Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ ಕೊಲೆ ಪ್ರಕರಣ: ನ್ಯಾಯದ ವಿಷಯ ಸುಪ್ರೀಂಕೋರ್ಟಿಗೆ ಬಿಟ್ಟುಬಿಡಿ; ಪ್ರತಿಭಟನಾನಿರತ ವೈದ್ಯರಿಗೆ ಐಎಂಎ ಒತ್ತಾಯ

ವೈದ್ಯಕೀಯ ವೃತ್ತಿಪರರು ಆಕ್ರೋಶಗೊಂಡಿದ್ದಾರೆ. ರೆಸಿಡೆಂಡ್ ವೈದ್ಯರು ಕೋಪ ಮತ್ತು ತೀವ್ರ ದುಃಖದಿಂದ ರಸ್ತೆಗಿಳಿದರು. 24 ಗಂಟೆಗಳ ಕಾಲ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಸೇವೆಗಳನ್ನು ಹಿಂಪಡೆಯಲು ಐಎಂಎ ಕರೆ ನೀಡಿದೆ. ತರುವಾಯ, ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದ್ದು ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದೆ

ಕೋಲ್ಕತ್ತಾ ಕೊಲೆ ಪ್ರಕರಣ: ನ್ಯಾಯದ ವಿಷಯ ಸುಪ್ರೀಂಕೋರ್ಟಿಗೆ ಬಿಟ್ಟುಬಿಡಿ; ಪ್ರತಿಭಟನಾನಿರತ ವೈದ್ಯರಿಗೆ ಐಎಂಎ ಒತ್ತಾಯ
ವೈದ್ಯರ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on: Sep 04, 2024 | 6:25 PM

ದೆಹಲಿ ಸೆಪ್ಟೆಂಬರ್ 04: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ (Kolkata’s RG Kar Hospital) ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟಿಸುತ್ತಿರುವ ವೈದ್ಯರು ತಮ್ಮ ಕರ್ತವ್ಯವನ್ನು ಪುನರಾರಂಭಿಸುವಂತೆ ಮತ್ತು ನ್ಯಾಯದ ಅನ್ವೇಷಣೆಯನ್ನು ಸುಪ್ರೀಂಕೋರ್ಟ್‌ಗೆ (Supreme Court)  ಬಿಡುವಂತೆ ಭಾರತೀಯ ವೈದ್ಯಕೀಯ ಸಂಘದ (IMA) ಅಧ್ಯಕ್ಷರು ಒತ್ತಾಯಿಸಿದ್ದಾರೆ. “ಆರ್‌ಜಿ ಕರ್‌ನ ವೈದ್ಯೆಯ ತ್ಯಾಗವು ರಾಷ್ಟ್ರದ ಆತ್ಮಸಾಕ್ಷಿಯನ್ನು ಕದಲಿಸಿದೆ. ಅವಳು ಉದಯೋನ್ಮುಖ ವೈದ್ಯೆಯಾಗಿದ್ದಳು. ಕೆಳಮಧ್ಯಮ-ವರ್ಗದ ಪೋಷಕರ ಏಕೈಕ ಹೆಣ್ಣು ಮಗುವಾಗಿದ್ದಳು ಎಂಬ ಅಂಶದ ಮೇಲೆ ಇಡೀ ರಾಷ್ಟ್ರದ ಕೋಪ ಮತ್ತು ಹತಾಶೆಯು ಸಮಾನವಾಗಿದೆ. ಇಡೀ ರಾಷ್ಟ್ರವು ಆಕೆಯನ್ನು ತಮ್ಮ ಮಗಳಾಗಿ ದತ್ತು ತೆಗೆದುಕೊಂಡಿದೆ” ಎಂದು ಐಎಂಎ ಪತ್ರವನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಐಎಂಎ ಅಧ್ಯಕ್ಷರು ಸುಪ್ರೀಂಕೋರ್ಟ್‌ನ ಪ್ರತಿಕ್ರಿಯೆಯ ಮಹತ್ವವನ್ನು ಒತ್ತಿ ಹೇಳಿದ್ದು, ಇಡೀ ವೈದ್ಯಕೀಯ ಸಮುದಾಯವು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರಬೇಕು ಎಂದು ಹೇಳಿದರು.

“ವೈದ್ಯಕೀಯ ವೃತ್ತಿಪರರು ಆಕ್ರೋಶಗೊಂಡಿದ್ದಾರೆ. ರೆಸಿಡೆಂಡ್ ವೈದ್ಯರು ಕೋಪ ಮತ್ತು ತೀವ್ರ ದುಃಖದಿಂದ ರಸ್ತೆಗಿಳಿದರು. 24 ಗಂಟೆಗಳ ಕಾಲ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಸೇವೆಗಳನ್ನು ಹಿಂಪಡೆಯಲು ಐಎಂಎ ಕರೆ ನೀಡಿದೆ. ತರುವಾಯ, ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದ್ದು ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದೆ. ಗೌರವಾನ್ವಿತ ನ್ಯಾಯಾಲಯವು ವೈದ್ಯರಿಗೆ ‘ನಮ್ಮನ್ನು ನಂಬಿರಿ. ನ್ಯಾಯ ಮತ್ತು ಔಷಧ ನಿಲ್ಲಬಾರದು’ ಎಂದು ಹೇಳಿರುವುದಾಗಿ ಐಎಂಎ ಪತ್ರದಲ್ಲಿ ಹೇಳಿದೆ.

“ಭಾರತದ ನಾಗರಿಕರಾಗಿ, ಗೌರವಾನ್ವಿತ ನ್ಯಾಯಾಲಯವು ನೀಡಿದ ಮಾತಿಗೆ ಇಡೀ ವೈದ್ಯ ಸಮೂಹ ಬದ್ಧವಾಗಿರಬೇಕು. ರೋಗಿಗಳ ಆರೈಕೆ ಮತ್ತು ಸುರಕ್ಷತೆಯು ವೈದ್ಯಕೀಯ ವೃತ್ತಿಯ ಪ್ರಧಾನ ಕಾಳಜಿಯಾಗಿದೆ. ಆಧುನಿಕ ಔಷಧದ ಎಲ್ಲಾ ವೈದ್ಯರು ನ್ಯಾಯದ ವಿಷಯವನ್ನು ಭಾರತದ ಗೌರವಾನ್ವಿತ ಸುಪ್ರೀಂಕೋರ್ಟ್‌ಗೆ ಬಿಟ್ಟು ರೋಗಿಗಳ ಆರೈಕೆಗೆ ಮರಳಬೇಕು ”ಎಂದು ಪತ್ರ ಹೇಳಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೆ ಮುನ್ನ ಎಂವಿಎ ಸಿಎಂ ಅಭ್ಯರ್ಥಿಯನ್ನು ಘೋಷಿಸುತ್ತಿಲ್ಲ: ಶರದ್ ಪವಾರ್

ಸಂತ್ರಸ್ತರಿಗೆ ನ್ಯಾಯ ಮತ್ತು ಆರೋಗ್ಯ ವೃತ್ತಿಪರರಿಗೆ ಸುಧಾರಿತ ಭದ್ರತಾ ಕ್ರಮಗಳನ್ನು ಒತ್ತಾಯಿಸಿ ವಿವಿಧ ರಾಜ್ಯಗಳಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.  ಈ ಘಟನೆಯಿಂದ ಬಿಜೆಪಿ ಮತ್ತು ರಾಜ್ಯ ಸರ್ಕಾರದ ನಡುವೆ ಘರ್ಷಣೆ ಉಂಟಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಕರೆ ನೀಡಿದೆ.

ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ, ಪ್ರಕರಣವನ್ನು ಸ್ಥಳೀಯ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?