ನೀಟ್​​ ಪರೀಕ್ಷೆ ಹಗರಣ ಬಹಿರಂಗಗೊಳಿಸಿದ ಸಿಬಿಐ; ಮಹಾರಾಷ್ಟ್ರದ ಕೋಚಿಂಗ್​ ಸೆಂಟರ್​​ನ ಮಹಾ ಮೋಸ ಬಯಲು

ತಮಿಳುನಾಡಿನಲ್ಲಿ ನೀಟ್​ ಪರೀಕ್ಷೆಯಲ್ಲಿ ವಿಫಲವಾಗುವ ಭಯದಿಂದಲೇ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ 17 ವರ್ಷದ ಹುಡುಗಿಯೊಬ್ಬಳು ನೀಟ್​ ಪರೀಕ್ಷೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು. 

ನೀಟ್​​ ಪರೀಕ್ಷೆ ಹಗರಣ ಬಹಿರಂಗಗೊಳಿಸಿದ ಸಿಬಿಐ; ಮಹಾರಾಷ್ಟ್ರದ ಕೋಚಿಂಗ್​ ಸೆಂಟರ್​​ನ ಮಹಾ ಮೋಸ ಬಯಲು
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on:Sep 23, 2021 | 12:36 PM

ದೆಹಲಿ: ನೀಟ್​ ವೈದ್ಯಕೀಯ ಪ್ರವೇಶ ಪರೀಕ್ಷೆ (NEET Medical Entrance Examination)ಯಲ್ಲಿ ದೊಡ್ಡಮಟ್ಟದ ಹಗರಣ ಆಗಿದೆ ಎಂದು ಸಿಬಿಯ ತನಿಖಾ ದಳದ ಮೂಲಗಳು ತಿಳಿಸಿವೆ. ನಿಜವಾದ ಪರೀಕ್ಷಾರ್ಥಿಗಳ ಬದಲಿಗೆ ಅವರ ಹೆಸರಲ್ಲಿ ಬೇರೊಬ್ಬರಿಂದ ಪರೀಕ್ಷೆ ಬರೆಸುವ (ಪ್ರಾಕ್ಸೀಸ್​​ಗಳಿಂದ ) ಪ್ರಯತ್ನಗಳು ನಡೆದಿದ್ದಲ್ಲದೆ, ಅಭ್ಯರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಭರವಸೆ ನೀಡಿ, 50 ಲಕ್ಷ ರೂ. ಶುಲ್ಕ ನೀಡಲು ಕೇಳಲಾಗಿದೆ ಎಂದು ಸಿಬಿಐ  (CBI)ಹೇಳಿದೆ. ಈಗಾಗಲೇ ನೀಟ್​ ಪರೀಕ್ಷೆಯಲ್ಲಿ ಫೇಲ್​ ಆಗುವ ಭಯದಿಂದ ತಮಿಳುನಾಡಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಸಿಬಿಐ ಇಂಥದ್ದೊಂದು ಹಗರಣದ ಬಗ್ಗೆ ಮಾಹಿತಿ ನೀಡಿದೆ. 

ಮಹಾರಾಷ್ಟ್ರ ಮೂಲದ ಆರ್​.ಕೆ.ಎಜ್ಯುಕೇಶನ್​ ಕರಿಯರ್​ ಗೈಡೆನ್ಸ್​ ಸೆಂಟರ್​ ಎಂಬ ಕೋಚಿಂಗ್​ ಸೆಂಟರ್​, ಅದರ ನಿರ್ದೇಶಕ ಪರಿಮಳ್​ ಕೊಟ್ಪಲ್ಲಿವಾರ್​ ಮತ್ತು ಹಲವು ವಿದ್ಯಾರ್ಥಿಗಳ ವಿರುದ್ಧ ಆರೋಪ ಮಾಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.  ಈ ಪರಿಮಳ್​ ಕೊಟ್ಪಲ್ಲಿವಾರ್​ ಸೆ.12ರಂದು ನಡೆಯಲಿರುವ ನೀಟ್​ ಪರೀಕ್ಷೆಗಾಗಿ ಐವರು ಪ್ರಾಕ್ಸಿಗಳನ್ನು (ಪ್ರತಿನಿಧಿಗಳು) ಸಜ್ಜುಗೊಳಿಸಿದ್ದ. ಅದಕ್ಕೂ ಮೊದಲು ನೀಟ್​ ಪರೀಕ್ಷಾರ್ಥಿಗಳಿಗೆ ಸರ್ಕಾರಿ ಉನ್ನತ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಪ್ರವೇಶಾತಿ ಭರವಸೆ ನೀಡುವ ಜತೆ, ಪ್ರತಿಯೊಬ್ಬರಿಗೂ 50 ಲಕ್ಷ ರೂ. ಶುಲ್ಕ ಕೇಳಲಾಗಿತ್ತು. ಇನ್ನು ಅಂಥ ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ, ಹಣ ನೀಡಿದರೆ ನಿಮ್ಮ ಮಕ್ಕಳ ಪರವಾಗಿ ಪ್ರಾಕ್ಸಿಗಳ ಬಳಿ ಪರೀಕ್ಷೆ ಬರೆಸುವ ಭರವಸೆಯನ್ನೂ ನೀಡಿದ್ದ. ಇನ್ನು ಅಂಥ ಪರೀಕ್ಷಾರ್ಥಿಗಳ ಬಳಿ ಪೋಸ್ಟ್ ಡೇಟೆಡ್​ ಚೆಕ್​ ಜತೆಗೆ, ಅವರ 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳ ಒರಿಜಿನಲ್​ ಪ್ರತಿಯನ್ನೇ ಕೊಡುವಂತೆ ಕೇಳಲಾಗಿತ್ತು ಎಂದು ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ಐವರು ಪ್ರಾಕ್ಸಿಗಳು ರೆಡಿ ಆಗಿದ್ದರು. ಆದರೆ ಸಿಬಿಐ ಅವರನ್ನು ಸಾಕ್ಷಿ ಸಮೇತ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಹೀಗಾಗಿ ಅವರು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲಿಲ್ಲ ಎಂದೂ ಹೇಳಲಾಗಿದೆ.  ಇನ್ನು ನಂತರ ಅವರನ್ನು ಹುಡುಕಿ ಬಂಧನ ಮಾಡಲಾಗಿದೆ ಎಂದೂ ಸಿಬಿಐ ಹೇಳಿದೆ.

ತಮಿಳುನಾಡಿನಲ್ಲಿ ನೀಟ್​ ಪರೀಕ್ಷೆಯಲ್ಲಿ ವಿಫಲವಾಗುವ ಭಯದಿಂದಲೇ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ 17 ವರ್ಷದ ಹುಡುಗಿಯೊಬ್ಬಳು ನೀಟ್​ ಪರೀಕ್ಷೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು.  ಅದಕ್ಕೂ ಮೊದಲು 19 ವರ್ಷದ ಹುಡುಗಿ ಸಾವನ್ನಪ್ಪಿದ್ದಳು. ಹೀಗೆ ಪದೇಪದೆ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ವಿಧಾನಸಭೆಯಲ್ಲಿ ನೀಟ್​ ರದ್ದುಗೊಳಿಸುವ ಮಸೂದೆ ಅಂಗೀಕಾರ ಆಗಿದೆ.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ನೀಟ್‌ನಿಂದ ಶಾಶ್ವತ ವಿನಾಯಿತಿ ಕೋರುವ ಮಸೂದೆ ಮಂಡಿಸಿದ ಮುಖ್ಯಮಂತ್ರಿ ಸ್ಟಾಲಿನ್

Freshworks Crorepati Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು

Published On - 12:29 pm, Thu, 23 September 21

ತಾಜಾ ಸುದ್ದಿ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ