ಕಾಂಗ್ರೆಸ್​ನ ಶಾಹಿ ಪರಿವಾರವೇ ಕಾಂಗ್ರೆಸ್​ಗೆ ಓಟು ನೀಡುವುದಿಲ್ಲ: ಇದು ಇತಿಹಾಸವೆಂದ ಪ್ರಧಾನಿ ಮೋದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2024 | 8:39 PM

ಲೋಕಸಭಾ ಚುನಾವಣೆ ಹಿನ್ನೆಲೆ ರಾಜಸ್ಥಾನದ ಜಲೋರ್‌ನಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶಾಹಿ ರಾಜಮನೆತನದವರೇ ಕಾಂಗ್ರೆಸ್‌ಗೆ ಮತ ಹಾಕದಿದ್ದಾಗ ನಿಮ್ಮ ಬಳಿ ಮತ ಕೇಳಲು ಅವರಿಗೆ ಯಾವ ಹಕ್ಕಿದೆ. ಇನ್ನು ಈ ರಾಜಮನೆತನ ವಾಸಿಸುವ ಕ್ಷೇತ್ರದಲ್ಲೇ ಕಾಂಗ್ರೆಸ್​​ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. 

ನವದೆಹಲಿ, ಏಪ್ರಿಲ್​ 21: ಕಾಂಗ್ರೆಸ್​ನ ಶಾಹಿ ಪರಿವಾರವು (shahi parivar) ಕಾಂಗ್ರೆಸ್​ಗೆನೇ ಓಟು ನೀಡುತ್ತಿಲ್ಲ. ಇದು ಇತಿಹಾಸದಲ್ಲೇ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ರಾಜಸ್ಥಾನದ ಜಲೋರ್‌ನಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದ ಪರಿಸ್ಥಿತಿ ಹದಗೆಟ್ಟಿದೆ. ಸ್ವಾತಂತ್ರ್ಯದ ನಂತರ ಶಾಹಿ ರಾಜಮನೆತನವು ದೆಹಲಿಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಮತ ಹಾಕದಂತಹ ಸ್ಥಿತಿ ಕಾಂಗ್ರೆಸ್​ಗೆ ಬಂದಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಶಾಹಿ ರಾಜಮನೆತನದವರೇ ಕಾಂಗ್ರೆಸ್‌ಗೆ ಮತ ಹಾಕದಿದ್ದಾಗ ನಿಮ್ಮ ಮತ ಕೇಳಲು ಅವರಿಗೆ ಯಾವ ಹಕ್ಕಿದೆ. ಇನ್ನು ಈ ರಾಜಮನೆತನ ವಾಸಿಸುವ ಕ್ಷೇತ್ರದಲ್ಲೇ ಕಾಂಗ್ರೆಸ್​​ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನೇರ ಚುನಾವಣೆ ಗೆಲ್ಲಲಾಗದವರಿಂದ ರಾಜ್ಯಸಭೆ ಹಾದಿ: ಸೋನಿಯಾ ಗಾಂಧಿಗೆ ನರೇಂದ್ರ ಮೋದಿ ಕುಟುಕು

ದೆಹಲಿಯಲ್ಲಿ ಶಾಹಿ ಪರಿವಾರ ಕಾಂಗ್ರೆಸ್​ಗೆ ಓಟು ನೀಡುವುದಿಲ್ಲ, ರಾಜಸ್ಥಾನದಲ್ಲಿ ಕಾಂಗ್ರೆಸ್​ನ ನಾಯಕರೇ
ಮನೆಮನೆಗೆ ತೆರಳಿ ಕಾಂಗ್ರೆಸ್​ಗೆ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಇದು ಕಾಂಗ್ರೆಸ್​ನ ಸದ್ಯದ ಪರಿಸ್ಥಿತಿ ಆಗಿದೆ. ಈ ಪಕ್ಷದ ಮೇಲೆ ಹೇಗೆ ಭರವಸೆ ಇಡಲು ಸಾಧ್ಯ ಎಂದು ನೆರೆದಿದ್ದ ಜನರನ್ನು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಯನಾಡಿನಲ್ಲಿ ಮತದಾನ ಮುಗಿಯುತ್ತಿದ್ದಂತೆ ರಾಹುಲ್ ಇನ್ನೊಂದು ಕಡೆ ಸ್ಪರ್ಧಿಸುವುದಾಗಿ ಘೋಷಿಸ್ತಾರೆ: ಮೋದಿ

ಒಂದು ಕಾಲದಲ್ಲಿ 400 ಸ್ಥಾನ ಗಳಿಸಿದ್ದ ಪಕ್ಷ ಈಗ 300ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ವಿಪರ್ಯಾಸ. ಸೋಲಿನ ಭಯದಿಂದ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಭಾರತ ಮೈತ್ರಿಕೂಟದಲ್ಲಿರುವ ಪಕ್ಷಗಳು ಪರಸ್ಪರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಪಕ್ಷಗಳು ಹೆಸರಿಗೆ ಮಾತ್ರ ಮೈತ್ರಿ ಮಾಡಿಕೊಂಡಿವೆ ಎಂದು ಹಿರಿಹಾಯ್ದಿದ್ದಾರೆ.

ದೇಶಕ್ಕೆ ಕಾಂಗ್ರೆಸ್ ಸರ್ಕಾರದ ಅಗತ್ಯವಿಲ್ಲ. 2014ರ ಹಿಂದಿನ ಪರಿಸ್ಥಿತಿ ಮತ್ತೆ ದೇಶಕ್ಕೆ ಬೇಕಾಗಿಲ್ಲ. ದುರ್ಬಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಅಥವಾ ಹೋದಾಗಲೆಲ್ಲಾ ಜನರನ್ನು ಬೆದರಿಸುತ್ತದೆ. ಎಲ್ಲರೂ ದೇಶವನ್ನು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಪ್ರಧಾನಿಯಾರೆಂದು ಅವರಿಗೇ ಗೊತ್ತಿಲ್ಲ. ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರ ನಡೆಸುತ್ತಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:31 pm, Sun, 21 April 24