AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂಸ್ಥಾನಿ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನ

1991ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ ಮತ್ತು 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2013ರಲ್ಲಿ ಸಂಗೀತ​ ನಾಟಕ​ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಹಿಂದೂಸ್ಥಾನಿ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನ
ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್​. (Image courtesy: facebook.com/iUGMK)
Lakshmi Hegde
|

Updated on:Jan 17, 2021 | 5:32 PM

Share

ಮುಂಬೈ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ರಾಮ್​ಪುರ್​ ಸಹಸ್ವಾನ್ ಘರಾಣೆಯ ಖ್ಯಾತ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್​ (89) ಇಂದು ನಿಧನರಾದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮಧ್ಯಾಹ್ನ 12.37ರ ಹೊತ್ತಿಗೆ ಮುಸ್ತಫಾ ಖಾನ್​ ಕೊನೆಯುಸಿರು ಎಳೆದಿದ್ದಾರೆಂದು ಅವರ ಸೊಸೆ ನಮ್ರತಾ ಗುಪ್ತಾ ಖಾನ್​ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಆರೋಗ್ಯವಾಗಿಯೇ ಇದ್ದರು. ನಮ್ಮ ಮನೆಯಲ್ಲಿ ಅವರನ್ನು ನೋಡಿಕೊಳ್ಳಲು 24 ಗಂಟೆಯೂ ನರ್ಸ್​ ಇರುತ್ತಾರೆ. ಇಂದು ಅವರಿಗೆ ಮಸಾಜ್​ ಮಾಡುತ್ತಿದ್ದಾಗ ವಾಂತಿಯಾಯಿತು. ನಾನು ಕೂಡಲೇ ಹೋದೆ. ಅಷ್ಟರಲ್ಲಿಯೇ ಕಣ್ಣುಗಳು ಮುಚ್ಚಿದ್ದವು.. ನಿಧಾನವಾಗಿ ಉಸಿರಾಡಲು ಶುರು ಮಾಡಿದ್ದರು. ನಾನು ವೈದ್ಯರಿಗೆ ಕರೆ ಮಾಡಿದೆ. ಅವರು ಬರುವಷ್ಟರಲ್ಲಿ ಪ್ರಾಣ ಹೋಗಿತ್ತು ಎಂದು ನಮ್ರತಾ ಗುಪ್ತಾ ಹೇಳಿದ್ದಾರೆ.

ಮಾರ್ಚ್​ 3ಕ್ಕೆ ಖಾನ್​ಗೆ 90ವರ್ಷ ಆಗುತ್ತಿತ್ತು. 2019ರಲ್ಲಿ ಮಿದುಳು ಸ್ಟ್ರೋಕ್​ಗೆ ಒಳಗಾಗಿದ್ದರು. ಆಗ ಅವರ ಎಡಭಾಗಕ್ಕೆ ಪಾರ್ಶ್ವವಾಯು ಆಗಿತ್ತು. ಇದರಿಂದ ದಿನವೂ ಮಸಾಜ್​ ಮಾಡಲಾಗುತ್ತಿತ್ತು. ಅದರ ಹೊರತಾಗಿ ಆರೋಗ್ಯವಾಗಿಯೇ ಇದ್ದ ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದು ಇಡೀ ಕುಟುಂಬಕ್ಕೆ ಶಾಕ್​ ಆಗಿದೆ ಎಂದೂ ಸೊಸೆ ನಮ್ರತಾ ನೋವಿನಿಂದ ಹೇಳಿದ್ದಾರೆ. ತನ್ನ ಮಾವನ ನಿಧನದ ಸುದ್ದಿಯನ್ನು ತಮ್ಮ ಫೇಸ್​ಬುಕ್​ನಲ್ಲೂ ಹಂಚಿಕೊಂಡಿದ್ದಾರೆ. ಖಾನ್​ ಅವರ ಅಂತ್ಯಕ್ರಿಯೆ ಇಂದು ಸಂಜೆಯೇ ಸಂತಾಕ್ರೂಜ್​ ಕಬರ್​ಸ್ತಾನ್​ನಲ್ಲಿ ನಡೆಯಲಿದೆ.

2018ರಲ್ಲಿ ಪದ್ಮವಿಭೂಷಣಕ್ಕೆ ಪಾತ್ರರಾಗಿದ್ದರು ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ 1931ರ ಮಾರ್ಚ್​3ರಂದು ಉತ್ತರ ಪ್ರದೇಶದ ಬದೌನ್​ನಲ್ಲಿ ಜನಿಸಿದ್ದರು. ಇವರಿಗೆ ನಾಲ್ವರು ಕಿರಿಯ ಸಹೋದರರು ಮತ್ತು ಮೂವರು ಸೋದರಿಯರು ಇದ್ದಾರೆ. ಮುಸ್ತಫಾ ಖಾನ್​ರ ತಂದೆ ಉಸ್ತಾದ್ ವಾರಿಸ್​ ಹುಸೇನ್​ ಖಾನ್​ ಅವರ ತಂದೆ, ಉಸ್ತಾದ್ ಮರ್ರೆಡ್​ ಭಕ್ಷ್​ ಕೂಡ ಪ್ರಸಿದ್ಧ ಗಾಯಕರು. ಅಷ್ಟೇ ಅಲ್ಲ, ಇವರ ತಾಯಿ ಸಾಬ್ರಿ ಬೇಗಂ ಅವರು ಮತ್ತೋರ್ವ ಸಂಗೀತ ವಿದ್ವಾಂಸ ಉಸ್ತಾದ್​ ಇನಾಯತ್​ ಹುಸೇನ್​ ಖಾನ್​ರ ಮಗಳು. ಸಂಗೀತ ಕುಟುಂಬದಲ್ಲಿ ಜನಿಸಿದ ಮುಸ್ತಫಾ ಖಾನ್​, ತನ್ನ ತಂದೆ ಉಸ್ತಾದ್ ವಾರಿಸ್​ ಹುಸೇನ್​ ಖಾನ್​ರಿಂದಲೇ ಶಾಸ್ತ್ರೀಯ​ ಸಂಗೀತದ ಪ್ರಥಮ ಪಾಠ ಕಲಿತರು. ಅದಾದ ಬಳಿಕ ತಮ್ಮ ಸೋದರ ಸಂಬಂಧಿ​ ಉಸ್ತಾದ್​ ನಿಸಾರ್​ ಹುಸೇನ್​ ಖಾನ್​ರ ಬಳಿ ಸಂಗೀತಾಭ್ಯಾಸ ಮುಂದುವರಿಸಿದರು.

1991ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ ಮತ್ತು 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2013ರಲ್ಲಿ ಸಂಗೀತ​ ನಾಟಕ​ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಲತಾ ಮಂಗೇಶ್ಕರ್, ಎ.ಆರ್.ರೆಹಮಾನ್ ಶ್ರದ್ಧಾಂಜಲಿ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನಕ್ಕೆ ಸಂಗೀತ ಕ್ಷೇತ್ರದ ಖ್ಯಾತನಾಮರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್​, ಸಂಗೀತ ಸಂಯೋಜಕ ಎ.ಆರ್​.ರೆಹಮಾನ್​ ಮತ್ತಿತರರು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

ಉಸ್ತಾದ್ ಗುಲಾಮ್​ ಮುಸ್ತಫಾ ಖಾನ್​ ಸಾಹೇಬ್​ರ ನಿಧನದಿಂದ ತುಂಬಾ ದುಃಖವಾಗದೆ. ಅವರು ಅತ್ಯದ್ಭುತ ಗಾಯಕರು ಮಾತ್ರವಾಗಿರಲಿಲ್ಲ, ಅತ್ಯುತ್ತಮ ಗುಣಗಳುಳ್ಳವರಾಗಿದ್ದರು. ನನ್ನ ಹತ್ತಿರದ ಸಂಬಂಧಿಯೊಬ್ಬರು ಅವರಿಂದ ಸಂಗೀತ ಕಲಿತಿದ್ದರು ಎಂದು ಲತಾ ಮಂಗೇಶ್ಕರ್​ ನೆನಪಿಸಿಕೊಂಡಿದ್ದಾರೆ. ಎ.ಆರ್​.ರೆಹಮಾನ್ ಅವರೂ ಟ್ವೀಟ್ ಮಾಡಿ, ಮುಸ್ತಫಾ ಖಾನ್​ ಅವರು ನಮ್ಮೆಲ್ಲರಿಗೂ ಅತ್ಯಂತ ಒಳ್ಳೆಯ ಟೀಚರ್ ಆಗಿದ್ದರು ಎಂದು ಹೇಳಿದ್ದಾರೆ.

‘ಮುಸ್ತಫಾ ಖಾನ್​ ನಿಧನದಿಂದ ನನ್ನ ಹೃದಯವೇ ನಿಂತಂತಾಗಿದೆ. ನಮ್ಮ ದೇಶದ ಅತ್ಯಂತ ಗೌರವಾನ್ವಿತ ಮತ್ತು ಬಹುಮುಖ ಗಾಯಕರಲ್ಲಿ ಒಬ್ಬರಾಗಿದ್ದರು. ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ’ ಎಂದು ಉಸ್ತಾದ್​ ಅಮ್ಜಾದ್​ ಅಲಿ ಖಾನ್​ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್

ಸ್ವಾಮಿ ಹರ್ಷಾನಂದರ ಸ್ಮರಣೆ | ಮಗುವಿನಂತೆ ಕರೆಯುತ್ತಿದ್ದ ಮಹಾನ್​ ವ್ಯಕ್ತಿ, ಸಕಲರನ್ನೂ ಗೌರವಿಸುತ್ತಿದ್ದ ಸ್ವಾಮೀಜಿ

Published On - 5:19 pm, Sun, 17 January 21

Follow Us
Lakshmi Hegde
Lakshmi Hegde
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ