AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್​​ ಪರೀಕ್ಷೆ ಹಗರಣ ಬಹಿರಂಗಗೊಳಿಸಿದ ಸಿಬಿಐ; ಮಹಾರಾಷ್ಟ್ರದ ಕೋಚಿಂಗ್​ ಸೆಂಟರ್​​ನ ಮಹಾ ಮೋಸ ಬಯಲು

ತಮಿಳುನಾಡಿನಲ್ಲಿ ನೀಟ್​ ಪರೀಕ್ಷೆಯಲ್ಲಿ ವಿಫಲವಾಗುವ ಭಯದಿಂದಲೇ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ 17 ವರ್ಷದ ಹುಡುಗಿಯೊಬ್ಬಳು ನೀಟ್​ ಪರೀಕ್ಷೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು. 

ನೀಟ್​​ ಪರೀಕ್ಷೆ ಹಗರಣ ಬಹಿರಂಗಗೊಳಿಸಿದ ಸಿಬಿಐ; ಮಹಾರಾಷ್ಟ್ರದ ಕೋಚಿಂಗ್​ ಸೆಂಟರ್​​ನ ಮಹಾ ಮೋಸ ಬಯಲು
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Sep 23, 2021 | 12:36 PM

Share

ದೆಹಲಿ: ನೀಟ್​ ವೈದ್ಯಕೀಯ ಪ್ರವೇಶ ಪರೀಕ್ಷೆ (NEET Medical Entrance Examination)ಯಲ್ಲಿ ದೊಡ್ಡಮಟ್ಟದ ಹಗರಣ ಆಗಿದೆ ಎಂದು ಸಿಬಿಯ ತನಿಖಾ ದಳದ ಮೂಲಗಳು ತಿಳಿಸಿವೆ. ನಿಜವಾದ ಪರೀಕ್ಷಾರ್ಥಿಗಳ ಬದಲಿಗೆ ಅವರ ಹೆಸರಲ್ಲಿ ಬೇರೊಬ್ಬರಿಂದ ಪರೀಕ್ಷೆ ಬರೆಸುವ (ಪ್ರಾಕ್ಸೀಸ್​​ಗಳಿಂದ ) ಪ್ರಯತ್ನಗಳು ನಡೆದಿದ್ದಲ್ಲದೆ, ಅಭ್ಯರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಭರವಸೆ ನೀಡಿ, 50 ಲಕ್ಷ ರೂ. ಶುಲ್ಕ ನೀಡಲು ಕೇಳಲಾಗಿದೆ ಎಂದು ಸಿಬಿಐ  (CBI)ಹೇಳಿದೆ. ಈಗಾಗಲೇ ನೀಟ್​ ಪರೀಕ್ಷೆಯಲ್ಲಿ ಫೇಲ್​ ಆಗುವ ಭಯದಿಂದ ತಮಿಳುನಾಡಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಸಿಬಿಐ ಇಂಥದ್ದೊಂದು ಹಗರಣದ ಬಗ್ಗೆ ಮಾಹಿತಿ ನೀಡಿದೆ. 

ಮಹಾರಾಷ್ಟ್ರ ಮೂಲದ ಆರ್​.ಕೆ.ಎಜ್ಯುಕೇಶನ್​ ಕರಿಯರ್​ ಗೈಡೆನ್ಸ್​ ಸೆಂಟರ್​ ಎಂಬ ಕೋಚಿಂಗ್​ ಸೆಂಟರ್​, ಅದರ ನಿರ್ದೇಶಕ ಪರಿಮಳ್​ ಕೊಟ್ಪಲ್ಲಿವಾರ್​ ಮತ್ತು ಹಲವು ವಿದ್ಯಾರ್ಥಿಗಳ ವಿರುದ್ಧ ಆರೋಪ ಮಾಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.  ಈ ಪರಿಮಳ್​ ಕೊಟ್ಪಲ್ಲಿವಾರ್​ ಸೆ.12ರಂದು ನಡೆಯಲಿರುವ ನೀಟ್​ ಪರೀಕ್ಷೆಗಾಗಿ ಐವರು ಪ್ರಾಕ್ಸಿಗಳನ್ನು (ಪ್ರತಿನಿಧಿಗಳು) ಸಜ್ಜುಗೊಳಿಸಿದ್ದ. ಅದಕ್ಕೂ ಮೊದಲು ನೀಟ್​ ಪರೀಕ್ಷಾರ್ಥಿಗಳಿಗೆ ಸರ್ಕಾರಿ ಉನ್ನತ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಪ್ರವೇಶಾತಿ ಭರವಸೆ ನೀಡುವ ಜತೆ, ಪ್ರತಿಯೊಬ್ಬರಿಗೂ 50 ಲಕ್ಷ ರೂ. ಶುಲ್ಕ ಕೇಳಲಾಗಿತ್ತು. ಇನ್ನು ಅಂಥ ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ, ಹಣ ನೀಡಿದರೆ ನಿಮ್ಮ ಮಕ್ಕಳ ಪರವಾಗಿ ಪ್ರಾಕ್ಸಿಗಳ ಬಳಿ ಪರೀಕ್ಷೆ ಬರೆಸುವ ಭರವಸೆಯನ್ನೂ ನೀಡಿದ್ದ. ಇನ್ನು ಅಂಥ ಪರೀಕ್ಷಾರ್ಥಿಗಳ ಬಳಿ ಪೋಸ್ಟ್ ಡೇಟೆಡ್​ ಚೆಕ್​ ಜತೆಗೆ, ಅವರ 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳ ಒರಿಜಿನಲ್​ ಪ್ರತಿಯನ್ನೇ ಕೊಡುವಂತೆ ಕೇಳಲಾಗಿತ್ತು ಎಂದು ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ಐವರು ಪ್ರಾಕ್ಸಿಗಳು ರೆಡಿ ಆಗಿದ್ದರು. ಆದರೆ ಸಿಬಿಐ ಅವರನ್ನು ಸಾಕ್ಷಿ ಸಮೇತ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಹೀಗಾಗಿ ಅವರು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲಿಲ್ಲ ಎಂದೂ ಹೇಳಲಾಗಿದೆ.  ಇನ್ನು ನಂತರ ಅವರನ್ನು ಹುಡುಕಿ ಬಂಧನ ಮಾಡಲಾಗಿದೆ ಎಂದೂ ಸಿಬಿಐ ಹೇಳಿದೆ.

ತಮಿಳುನಾಡಿನಲ್ಲಿ ನೀಟ್​ ಪರೀಕ್ಷೆಯಲ್ಲಿ ವಿಫಲವಾಗುವ ಭಯದಿಂದಲೇ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ 17 ವರ್ಷದ ಹುಡುಗಿಯೊಬ್ಬಳು ನೀಟ್​ ಪರೀಕ್ಷೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು.  ಅದಕ್ಕೂ ಮೊದಲು 19 ವರ್ಷದ ಹುಡುಗಿ ಸಾವನ್ನಪ್ಪಿದ್ದಳು. ಹೀಗೆ ಪದೇಪದೆ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ವಿಧಾನಸಭೆಯಲ್ಲಿ ನೀಟ್​ ರದ್ದುಗೊಳಿಸುವ ಮಸೂದೆ ಅಂಗೀಕಾರ ಆಗಿದೆ.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ನೀಟ್‌ನಿಂದ ಶಾಶ್ವತ ವಿನಾಯಿತಿ ಕೋರುವ ಮಸೂದೆ ಮಂಡಿಸಿದ ಮುಖ್ಯಮಂತ್ರಿ ಸ್ಟಾಲಿನ್

Freshworks Crorepati Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು

Published On - 12:29 pm, Thu, 23 September 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?