ಅಮೇಥಿ ಬಿಟ್ಟು ರಾಯ್​ಬರೇಲಿಗೆ ಹೋದ ರಾಹುಲ್​, ಭಯ ಪಡಬೇಡಿ ಎಂದ ಮೋದಿ

|

Updated on: May 03, 2024 | 12:51 PM

Daro Mat, Bhago Mat: ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಬಿಟ್ಟು ರಾಯ್​ಬರೇಲಿಯಿಂದ ರಾಹುಲ್​ ಗಾಂಧಿ ಸ್ಪರ್ಧಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಭಯಪಟ್ಟು ಓಡಬೇಡಿ ಎಂದಿರುವ ಅವರು ವಯನಾಡಿನಲ್ಲಿ ಸೋಲುವ ಭಯವಿರುವ ಕಾರಣ ರಾಯ್​ಬರೇಲಿಗೆ ಓಡಿ ಹೋಗಿದ್ದಾರೆ, ಈ ರೀತಿ ಮಾಡುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ ಎಂದರು.

ರಾಹುಲ್​ ಗಾಂಧಿ ಅಮೇಥಿ ಬಿಟ್ಟು ರಾಯ್​ಬರೇಲಿಗೆ ಓಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಸ್ಯಾತ್ಮಕವಾಗಿ ಮಾತನಾಡಿದ್ದಾರೆ. ಬರ್ಧಮಾನ್-ದುರ್ಗಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ವಯನಾಡಿನಲ್ಲಿ ಕಾಂಗ್ರೆಸ್​ನ ರಾಜಕುಮಾರ ಸೋಲುತ್ತಾರೆ ಎಂದು ನಾನು ಮೊದಲೇ ಹೇಳಿದ್ದೇನೆ, ವಯನಾಡಿನಲ್ಲಿ ಮತದಾನ ಮುಗಿದ ತಕ್ಷಣ ಬೇರೆ ಕ್ಷೇತ್ರವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ನಾನು ಹೇಳಿದ್ದೆ, ಅದೇ ರೀತಿ ಅಮೇಥಿಯಲ್ಲಿ ಹೆದರಿ ರಾಯ್​ಬರೇಲಿಗೆ ಓಡಿ ಹೋಗಿದ್ದಾರೆ ಭಯ ಪಡಬೇಡಿ, ಓಡಬೇಡಿ ಎಂದು ಮೋದಿ ಹೇಳಿದರು.

39 ನಿಮಿಷಗಳ ಭಾಷಣದಲ್ಲಿ ಮೋದಿ ಅವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ, ಸಂದೇಶಖಾಲಿ, ರಾಮಮಂದಿರ, ರಾಮನವಮಿ, ವೋಟ್ ಜಿಹಾದ್, ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದರು.

ಸಂದೇಶಖಾಲಿಯಲ್ಲಿ ದಲಿತ ಸಹೋದರಿಯರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ಇಲ್ಲಿನ ಸರ್ಕಾರ ಆರೋಪಿಗಳನ್ನು ರಕ್ಷಿಸುವಲ್ಲಿ ನಿರತವಾಗಿದೆ ಎಂದರು. ಎರಡು ಹಂತದ ಮತದಾನದ ನಂತರ ಪ್ರತಿಪಕ್ಷಗಳು ಮೋದಿ ವಿರುದ್ಧ ಮತ ಜಿಹಾದ್ ಮಾಡುತ್ತಿದ್ದಾರೆ. ದೇಶದ ಜನತೆಗೆ ಜಿಹಾದ್ ಅರ್ಥ ಚೆನ್ನಾಗಿ ಅರ್ಥವಾಗಿದೆ ಎಂದರು.

ಮತ್ತಷ್ಟು ಓದಿ: Lok Sabha Election: ರಾಹುಲ್​ ಗಾಂಧಿ ರಾಯ್​ಬರೇಲಿಯಿಂದ ಸ್ಪರ್ಧೆ, ಅಮೇಥಿಯಲ್ಲಿ ಯಾರು?

ವಯನಾಡ್‌ನಿಂದ ಸೋಲಿನ ಭಯದಲ್ಲಿ ಯುವರಾಜ ಅಮೇಥಿಯಿಂದ ಓಡಿ ರಾಯ್‌ಬರೇಲಿ ತಲುಪಿದ ಎಂದು ರಾಹುಲ್‌ಗೆ ಭಯಪಡಬೇಡಿ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಮೂರು ಸವಾಲು
ಕಳೆದ 10 ದಿನಗಳಿಂದ ಕಾಂಗ್ರೆಸ್‌ಗೆ ಮೂರು ಸವಾಲುಗಳನ್ನು ನೀಡುತ್ತಿದ್ದೇನೆ, ಆದರೆ ಅವರು ಮೌನವಾಗಿದ್ದಾರೆ. ಮೊದಲನೆಯದಾಗಿ- ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟ ದೇಶಕ್ಕೆ ಲಿಖಿತ ಭರವಸೆ ನೀಡಬೇಕು.

ಎರಡನೆಯದು- ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಕಸಿದುಕೊಳ್ಳುವುದಿಲ್ಲ ಮತ್ತು ಅದನ್ನು ಧರ್ಮದ ಆಧಾರದ ಮೇಲೆ ಯಾರ ನಡುವೆಯೂ ಹಂಚುವುದಿಲ್ಲ ಎಂದು ಅವರು ದೇಶಕ್ಕೆ ಲಿಖಿತವಾಗಿ ಭರವಸೆ ನೀಡಬೇಕು. ಮೂರನೆಯದು – ರಾಜ್ಯ ಸರ್ಕಾರಗಳು ಇರುವಲ್ಲಿ ಒಬಿಸಿ ಕೋಟಾವನ್ನು ಕಡಿತಗೊಳಿಸಿ ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಿಲ್ಲ ಎಂದು ಅವರು ಲಿಖಿತವಾಗಿ ನೀಡಬೇಕು.

ಕಾಂಗ್ರೆಸ್​ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ
ಈ ಬಾರಿ ಕಾಂಗ್ರೆಸ್ ಮೊದಲಿಗಿಂತ ಕಡಿಮೆ ಸ್ಥಾನಗಳಿಗೆ ಇಳಿಯಲಿದೆ. ಇವರೆಲ್ಲ ಚುನಾವಣೆ ಗೆಲ್ಲಲು ಹರಸಾಹಸ ಪಡುತ್ತಿಲ್ಲ, ದೇಶವನ್ನು ಒಡೆಯಲು ಚುನಾವಣಾ ಕ್ಷೇತ್ರವನ್ನೇ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈಗ ದೇಶಕ್ಕೂ ಅರ್ಥವಾಗುತ್ತಿದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:39 pm, Fri, 3 May 24