AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: 8 ದಿನವಾದರೂ ಸಿಗಲಿಲ್ಲ ನಿಶಾಂತ್ ಸುಳಿವು.. ಏನಾದರು ಲೆಫ್ಟಿನೆಂಟ್ ಕಮಾಂಡರ್?

ಎಂಟು ದಿನಗಳ ಹಿಂದೆ ಮಿಗ್-39 ಫೈಟರ್ ಜೆಟ್​ ಪತನದಲ್ಲಿ ನಾಪತ್ತೆಯಾಗಿರುವ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕುರಿತು ಈವರೆಗೂ ಸುಳಿವು ದೊರಕಿಲ್ಲ. ಪಟ್ಟು ಬಿಡದ ಭಾರತೀಯ ನೌಕಾದಳ ಶೋಧ ಮುಂದುವರೆಸಿದೆ.

ಕಾರವಾರ: 8 ದಿನವಾದರೂ ಸಿಗಲಿಲ್ಲ ನಿಶಾಂತ್ ಸುಳಿವು.. ಏನಾದರು ಲೆಫ್ಟಿನೆಂಟ್ ಕಮಾಂಡರ್?
ಸ್ನೇಹಜೀವಿಯಾಗಿದ್ದ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್
guruganesh bhat
|

Updated on:Dec 07, 2020 | 4:51 PM

Share

ಕಾರವಾರ: ಭಾರತೀಯ ನೌಕಾದಳಕ್ಕೆ ಇಂದು ನೌಕಾ ದಿನದ ಸಂಭ್ರಮ. ಆದರೆ ಎಂಟು ದಿನಗಳ ಹಿಂದೆ ನಾಪತ್ತೆಯಾದ ಫೈಟರ್ ಜೆಟ್​ನ ಪೈಲಟ್ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಭಾರತೀಯ ನೌಕಾದಳದ ಅಭಿಮಾನಿಗಳು ಪೈಲಟ್​ರ ಪತ್ತೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಎಂಟು ದಿನ ಆದರೂ ಸುಳಿವಿಲ್ಲ.. ನವೆಂಬರ್ 26ರಂದು ಪತನಗೊಂಡ ಮಿಗ್-29 ಫೈಟರ್ ಜೆಟ್​ನಿಂದ ಸಮುದ್ರಕ್ಕೆ ಜಿಗಿದಿದ್ದಾರೆ ಎಂದು ಹೇಳಲಾದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕುರಿತು ಈವರೆಗೂ ಯಾವುದೇ ಸುಳಿವು ದೊರಕಿಲ್ಲ. ಕಳೆದ ಮೇನಲ್ಲಿ ಮದುವೆಯಾಗಿದ್ದ ನಿಶಾಂತ್ ಸಿಂಗ್​ರ ಕುರಿತು ನೌಕಾಪಡೆ ಸಮುದ್ರದ ಇಂಚಿಂಚಲ್ಲೂ ಶೋಧ ಮುಂದುವರೆಸಿದೆ.

ಮಿಗ್-29 ಪತನಗೊಂಡ ತಕ್ಷಣ ಜೆಟ್​ನಲ್ಲಿದ್ದ ಇಬ್ಬರು ಪೈಲಟ್​ಗಳೂ ಸಮುದ್ರಕ್ಕೆ ಜಿಗಿದಿದ್ದಾರೆ. ಆದರೆ ಓರ್ವ ಪೈಲಟ್ ಮಾತ್ರ ನೌಕಾಪಡೆಗೆ ಸಿಕ್ಕಿದ್ದು, ನಿಶಾಂತ್​ರ ಯಾವುದೇ ಸುಳಿವು ಲಭಿಸಿಲ್ಲ. ನಿಶಾಂತ್ ಸಿಂಗ್ ಫೈಟರ್ ಜೆಟ್​ನಿಂದ ಹೊರಬರುವುದನ್ನು ನೋಡಿರುವುದಾಗಿ ನೌಕಾಪಡೆ ರಕ್ಷಿಸಿರುವ ಇನ್ನೋರ್ವ ಪೈಲಟ್ ಹೇಳಿದ್ದಾರೆ. ರಷ್ಯಾ ನಿರ್ಮಿತ 45 ಬಲಶಾಲಿ ಜೆಟ್​ಗಳ ಹನ್ಸಾ ನೌಕಾಪಡೆಗೆ ತೆರಳಿದ್ದ ಮಿಗ್-29ನ ಅವಶೇಷಗಳು ಪತನಗೊಂಡ 50 ಕಿಮೀ ದೂರದಲ್ಲಿ ಪತ್ತೆಯಾಗಿದ್ದವು.

Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು

ನಿಶಾಂತ್ ಮದುವೆಯ ರಜೆ ಅರ್ಜಿ ಹಂಚಿಕೊಂಡ ಅಭಿಮಾನಿಗಳು.. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಮದುವೆ ಮೇ ತಿಂಗಳಲ್ಲಿ ನಿಗದಿಯಾಗಿತ್ತು. ತಮ್ಮ ಮೇಲಧಿಕಾರಿಗೆ ಮದುವೆಗೆ ರಜೆ ಕೋರಿ ಬರೆದ ರಜಾ ಅರ್ಜಿ ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಅವರು ಮರಳಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.

Published On - 1:33 pm, Fri, 4 December 20

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ