AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆಯಾಗಬೇಕಾದವಳನ್ನೇ ಅಪ್ಪ ಮದುವೆಯಾಗಿದ್ದು ಕಂಡು ಸನ್ಯಾಸಿಯಾಗಲು ನಿರ್ಧರಿಸಿದ ಮಗ

ತನ್ನ ಮಗನ ಹೆಂಡತಿಯಾಗಿ, ತಮ್ಮ ಮನೆಗೆ ಸೊಸೆಯಾಗಬೇಕಾದವಳನ್ನೇ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಮದುವೆಯಾಗಿರುವ ಘಟನೆ ನಡೆದಿದೆ. ಇದರಿಂದ ದುಃಖಿತನಾದ ಮಗ ಸನ್ಯಾಸಿಯಾಗಲು ನಿರ್ಧರಿಸಿದ್ದಾನೆ. ಮಹಾರಾಷ್ಟ್ರದ ನಾಶಿಕ್‌ನಲ್ಲಿ ಈ ಘಟನೆ ನಡೆದಿದೆ. ಮಗನ ಮದುವೆಗೆ ಕೆಲವೇ ದಿನಗಳ ಮೊದಲು ಆತ ಮದುವೆಯಾಗಬೇಕಿದ್ದ ಯುವತಿಯನ್ನು ಅಪ್ಪನೇ ಮದುವೆಯಾಗಿಬಿಟ್ಟಿದ್ದಾನೆ. ಇದರಿಂದ ಆಘಾತಗೊಂಡ ಮಗ ಇನ್ನೆಂದೂ ಮದುವೆಯಾಗದಿರಲು ನಿರ್ಧರಿಸಿದ್ದಾನೆ.

ಸೊಸೆಯಾಗಬೇಕಾದವಳನ್ನೇ ಅಪ್ಪ ಮದುವೆಯಾಗಿದ್ದು ಕಂಡು ಸನ್ಯಾಸಿಯಾಗಲು ನಿರ್ಧರಿಸಿದ ಮಗ
Maharashtra Son
ಸುಷ್ಮಾ ಚಕ್ರೆ
|

Updated on: Jan 09, 2025 | 5:20 PM

Share

ನಾಶಿಕ್: ತಾನು ಮದುವೆಯಾಗಬೇಕಿದ್ದ ಹುಡುಗಿಯನ್ನು ತನ್ನ ತಂದೆಯೇ ಮದುವೆಯಾದ ವಿಷಯ ತಿಳಿದು ಆಘಾತಕ್ಕೊಳಗಾದ ಮಗ ಸನ್ಯಾಸಿಯಾಗಲು ನಿರ್ಧರಿಸಿರುವ ಘಟನೆ ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದಿದೆ. ತನ್ನ ಮದುವೆಗೆ ಸ್ವಲ್ಪ ದಿನ ಮೊದಲು ತನ್ನ ಭಾವಿ ಪತ್ನಿಯನ್ನು ತನ್ನ ತಂದೆಯೇ ಮದುವೆಯಾದ ಬಳಿಕ ವ್ಯಕ್ತಿಯೊಬ್ಬ ಸನ್ಯಾಸಿಯಾಗಲು ನಿರ್ಧರಿಸಿದ್ದಾನೆ.

ವಿವರಗಳ ಪ್ರಕಾರ, ಆ ವ್ಯಕ್ತಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದನು. ಅವರು ಸ್ವಲ್ಪ ಸಮಯದ ಹಿಂದೆ ತನ್ನ ಮಗನಿಗೆ ಸೂಕ್ತವಾದ ಜೋಡಿಯನ್ನು ಹುಡುಕಲು ಪ್ರಾರಂಭಿಸಿದರು. ತನ್ನ ಮಗ ಮತ್ತು ಯುವತಿ ಒಪ್ಪಿದ ನಂತರ ಮದುವೆಯನ್ನು ನಿಗದಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯುವುದರಲ್ಲಿತ್ತು. ಆದರೆ, ಮಗನಿಗಾಗಿ ನೋಡಿದ್ದ ಯುವತಿಯ ಮೇಲೆ ಅಪ್ಪನಿಗೇ ಮನಸಾಗಿದ್ದರಿಂದ ಸೊಸೆಯಾಗಬೇಕಾಗಿದ್ದ ಯುವತಿಯನ್ನು ಆತನೇ ಮದುವೆ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾನೆ.

ಇದನ್ನೂ ಓದಿ: Viral: ಸೀಟಿಗಾಗಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ನಡುವೆ ನಡೆಯಿತು ಜಡೆ ಜಗಳ; ವಿಡಿಯೋ ವೈರಲ್‌

ಈ ಘಟನೆ ಮಹಾರಾಷ್ಟ್ರದ ನಾಶಿಕ್‌ನಲ್ಲಿ ನಡೆದಿದ್ದು, ಅಲ್ಲಿ ಆ ವ್ಯಕ್ತಿಯ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆಗ ತನ್ನ ಸೊಸೆಯಾಗಬೇಕಾದವಳನ್ನು ಮಾವನೇ ಮದುವೆಯಾಗಿ ಬಂದಿದ್ದಾನೆ. ತನ್ನ ಹೆಂಡತಿಯಾಗಬೇಕಾಗಿದ್ದ ಯುವತಿಯನ್ನು ತನ್ನ ಅಮ್ಮನ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲವೆಂದು ಆ ಯುವಕ ಸನ್ಯಾಸಿಯಾಗಲು ಮುಂದಾಗಿದ್ದಾನೆ.

ಇದಾದ ನಂತರ ಆ ಯುವಕ ತನ್ನ ಅಪ್ಪನ ಬಗ್ಗೆ ಜಿಗುಪ್ಸೆಗೊಂಡು ಮನೆಗೆ ಹೋಗದೆ ರಸ್ತೆಯ ಬದಿಯಲ್ಲೇ ಜೀವನ ಕಳೆಯುತ್ತಿದ್ದಾನೆ. ರಸ್ತೆಬದಿಯಲ್ಲಿ ಕುಳಿತುಕೊಂಡು, ದೇವಸ್ಥಾನದಲ್ಲಿ ಊಟ ಮಾಡಿ, ರಸ್ತೆಯ ಬದಿಯಲ್ಲೇ ಮಲಗುತ್ತಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?
Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗುತ್ತದೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗುತ್ತದೆ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್