Crime News: ಮೂಢನಂಬಿಕೆಯಿಂದ ಪ್ರಾಣವೇ ಹೋಯ್ತು: ಭೂತ ಓಡಿಸ್ತೀನಿ ಎಂದು ಥಳಿಸಿದ ತಾಂತ್ರಿಕ, ಬಾಲಕ ಸಾವು

|

Updated on: May 24, 2023 | 10:43 AM

ಮೂಢನಂಬಿಕೆಯಿಂದಾಗಿ ಮುಗ್ಧ ಜೀವ ಬಲಿಯಾಗಿದೆ. ತಾಂತ್ರಿಕರೊಬ್ಬರು ಭೂತ ಓಡಿಸ್ತೀನಿ ಎಂದು ಬಾಲಕನೊಬ್ಬನನ್ನು ಥಳಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಘಟನೆ ನಡೆದಿದೆ.

Crime News: ಮೂಢನಂಬಿಕೆಯಿಂದ ಪ್ರಾಣವೇ ಹೋಯ್ತು: ಭೂತ ಓಡಿಸ್ತೀನಿ ಎಂದು ಥಳಿಸಿದ ತಾಂತ್ರಿಕ, ಬಾಲಕ ಸಾವು
ಮೂಢನಂಬಿಕೆ
Image Credit source: East India Story
Follow us on

ಮೂಢನಂಬಿಕೆಯಿಂದಾಗಿ ಮುಗ್ಧ ಜೀವ ಬಲಿಯಾಗಿದೆ. ತಾಂತ್ರಿಕರೊಬ್ಬರು ಭೂತ ಓಡಿಸ್ತೀನಿ ಎಂದು ಬಾಲಕನೊಬ್ಬನನ್ನು ಥಳಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಕವಠೆ ಮಹಾಕಾಲ್‌ನಲ್ಲಿ ಭೂತೋಚ್ಚಾಟನೆಯ ಹೆಸರಿನಲ್ಲಿ 14 ವರ್ಷದ ಬಾಲಕನನ್ನು ತಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ್ದು, ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ. ಘಟನೆಯನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು.

ದೂರಿನ ಪ್ರಕಾರ ಜಿಲ್ಲೆಯ ಕವಠೆ ಮಹಾಂಕಲ್ ನಿವಾಸಿ ಆರ್ಯನ್ ದೀಪಕ್ ಲಾಂಜೆ ಎಂಬುವವರಿಗೆ ಹಲವು ದಿನಗಳಿಂದ ಜ್ವರವಿತ್ತು. ಸಾಕಷ್ಟು ಚಿಕಿತ್ಸೆ ನೀಡಿದರೂ ಪರಿಹಾರ ಸಿಗಲಿಲ್ಲ. ನಂತರ ಲಾಂಗ್ಡೆಯವರ ಕುಟುಂಬವು ಕರ್ನಾಟಕದಲ್ಲಿರುವ ಶಿರಗೂರಿನಲ್ಲಿ ತಾಂತ್ರಿಕ ಅಪ್ಪಾಸಾಹೇಬ್ ಕಾಂಬಳೆ ಅವರ ಬಳಿಗೆ ಕರೆದೊಯ್ದರು.

ಭೂತೋಚ್ಛಾಟನೆ ಮಾಡುತ್ತೇನೆ ಎಂದು ಬಾಲಕನಿಗೆ ಥಳಿಸಿದ್ದಾರೆ, ಇದರಿಂದ ಬಾಲಕನಿಗೆ ತೀವ್ರ ಗಾಯಗಳಾಗಿತ್ತು, ನಂತರ ಕುಟುಂಬವು ಅವರನ್ನು ಶಿರಗೂರಿನಿಂದ ಸುಮಾರು 40 ಕಿಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮೀರಜ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Belagavi News: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು; ಮುಗ್ಧ ಬಾಲಕಿ ಸಾವಿಗೆ ಯಾರು ಹೊಣೆ?

ಈ ಘಟನೆಯ ನಂತರ ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಕಾರ್ಯಕರ್ತರು ಈ ವಿಷಯ ತಿಳಿದ ಅವರು ಮೃತರ ಕುಟುಂಬಸ್ಥರನ್ನು ಹಾಗೂ ಅಂದಿನ ಸಹಾಯಕ ಪೊಲೀಸ್ ನಿರೀಕ್ಷಕ ಜಿತೇಂದ್ರ ಶಹಾನೆ ಅವರನ್ನು ಕವಠೆ ಮಹಾಂಕಲ್ ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿ ದೂರು ದಾಖಲಿಸಿದ್ದಾರೆ.

ಈಗ ಕರ್ನಾಟಕ ಪೊಲೀಸರು ತನಿಖೆ ನಡೆಸಲಿದ್ದಾರೆ. ಕರ್ನಾಟಕದಲ್ಲಿ ಮೂಢನಂಬಿಕೆ ವಿರೋಧಿ ಕಾನೂನು ಇಲ್ಲ, ಇಂತಹ ಪರಿಸ್ಥಿತಿಯಲ್ಲಿ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ತಾಂತ್ರಿಕನ ವಿರುದ್ಧ ಝೀರೋ ಎಫ್‌ಐಆರ್ ದಾಖಲಿಸಲಾಗಿದೆ.

 

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ