AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLA Slaps Engineer: ನಡುರಸ್ತೆಯಲ್ಲಿ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ! ಇಷ್ಟಕ್ಕೂ ಆ ಅಧಿಕಾರಿ ಮಾಡಿದ್ದೇನು ಗೊತ್ತಾ!?

ಇಬ್ಬರು ಎಂಜಿನಿಯರುಗಳ ಅಚಾತುರ್ಯದಿಂದ ಮುಂಗಾರು ಹಂಗಾಮಿಗೂ ಮುನ್ನ ಮಕ್ಕಳು, ಕುಟುಂಬಸ್ಥರು ರಸ್ತೆಗಿಳಿಯುವಂತಾಗಿದೆ ಎಂಬುದು ಶಾಸಕಿ ಗೀತಾ ಭಾರತ್ ಜೈನ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

MLA Slaps Engineer: ನಡುರಸ್ತೆಯಲ್ಲಿ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ! ಇಷ್ಟಕ್ಕೂ ಆ ಅಧಿಕಾರಿ ಮಾಡಿದ್ದೇನು ಗೊತ್ತಾ!?
ನಡುರಸ್ತೆಯಲ್ಲಿ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ!
ಸಾಧು ಶ್ರೀನಾಥ್​
|

Updated on: Jun 26, 2023 | 10:45 AM

Share

ಮಹಾರಾಷ್ಟ್ರದಲ್ಲಿ (Maharashtra) ಮಹಿಳಾ ಶಾಸಕಿ ಅಧಿಕಾರಿಗಳ ವರ್ತನೆಗೆ ಕೋಪಗೊಂಡಿದ್ದಾರೆ. ಇದರಿಂದ ನಡುರಸ್ತೆಯಲ್ಲಿಯೇ ಎಲ್ಲರೂ ನೊಡನೋಡುತ್ತಿದ್ದಂತೆ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ್ದಾರೆ (MLA Slapping). ಇಷ್ಟಕ್ಕೂ ಆ ಅಧಿಕಾರಿ ಮಾಡಿದ ತಪ್ಪೇನು ಗೊತ್ತಾ!? ಥಾಣೆ ಜಿಲ್ಲೆಯ ಮೀರಾ ಭಯ್ಯಾದರ್ ಎಂಬಲ್ಲಿ (Thane, Maharashtra) ಈ ಘಟನೆ ನಡೆದಿದೆ (Viral Video). ಎಲ್ಲರೂ ನೋಡುತ್ತಿರುವಾಗಲೇ ಮೀರಾ ಭಯ್ಯಾದರ್ ಶಾಸಕಿ ಗೀತಾ ಭರತ್ ಜೈನ್ ಇಬ್ಬರು ಎಂಜಿನಿಯರ್ ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಸಿವಿಲ್ ಎಂಜಿನಿಯರ್ (Engineer) ಮೇಲೆ ಮಹಿಳಾ ಶಾಸಕಿ ಗೀತಾ ಭರತ್ ಜೈನ್ ಅವರು ಕೈ ಕೈ ಮಿಲಾಯಿಸಿದ ಘಟನೆ ನಗರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಮೀರಾ ಭಯ್ಯಾದಾರ್ ನಗರಸಭೆಯಲ್ಲಿನ ಅಕ್ರಮ ಕಟ್ಟಡಗಳ ತೆರವು ಭಾಗವಾಗಿ ಅಧಿಕಾರಿಗಳು ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಿದ್ದರು.

ಇದರಿಂದ ಶಾಸಕರ ಸಿಟ್ಟಿಗೆದ್ದರು. ಇಬ್ಬರು ಎಂಜಿನಿಯರುಗಳ ಅಚಾತುರ್ಯದಿಂದ ಮುಂಗಾರು ಹಂಗಾಮಿಗೂ ಮುನ್ನ ಮಕ್ಕಳು, ಕುಟುಂಬಸ್ಥರು ರಸ್ತೆಗಿಳಿಯುವಂತಾಗಿದೆ ಎಂಬುದು ಶಾಸಕಿ ಗೀತಾ ಭಾರತ್ ಜೈನ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಕಟ್ಟಡಗಳನ್ನು ಹೇಗೆ ನಾಶಪಡಿಸುತ್ತೀರಿ ಎಂದು ಆ ಇಬ್ಬರೂ ಅಧಿಕಾರಿಗಳನ್ನು ಅವರು ರಸ್ತೆಯಲ್ಲೇ ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ಸಿವಿಲ್ ಎಂಜಿನಿಯರ್‌ಗೆ ಅವಮಾನ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೀತಾ ಜೈನ್ ಬಿಜೆಪಿಯಿಂದ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು. ಶಾಸಕರು 2019ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. ಪ್ರಸ್ತುತ ಅವರು ಬಿಜೆಪಿ-ಶಿವಸೇನೆ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್