AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLA Slaps Engineer: ನಡುರಸ್ತೆಯಲ್ಲಿ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ! ಇಷ್ಟಕ್ಕೂ ಆ ಅಧಿಕಾರಿ ಮಾಡಿದ್ದೇನು ಗೊತ್ತಾ!?

ಇಬ್ಬರು ಎಂಜಿನಿಯರುಗಳ ಅಚಾತುರ್ಯದಿಂದ ಮುಂಗಾರು ಹಂಗಾಮಿಗೂ ಮುನ್ನ ಮಕ್ಕಳು, ಕುಟುಂಬಸ್ಥರು ರಸ್ತೆಗಿಳಿಯುವಂತಾಗಿದೆ ಎಂಬುದು ಶಾಸಕಿ ಗೀತಾ ಭಾರತ್ ಜೈನ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

MLA Slaps Engineer: ನಡುರಸ್ತೆಯಲ್ಲಿ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ! ಇಷ್ಟಕ್ಕೂ ಆ ಅಧಿಕಾರಿ ಮಾಡಿದ್ದೇನು ಗೊತ್ತಾ!?
ನಡುರಸ್ತೆಯಲ್ಲಿ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ!
Follow us
ಸಾಧು ಶ್ರೀನಾಥ್​
|

Updated on: Jun 26, 2023 | 10:45 AM

ಮಹಾರಾಷ್ಟ್ರದಲ್ಲಿ (Maharashtra) ಮಹಿಳಾ ಶಾಸಕಿ ಅಧಿಕಾರಿಗಳ ವರ್ತನೆಗೆ ಕೋಪಗೊಂಡಿದ್ದಾರೆ. ಇದರಿಂದ ನಡುರಸ್ತೆಯಲ್ಲಿಯೇ ಎಲ್ಲರೂ ನೊಡನೋಡುತ್ತಿದ್ದಂತೆ ಸಿವಿಲ್​ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ್ದಾರೆ (MLA Slapping). ಇಷ್ಟಕ್ಕೂ ಆ ಅಧಿಕಾರಿ ಮಾಡಿದ ತಪ್ಪೇನು ಗೊತ್ತಾ!? ಥಾಣೆ ಜಿಲ್ಲೆಯ ಮೀರಾ ಭಯ್ಯಾದರ್ ಎಂಬಲ್ಲಿ (Thane, Maharashtra) ಈ ಘಟನೆ ನಡೆದಿದೆ (Viral Video). ಎಲ್ಲರೂ ನೋಡುತ್ತಿರುವಾಗಲೇ ಮೀರಾ ಭಯ್ಯಾದರ್ ಶಾಸಕಿ ಗೀತಾ ಭರತ್ ಜೈನ್ ಇಬ್ಬರು ಎಂಜಿನಿಯರ್ ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಸಿವಿಲ್ ಎಂಜಿನಿಯರ್ (Engineer) ಮೇಲೆ ಮಹಿಳಾ ಶಾಸಕಿ ಗೀತಾ ಭರತ್ ಜೈನ್ ಅವರು ಕೈ ಕೈ ಮಿಲಾಯಿಸಿದ ಘಟನೆ ನಗರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಮೀರಾ ಭಯ್ಯಾದಾರ್ ನಗರಸಭೆಯಲ್ಲಿನ ಅಕ್ರಮ ಕಟ್ಟಡಗಳ ತೆರವು ಭಾಗವಾಗಿ ಅಧಿಕಾರಿಗಳು ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಿದ್ದರು.

ಇದರಿಂದ ಶಾಸಕರ ಸಿಟ್ಟಿಗೆದ್ದರು. ಇಬ್ಬರು ಎಂಜಿನಿಯರುಗಳ ಅಚಾತುರ್ಯದಿಂದ ಮುಂಗಾರು ಹಂಗಾಮಿಗೂ ಮುನ್ನ ಮಕ್ಕಳು, ಕುಟುಂಬಸ್ಥರು ರಸ್ತೆಗಿಳಿಯುವಂತಾಗಿದೆ ಎಂಬುದು ಶಾಸಕಿ ಗೀತಾ ಭಾರತ್ ಜೈನ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಕಟ್ಟಡಗಳನ್ನು ಹೇಗೆ ನಾಶಪಡಿಸುತ್ತೀರಿ ಎಂದು ಆ ಇಬ್ಬರೂ ಅಧಿಕಾರಿಗಳನ್ನು ಅವರು ರಸ್ತೆಯಲ್ಲೇ ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ಸಿವಿಲ್ ಎಂಜಿನಿಯರ್‌ಗೆ ಅವಮಾನ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೀತಾ ಜೈನ್ ಬಿಜೆಪಿಯಿಂದ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು. ಶಾಸಕರು 2019ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. ಪ್ರಸ್ತುತ ಅವರು ಬಿಜೆಪಿ-ಶಿವಸೇನೆ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ