ಸಿಡಿದೆದ್ದ ರಾಜಕೀಯ ಪಕ್ಷಗಳಿಗೆ ಕೊರೊನಾ 3ನೇ ಅಲೆ ನೆನಪಿಸಿದ ಅರವಿಂದ್ ಕೇಜ್ರಿವಾಲ್​; ದೆಹಲಿ ಜನರ ಜೀವರಕ್ಷಣೆಗಾಗಿ ಅಪರಾಧ ಮಾಡಿದೆ ಎಂದ ಸಿಎಂ

ನಾನು ಈ ಅಪರಾಧ ಮಾಡಿದ್ದು 2 ಕೋಟಿ ಜನರ ಜೀವ ರಕ್ಷಣೆಗಾಗಿ. ನೀವೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಮರೆತಿದ್ದ ಸಂದರ್ಭದಲ್ಲಿ ನಾನು ಆಕ್ಸಿಜನ್​​ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಇದಕ್ಕಾಗಿ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

ಸಿಡಿದೆದ್ದ ರಾಜಕೀಯ ಪಕ್ಷಗಳಿಗೆ ಕೊರೊನಾ 3ನೇ ಅಲೆ ನೆನಪಿಸಿದ ಅರವಿಂದ್ ಕೇಜ್ರಿವಾಲ್​; ದೆಹಲಿ ಜನರ ಜೀವರಕ್ಷಣೆಗಾಗಿ ಅಪರಾಧ ಮಾಡಿದೆ ಎಂದ ಸಿಎಂ
ಅರವಿಂದ್​ ಕೇಜ್ರಿವಾಲ್​
Follow us
| Updated By: Lakshmi Hegde

Updated on: Jun 26, 2021 | 3:30 PM

ದೆಹಲಿ: ಕೊವಿಡ್​ 19 ಎರಡನೇ ಅಲೆ ಉಲ್ಬಣಗೊಂಡಿದ್ದ ಹೊತ್ತಲ್ಲಿ ದೆಹಲಿ ಸರ್ಕಾರ ತಮ್ಮಲ್ಲಿ ಅಗತ್ಯ ಇರುವುದಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಆಮ್ಲಜನಕ್ಕೆ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂಕೋರ್ಟ್ ರಚಿತ ಸಮಿತಿ ವರದಿ ನೀಡಿದ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್​ ಪಕ್ಷಗಳು ಅರವಿಂದ್​ ಕೇಜ್ರಿವಾಲ್​ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಸಿಎಂ ಅರವಿಂದ್​ ಕೇಜ್ರಿವಾಲ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿವೆ. ಹೀಗಿರುವಾಗ ಟ್ವೀಟ್ ಮಾಡಿರುವ ಅರವಿಂದ್​ ಕೇಜ್ರಿವಾಲ್​, ನಾವು ನಮ್ಮೊಳಗೆ ಹೀಗೇ ಹೊಡೆದಾಡುತ್ತಿದ್ದರೆ ಕೊರೊನಾ ವೈರಾಣು ಗೆಲ್ಲುತ್ತದೆ. ನಾವೆಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಿದರೆ ದೇಶ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಏಪ್ರಿಲ್​ 25ರಿಂದ ಮೇ 10ರವರೆಗೆ ಕೊವಿಡ್​ 19 ಸಾಂಕ್ರಾಮಿಕದ ಎರಡನೇ ಅಲೆ ತೀವ್ರ ಉತ್ತುಂಗದಲ್ಲಿ ಇತ್ತು. ಈ ಹೊತ್ತಲ್ಲಿ ದೆಹಲಿಯಲ್ಲಿ ತೀವ್ರವಾದ ಆಮ್ಲಜನಕ ಕೊರತೆಯಿದೆ ಎಂದು ಸರ್ಕಾರ ಹೇಳಿತ್ತು. ಆದರೆ ದೆಹಲಿ ಸರ್ಕಾರ ಇಲ್ಲಿನ ಅಗತ್ಯಕ್ಕಿಂತ 4 ಪಟ್ಟು ಜಾಸ್ತಿ ಆಮ್ಲಜನಕ್ಕೆ ಬೇಡಿಕೆಯಿಟ್ಟಿತ್ತು ಎಂದು ಸುಪ್ರೀಂಕೋರ್ಟ್​ ರಚಿತ, ಏಮ್ಸ್ ನಿರ್ದೇಶಕ ರಣ್​ದೀಪ್ ಗುಲೇರಿಯಾ ನೇತೃತ್ವದ, ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ, ಮ್ಯಾಕ್ಸ್ ಹೆಲ್ತ್‌ಕೇರ್ ನಿರ್ದೇಶಕ ಸಂದೀಪ್ ಬುದ್ಧಿರಾಜ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್​ರನ್ನೊಳಗೊಂಡ ಸಮಿತಿ ವರದಿ ನೀಡಿದೆ. ಅಷ್ಟೇ ಅಲ್ಲ, ದೆಹಲಿಗೆ ಅಗತ್ಯಕ್ಕಿಂತಲೂ ಜಾಸ್ತಿ ಆಕ್ಸಿಜನ್​ ಪೂರೈಕೆ ಮಾಡಿರುವ ಕಾರಣಕ್ಕೆ ಉಳಿದ ಸುಮಾರು 12 ರಾಜ್ಯಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ನೀಡಲು ತೀರ ಕಷ್ಟಪಡುವಂತಾಯ್ತು ಎಂದೂ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸದ್ಯ ಬಿಜೆಪಿ, ಕಾಂಗ್ರೆಸ್​ ಎರಡೂ ಪಕ್ಷಗಳು ದೆಹಲಿ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿವೆ. ಆದರೆ ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳದ ಅರವಿಂದ್​ ಕೇಜ್ರಿವಾಲ್​ ಇಂದು ಟ್ವೀಟ್ ಮಾಡಿ, ನಿಮ್ಮ ಆಕ್ಸಿಜನ್​ ಹೋರಾಟಗಳು ಮುಗಿದಿದ್ದರೆ ನಾವೆಲ್ಲ ಸೇರಿ ಮಾಡುವ ಕೆಲಸ ಬೇರೆ ಇದೆ..ಕೊವಿಡ್​ 19 ಎರಡನೇ ಅಲೆಯಲ್ಲಿ ಅದೆಷ್ಟರ ಮಟ್ಟಿಗೆ ಆಕ್ಸಿಜನ್ ಕೊರತೆ ಎದುರಾಯಿತೆಂದು ಎಲ್ಲರಿಗೂ ಗೊತ್ತಿದೆ. ಆಮ್ಲಜನಕವಿಲ್ಲದೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ಮೂರನೇ ಅಲೆ ಬರುವುದಕ್ಕೂ ಮೊದಲು ಆಮ್ಲಜನಕದ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು. ಎರಡನೇ ಅಲೆಯಲ್ಲಿ ಆಗಿದ್ದೇ, ಮೂರನೇ ಅಲೆಯಲ್ಲಿ ಮರುಕಳಿಸಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ಆಮ್ಲಜನಕಕ್ಕೆ ಅಗತ್ಯಕ್ಕಿಂತ ಜಾಸ್ತಿ ಬೇಡಿಕೆ ಇಟ್ಟಿದ್ದು ಹೌದು ಎಂದು ಈಗಾಗಲೇ ಒಪ್ಪಿಕೊಂಡಿರುವ ಅರವಿಂದ್ ಕೇಜ್ರಿವಾಲ್​, ನಾನು ಈ ಅಪರಾಧ ಮಾಡಿದ್ದು 2 ಕೋಟಿ ಜನರ ಜೀವ ರಕ್ಷಣೆಗಾಗಿ. ನೀವೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಮರೆತಿದ್ದ ಸಂದರ್ಭದಲ್ಲಿ ನಾನು ಆಕ್ಸಿಜನ್​​ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಇದಕ್ಕಾಗಿ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೇನೆ. ಅದೆಷ್ಟೋ ಜನರು ಆಕ್ಸಿಜನ್ ಕೊರತೆಯಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಸಂಕಟದಲ್ಲಿದ್ದಾರೆ. ಅವರನ್ನೂ ಸುಳ್ಳುಗಾರರು ಎಂದು ಕರೆಯಬೇಡಿ. ತುಂಬ ನೊಂದುಕೊಳ್ಳುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.

ಇದನ್ನೂ ಓದಿ: Boat Catches Fire : ಮತ್ಸ್ಯಕಾ ಮೀನುಗಾರರ ಬೋಟ್​ಗೆ ಬೆಂಕಿ, ಹಡಗು ಸಂಪೂರ್ಣ ಭಸ್ಮ