AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಶಿಷ್ಟ ಕಲ್ಯಾಣ ನಿಧಿಯನ್ನು ಗೋವು, ಧಾರ್ಮಿಕ ಕೇಂದ್ರಗಳಿಗೆ ಬಳಕೆ ಮಾಡಿದ ಮಧ್ಯಪ್ರದೇಶದ ಸರ್ಕಾರ

ಕೇಂದ್ರ ಸರ್ಕಾರದ ಅನುದಾನಿತ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕಾಗಿ ಇರುವ ನಿಧಿಯನ್ನು ಮಧ್ಯಪ್ರದೇಶ ಸರ್ಕಾರ ಧಾರ್ಮಿಕ ಕೇಂದ್ರಗಳು ಮತ್ತು ಮ್ಯೂಸಿಯಂ ಅಭಿವೃದ್ಧಿ, ಗೋವುಗಳ ಕಲ್ಯಾಣಕ್ಕೆ ಬಳಕೆ ಮಾಡಿಕೊಂಡಿರುವ ಅಂಶ ಬಹಿರಂಗವಾಗಿದೆ.

ಪರಿಶಿಷ್ಟ ಕಲ್ಯಾಣ ನಿಧಿಯನ್ನು ಗೋವು, ಧಾರ್ಮಿಕ ಕೇಂದ್ರಗಳಿಗೆ ಬಳಕೆ ಮಾಡಿದ ಮಧ್ಯಪ್ರದೇಶದ ಸರ್ಕಾರ
ಗೋವುಗಳು
Follow us
ನಯನಾ ರಾಜೀವ್
|

Updated on: Jul 23, 2024 | 10:11 AM

ಮಧ್ಯಪ್ರದೇಶ ಸರ್ಕಾರವು ಪರಿಶಿಷ್ಟ ಕಲ್ಯಾಣ ನಿಧಿಯನ್ನು ಗೋವು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಬಳಕೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್​ ವರದಿ ಸಿದ್ಧಪಡಿಸಿದೆ. ಹಸುಗಳ ಕಲ್ಯಾಣಕ್ಕೆ (ಗೋ ಸಂವರ್ಧನ್ ಮತ್ತು ಪಶು ಸಂವರ್ಧನ್) 252 ಕೋಟಿ ರೂ. ಮೀಸಲಿಟ್ಟಿದ್ದು, ಎಸ್‌ಸಿ/ಎಸ್‌ಟಿ ಉಪ ಯೋಜನೆಯಿಂದ 95.76 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹಸುಗಳ ಕಲ್ಯಾಣ ನಿಧಿ ಕಳೆದ ವರ್ಷ ಸುಮಾರು 90 ಕೋಟಿ ರೂ. ಏರಿಕೆಯಾಗಿದೆ.

ಆರು ಧಾರ್ಮಿಕ ಕ್ಷೇತ್ರಗಳ ಪುನರಾಭಿವೃದ್ಧಿಗಾಗಿ, ಪ್ರಸಕ್ತ ಹಣಕಾಸು ವರ್ಷಗಳಲ್ಲಿ ಸುಮಾರು ಅರ್ಧದಷ್ಟು ಹಣವನ್ನು SC/ST ಉಪ ಯೋಜನೆಯಿಂದ ಮೀಸಲಿಡಲಾಗಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರವು ಶ್ರೀ ದೇವಿ ಮಹಾಲೋಕ್, ಸೆಹೋರ್‌ನ ಸಲ್ಕಾನ್‌ಪುರ, ಸಂತ ಶ್ರೀ ರವಿದಾಸ್ ಮಹಲೋಕ್, ಸಾಗರ್, ಶ್ರೀ ರಾಮರಾಜ ಮಹಾಲೋಕ್ ಓರ್ಚಾ, ಶ್ರೀ ರಾಮಚಂದ್ರ ವನವಾಸಿ-ಮಹಾಲೋಕ್, ಚಿತ್ರಕುಟ್ ಮತ್ತು ಮಾಜಿ ಪ್ರಧಾನಿಯವರ ಸ್ಮಾರಕವನ್ನು ಅಭಿವೃದ್ಧಿಪಡಿಸಲು 109 ಕೋಟಿ ರೂ. ಘೋಷಿಸಿತು.

ಆರು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಬಳಸಲಾದ ಅರ್ಧದಷ್ಟು ಹಣವನ್ನು ಕೂಡಾ ಎಸ್​​ಸಿ,ಎಸ್ಟಿ ಉಪಯೋಜನೆಯಿಂದ ಬಳಸಿಕೊಳ್ಳಲಾಗಿದೆ. ಮಧ್ಯಪ್ರದೇಶವು ಕರ್ನಾಟಕದ ಬಳಿಕ ಎಸ್​ಸಿಎಸ್ಟಿ ನಿಧಿಯನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿರುವ ಎರಡನೇ ರಾಜ್ಯವಾಗಿದೆ. ಕರ್ನಾಟಕ ಸರ್ಕಾರ ಕಲ್ಯಾಣ ಯೋಜನೆಗಳಿಗಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಈ ಉಪಯೋಜನೆಯಿಂದ ವರ್ಗಾಯಿಸಲಾಗಿತ್ತು.

ದುರ್ಬಲ ವರ್ಗಗಳ ಶಿಕ್ಷಣ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸಲು ರಾಜ್ಯಗಳಿಗೆ ಒದಗಿಸುವ ಸಂವಿಧಾನದ 46 ನೇ ವಿಧಿಯ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು 1974 ರಲ್ಲಿ ಎಸ್ಟಿ ಉಪ ಯೋಜನೆ ಮತ್ತು 1979-80 ರಲ್ಲಿ ಎಸ್ಸಿ ಉಪ ಯೋಜನೆಯನ್ನು ಪರಿಚಯಿಸಲಾಯಿತು.

ಮತ್ತಷ್ಟು ಓದಿ: ಗೋಶಾಲೆಗೆ ಅನುದಾನದ ಕೊರತೆ; ಗೋವುಗಳ ದೈನಂದಿನ ನೆರವಿನ ಹಣ ಹೆಚ್ಚಿಸುವಂತೆ ಶಿವಲಿಂಗಾನಂದ ಶ್ರೀಗಳಿಂದ ಸರ್ಕಾರಕ್ಕೆ ಮನವಿ

ದೇವಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಗೋಶಾಲೆಗಳ ನಿರ್ಮಾಣಕ್ಕೆ ಎಸ್‌ಸಿ/ಎಸ್‌ಟಿ ಉಪ ಯೋಜನೆ (ಉಪ ಯೋಜನೆ) ಬಳಸುವುದು ಸಮರ್ಥನೀಯವಲ್ಲ ಮತ್ತು ಅನುಮತಿಸುವುದಿಲ್ಲ ಎಂದು ಬುಡಕಟ್ಟು ವ್ಯವಹಾರಗಳ ತಜ್ಞ ವಿನೇಶ್ ಝಾ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ