AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

84ನೇ ವಯಸ್ಸಲ್ಲಿ ಒಲಿದು ಬಂತು ಪದ್ಮಶ್ರೀ; ಮೋದಿ ಭರವಸೆ ನೀಡಿದ್ದರೂ ಬೈಗಾ ಕಲೆಯ ಈ ಅಮ್ಮನಿಗೆ ಸಿಕ್ಕಿಲ್ಲ ಮನೆ

ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಲೋರ್ಹಾ ಗ್ರಾಮದ ಮಣ್ಣು ಮತ್ತು ಅಸ್ಬೆಸ್ಟೋಸ್ ಮನೆಯಲ್ಲಿ ವಾಸಿಸುವ ಬೈಗಾ ಆರ್ಟ್ ಮ್ಯೂರಲ್ ಪೇಂಟರ್, "ನನಗೆ ಪಕ್ಕಾ ಮನೆ ನೀಡುವಂತೆ ನಾನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಇಬ್ಬರಿಗೂ ಕೈ ಜೋಡಿಸಿ ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ

84ನೇ ವಯಸ್ಸಲ್ಲಿ ಒಲಿದು ಬಂತು ಪದ್ಮಶ್ರೀ; ಮೋದಿ ಭರವಸೆ ನೀಡಿದ್ದರೂ ಬೈಗಾ ಕಲೆಯ ಈ ಅಮ್ಮನಿಗೆ ಸಿಕ್ಕಿಲ್ಲ ಮನೆ
ಜೋಧಯ್ಯ ಬಾಯಿ ಬೈಗಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 27, 2023 | 6:42 PM

ಲೋರ್ಹಾ (ಮಧ್ಯಪ್ರದೇಶ): 84 ನೇ ವಯಸ್ಸಿನಲ್ಲಿ, ಕೂಲಿ-ಪೇಂಟರ್ ಜೋಧಯ್ಯ ಬಾಯಿ (Jodhaiya Bai) ಬೈಗಾ ‘ಅಮ್ಮ’ ಅವರಿಗೆ ಈ ವರ್ಷ ಪದ್ಮಶ್ರೀ (Padma Shri) ಪ್ರಶಸ್ತಿ ಒಲಿದು ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಭರವಸೆಯ ಹೊರತಾಗಿಯೂ  ಕಾಂಕ್ರೀಟ್ ಮನೆಗಾಗಿ ಅವರ ಕಾಯುವಿಕೆ ಮುಂದುವರೆದಿದೆ. ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಲೋರ್ಹಾ ಗ್ರಾಮದ ಮಣ್ಣು ಮತ್ತು ಅಸ್ಬೆಸ್ಟೋಸ್ ಮನೆಯಲ್ಲಿ ವಾಸಿಸುವ ಬೈಗಾ ಆರ್ಟ್ ಮ್ಯೂರಲ್ ಪೇಂಟರ್, “ನನಗೆ ಪಕ್ಕಾ ಮನೆ ನೀಡುವಂತೆ ನಾನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಇಬ್ಬರಿಗೂ ಕೈ ಜೋಡಿಸಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ. 10 ತಿಂಗಳ ಹಿಂದೆ ದೆಹಲಿಯಲ್ಲಿ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿದಾಗ ಮನೆಯ ಭರವಸೆ ನೀಡಲಾಗಿತ್ತು. ನಾನು ಮೋದಿಜಿಯನ್ನು ತಬ್ಬಿಕೊಂಡೆ ಮತ್ತು ಪಕ್ಕಾ ಮನೆ ಇಲ್ಲದಿರುವ ಬಗ್ಗೆ ನನ್ನ ನೋವನ್ನು ಹಂಚಿಕೊಂಡಿದ್ದೇನೆ.ಅವರು ನನಗೆ ಮನೆ ನೀಡುವುದಾಗಿ ಭರವಸೆ ನೀಡಿದರು” ಅಂತಾರೆ ಜೋಧಯ್ಯ ಬಾಯಿ.

“ನಾನು ಅಂದಿನಿಂದ ಉಮಾರಿಯಾ ಮತ್ತು ರಾಜ್ಯದ ರಾಜಧಾನಿ ಭೋಪಾಲ್‌ನಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ್ದೇನೆ. ಆದರೆ ಪ್ರಯೋಜನವಾಗಲಿಲ್ಲ ಎಂದಿದ್ದಾರೆ ಅವರು. ಈ ವರ್ಷ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀಗೆ ಆಯ್ಕೆಯಾದ 91 ವ್ಯಕ್ತಿಗಳ ಪೈಕಿ ಇವರೂ ಒಬ್ಬರಾಗಿದ್ದಾರೆ.

ಇದನ್ನೂ ಓದಿ:ಸದನದಲ್ಲಿ ChatGPT ಬಳಸಿ ಬರೆದ ಭಾಷಣ ಓದಿದ ಅಮೆರಿಕದ ಶಾಸಕ ಜೇಕ್ ಆಚಿನ್‌ಕ್ಲೋಸ್

ಇವರ ಇಬ್ಬರು ಪುತ್ರರು ಕಾರ್ಮಿಕರಾಗಿದ್ದಾರೆ. ಇವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಭಾಗವಾಗಿ ಮನೆಗಳನ್ನು ಹೊಂದಿದ್ದು, ಜೋಧಯ್ಯ ಬಾಯಿ ಅಲ್ಲೇ ಪಕ್ಕದಲ್ಲಿ ವಾಸಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ಆವಾಜ್ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಇಲ್ಲ, ಆದರೆ ಅವರ ಪುತ್ರರು ಪ್ರಯೋಜನ ಪಡೆದಿದ್ದಾರೆ. ಸಬ್ಸಿಡಿ ಸಹಿತ LPG ಮತ್ತು ಇತರ ಯೋಜನೆಗಳ ಅಡಿಯಲ್ಲಿ ಪಿಂಚಣಿಯ ಪ್ರಯೋಜನಗಳನ್ನು ಅವರು ಪಡೆದುಕೊಂಡಿದ್ದಾರೆ. ಆದರೆ ಪ್ರಧಾನ ಮಂತ್ರಿ ಆವಾಸ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪಂಚಾಯತ್ ಹಿರಿಯ ಅಧಿಕಾರಿ ಕೆಕೆ ರೈಕ್ವಾರ್ ಹೇಳಿದ್ದಾರೆ.

ಅವರು 2019 ರಲ್ಲಿ ವರ್ಣಚಿತ್ರಕಾರರಾಗುವ ಮೊದಲು ಅವರು ತಮ್ಮ ಜೀವನದ ದಶಕಗಳನ್ನು ಕಟ್ಟಡ ಕಾರ್ಮಿಕರಾಗಿ ಕಳೆದರು. ಇದರ ನಡುವೆ ದೇಸೀ ಮದ್ಯವನ್ನು ಸಹ ಮಾರಾಟ ಮಾಡುತ್ತಿದ್ದರು. ಅವರು 70 ವರ್ಷದವರಾಗಿದ್ದಾಗ ಅವರಿಗಿಂತ 20 ವರ್ಷ ಕಿರಿಯ ಆಶಿಶ್ ಸ್ವಾಮಿ ಅವರಿಂದ ಈ ಕಲೆ ಕಲಿತಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Fri, 27 January 23

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ