AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಗುಡ್ಡಕುಸಿತ; ಕಲ್ಲು-ಮಣ್ಣು ರಸ್ತೆಗೆ ಬೀಳುವ ವೇಗನೋಡಿ ಬೆಚ್ಚಿಬಿದ್ದ ಜನರು

ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದ್ದು, ಎಲ್ಲವನ್ನೂ ಸರಿಯಾಗಿ ಸ್ವಚ್ಛಗೊಳಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು. ಅಲ್ಲಿಯವರೆಗೂ ಜನರು ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯ ಎಂದು ಎಂದು ಜಿಲ್ಲಾಧಿಕಾರಿ

Video: ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಗುಡ್ಡಕುಸಿತ; ಕಲ್ಲು-ಮಣ್ಣು ರಸ್ತೆಗೆ ಬೀಳುವ ವೇಗನೋಡಿ ಬೆಚ್ಚಿಬಿದ್ದ ಜನರು
ಉತ್ತರಾಖಂಡ್​ನಲ್ಲಿ ಗುಡ್ಡ ಕುಸಿತ
TV9 Web
| Updated By: Lakshmi Hegde|

Updated on:Aug 24, 2021 | 10:52 AM

Share

ಉತ್ತರಾಖಂಡ್​​ನಲ್ಲಿ ಒಂದೇ ಸಮನೆ ಭೂಕುಸಿತ, ಗುಡ್ಡಕುಸಿತ (Landslide) ಉಂಟಾಗುತ್ತಿದೆ. ಇದೀಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 9ರ ತನಕಪುರ-ಚಂಪಾವತ್ ಮಾರ್ಗದಲ್ಲಿರುವ ಗುಡ್ಡದ ಬಹುದೊಡ್ಡ ಭಾಗ ಕುಸಿದು ರಸ್ತೆಗೆ ಬಿದ್ದ ವಿಡಿಯೋ ವೈರಲ್​ ಆಗಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ವಾಹನಗಳು ಅಲ್ಲೇ ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಗುಡ್ಡ ಕುಸಿತದ ದೃಶ್ಯ ಅದೆಷ್ಟು ಭೀಕರವಾಗಿದೆಯೆಂದರೆ, ಮಣ್ಣು, ಕಲ್ಲು..ಬುಡಸಮೇತ ಕಿತ್ತುಬಿದ್ದ ಮರಗಳೆಲ್ಲ ಜಲಪಾತದಷ್ಟೇ ವೇಗವಾಗಿ ರಸ್ತೆಗೆ ಬೀಳುತ್ತಿವೆ. ರಸ್ತೆಗೆ ಬಿದ್ದ ಮಣ್ಣು-ಕಲ್ಲುಗಳಿಂದಾಗಿ ಅಲ್ಲಿ ಸಂಚಾರಕ್ಕೆ ತಡೆಯಾಗಿದೆ.

ಗುಡ್ಡ ಕುಸಿತ ಉಂಟಾಗುವ ಹೊತ್ತಲ್ಲಿ ಕೆಲವು ವಾಹನಗಳು ಅದೇ ಮಾರ್ಗದಲ್ಲಿ ಹೊರಟಿದ್ದವು. ಅವೆಲ್ಲವೂ ರಸ್ತೆಯಲ್ಲಿ ಹಿಂದೆ ಬಂದು ನಿಂತಿವೆ. ಹಾಗೇ, ಕೆಲವು ಕಾರುಗಳ ಚಾಲಕರು, ಯೂ ಟರ್ನ್​ ತೆಗೆದುಕೊಂಡು ಅಲ್ಲಿಂದ ಹೊರಟುಹೋಗಿದ್ದಾರೆ.  ಇದು ತುಂಬ ಅಪಾಯಕಾರಿಯಾದ ಭೂಕುಸಿತ ಎಂದು ಅಲ್ಲಿದ್ದವರೊಬ್ಬರು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಸದ್ಯ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲುಗಳ ಅವಶೇಷಗಳನ್ನ ತೆಗೆಯುವವರೆಗೂ ಈ ರಸ್ತೆ ಬಂದ್​ ಇರುತ್ತದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಸೂಚನೆ ನೀಡಿದೆ.

ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದ್ದು, ಎಲ್ಲವನ್ನೂ ಸರಿಯಾಗಿ ಸ್ವಚ್ಛಗೊಳಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು. ಅಲ್ಲಿಯವರೆಗೂ ಜನರು ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯ ಎಂದು ಎಂದು ಜಿಲ್ಲಾಧಿಕಾರಿ ವಿನೀತ್ ತೋಮಾರ್​ ಹೇಳಿದ್ದಾರೆ. ಉತ್ತಾರಖಂಡ್​ನಲ್ಲಿ ಇತ್ತೀಚೆಗೆ ಪದೇಪದೆ ಭೂಕುಸಿತ ಉಂಟಾಗುತ್ತಿದೆ. ಮೊನ್ನೆ ನೈನಿತಾಲ್​​ನಲ್ಲಿ 14ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​​ವೊಂದು ಸೆಕೆಂಡ್​ಗಳ ಅಂತರದಲ್ಲಿ ಅಪಾಯದಿಂದ ಪಾರಾಗಿತ್ತು. ನೋಡನೋಡುತ್ತಿದ್ದಂತೆ ಚಲಿಸುತ್ತಿದ್ದ ಬಸ್​​ನ ಮುಂದೆಯೇ ಗುಡ್ಡ ಕುಸಿದುಬಿದ್ದಿತ್ತು. ಚಾಲಕ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೂ ಆ 14 ಜನರ ಪ್ರಾಣ ಹೋಗುತ್ತಿತ್ತು.

ಇದನ್ನೂ ಓದಿ: Krishna Janmashtami 2021: ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ದಿನಾಂಕ ಮತ್ತು ಶುಭ ಮುಹೂರ್ತ

ಅಂದ್ರಾಬ್​​​ನಲ್ಲಿ ತಾಲಿಬಾನ್​​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರನ್ನು ಕೊಂದ ಸ್ಥಳೀಯ ಹೋರಾಟಗಾರರು

Published On - 10:50 am, Tue, 24 August 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!