ಗಳಲ್ಲಿ ಯುಡಿಎಫ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಳಮಶ್ಶೇರಿಯಲ್ಲಿ ಬಿಜೆಪಿ ಖಾತೆ ತೆರೆದಿದ್ದು , ತೃಕ್ಕಾಕ್ಕರ ಅಂಬಲಂ ವಾರ್ಡ್​ನಲ್ಲಿ ಪ್ರಮೋದ್ ತೃಕ್ಕಾಕ್ಕರ 151 ಮತಗಳ ಅಂತರದಿಂದ ಗೆದ್ದಿದ್ದಾರೆ. ತಿರುವನಂತಪುರಂ ಜಿಲ್ಲೆ 43 ಪಂಚಾಯತ್​ಗಳ ಪೈಕಿ 26 ವಾರ್ಡ್​ ಗಳಲ್ಲಿ ಎಲ್​​ಡಿಎಫ್ , 12 ಪಂಚಾಯತ್ ಗಳಲ್ಲಿ ಯುಡಿಎಫ್ ಮತ್ತು ನಾಲ್ಕು ಪಂಚಾಯತ್ ಗಳಲ್ಲಿ ಎನ್​​ಡಿಎ ಮುನ್ನಡೆ ಸಾಧಿಸಿದೆ.

ಪಾಲಕ್ಕಾಡ್ ನಗರಸಭೆಯಲ್ಲಿ ಎಲ್​​ಡಿಎಫ್ – 3, ಬಿಜೆಪಿ -10, ಯುಡಿಎಫ್- 3 , ಸ್ವತಂತ್ರ ಅಭ್ಯರ್ಥಿ -1, ವೆಲ್​ಫೇರ್ ಪಾರ್ಟಿ- 1 ಸೀಟು ಗೆದ್ದುಕೊಂಡಿದೆ. ಶೊರ್ನೂರ್ ನಗರಸಭೆಯಲ್ಲಿ ಸಿಪಿಎಂ – 6 , ಬಿಜೆಪಿ- 5, ಯುಡಿಎಫ್- 1 ಸ್ಥಾನ ಗೆದ್ದು ಕೊಂಡಿದೆ. ಕೊಚ್ಚಿ ಕಾರ್ಪರೇಷನ್​​ ನಲ್ಲಿ ಯುಡಿಎಫ್ 28 ಡಿವಿಷನ್​ಗಳಲ್ಲಿ , ಎಲ್​​ಡಿಎಫ್ 21 ಡಿವಿಷನ್​​ಗಳಲ್ಲಿ ಮುನ್ನಡೆ ಸಾಧಿಸಿದೆ. 5 ಡಿವಿಷನ್​ಗಳಲ್ಲಿ ಎನ್​​ಡಿಎ ಮುನ್ನಡೆ ಸಾಧಿಸಿದೆ.ಮಲಪ್ಪುರಂ ಜಿಲ್ಲಾ ಪಂಚಾಯತ್ ನಲ್ಲಿ ಯುಡಿಎಫ್ 16 ಮತ್ತು ಎಲ್​​ಡಿಎಫ್ 5 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.

ಕಣ್ಣೂರು ಕಾರ್ಪರೇಷನ್ ಕಣ್ಣೂರು ಕಾರ್ಪರೇಷನ್​​ನಲ್ಲಿ ಎಲ್​​ಡಿಎಫ್ – ಯುಡಿಎಫ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯೇರ್ಪಟ್ಟಿದೆ. 2 ಸೀಟುಗಳಲ್ಲಿ ಎಲ್​​ಡಿಎಫ್, ಯುಡಿಎಫ್ ಮತ್ತುಎನ್​​ಡಿಎ ತಲಾ ಒಂದು ಸೀಟು ಗೆದ್ದು ಕೊಂಡಿದೆ. ತಳಿಪ್ಪರಂಬ್, ಶ್ರೀಕಂಠಪುರಂ ನಗರ ಸಭೆಗಳನ್ನು ಯುಡಿಎಫ್ ಗೆದ್ದುಕೊಂಡಿದೆ. ಆನಂತೂರ್ , ಕೂತುಪರಂಬ, ಪಯ್ಯನ್ನೂರ್, ಪಾಣೂರ್, ತಲಶ್ಶೇರಿಯಲ್ಲಿ ಎಲ್​​ಡಿಎಫ್ ವಿಜಯ ಸಾಧಿಸಿದೆ.

ಕಾಸರಗೋಡು ನಗರಸಭೆಯಲ್ಲಿ 38 ವಾರ್ಡ್​​ ಗಳಲ್ಲಿ ಯುಡಿಎಫ್, ಎನ್​​ಡಿಎ -14, ಸಿಪಿಎಂ-1, ಲೀಗ್ (ರೆಬೆಲ್ ) -1, ಸಿಪಿಎಂ ಬೆಂಬಲಿತ ಸ್ವತಂತ್ರ ಅಭ್ಯರ್ಥಿ- 1 ಸೀಟು ಮುನ್ನಡೆ ಸಾಧಿಸಿದ್ದಾರೆ.

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ